News Kannada
Thursday, June 01 2023
ಶಿವಮೊಗ್ಗ

ಶಿವಮೊಗ್ಗ: ನಗರದ ಜನತೆ ಬದಲಾವಣೆ ಬಯಸಿದ್ದಾರೆ – ಆಯನೂರು ಮಂಜುನಾಥ

BJP candidate Channabasappa speaks
Photo Credit : By Author

ಶಿವಮೊಗ್ಗ: ಈಶ್ವರಪ್ಪ ಅವರ ಮನಃಸ್ಥಿತಿಯ, ಅವರದ್ದೇ ವೈಚಾರಿಕತೆಯ, ಸಿದ್ಧಾಂತದ ವ್ಯಕಿ ಚನ್ನಬಸಪ್ಪ ಎಂದು ಜೆಡಿ ಎಸ್ ಉಮೇದುವಾರ ಆಯನೂರು ಮಂಜುನಾಥ ಹೇಳಿದರು.

ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗಿಂತ ಹೆಚ್ಚೇ ಎನ್ನಬಹುದಾಧ, ತೋಚಿದಂತೆ ಮಾತನಾಡುವ ಬಿಜೆಪಿ ಉಮೇದುವಾರ ಚನ್ನಬಸಪ್ಪ. ಈಶ್ವರಪ್ಪ ಅವರ ತದ್ರೂಪ ಎನ್ನಬಹುದು. ಅವರನ್ನು ಘೋಷಿಸುವುದಾದರೆ ಇಷ್ಟು ದಿನ ಕಾಯುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.

ಶಿವಮೊಗ್ಗ ನಿಷೇಧಾಜ್ಞೆರಹಿತ ನಗರವಾಗಬೇಕು. ಶಾಂತಿ, ಸೌಹಾರ್ದತೆ, ಸಹಬಾಳ್ವೆ ನೆಲೆಸಬೇಕು. ಒಡೆದಿರುವ ಮನಸ್ಸಿಗೆ ಹೊಲಿಗೆ ಹಾಕುವ ಕೆಲಸ ಮಾಡುವೆ ಎಂದರು.

ನಾನು ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ನಗರದ ಜನತೆ ಬದಲಾವಣೆ ಬಯಸಿದ್ದಾರೆ. ಹೊಸ ರಾಜಕೀಯದ ನೀರು ಹರಿಯಬೇಕೆಂದು ಯೋಚಿಸಿದ್ದಾರೆ. ಈ ಎಲ್ಲ ಬದಲಾವಣೆಗೆ ಮುಕ್ತ ಮನಸ್ಸಿನಿಂದ ಜನ ತಯಾರಾಗಿದ್ದಾರೆ ಎಂದರು.

ಎಂ. ಶ್ರೀಕಾಂತ್, ಶಾರದಾ ಪೂರ್ಯಾ ನಾಯ್ಕ್, ರಾಮಕೃಷ್ಣ ಜತೆಗಿದ್ದರು.

See also  ಮೈಸೂರು: ಡಿ.22ಕ್ಕೆ ವಿಶಾಲ್ ನಟನೆಯ ‘ಲಾಠಿ’ ತೆರೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು