News Kannada
Sunday, December 10 2023
ಶಿವಮೊಗ್ಗ

ವಿದ್ಯುತ್ ಕಂಬ ರಿಪೇರಿ ವೇಳೆ ಶಾಕ್: ಓರ್ವ ಸಾವು

One killed in electrocution while repairing electric pole
Photo Credit : News Kannada

ಶಿವಮೊಗ್ಗ: ಭದ್ರಾವತಿಯ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೆಇಟಿ ಕಂಬಗಳನ್ನ ರಿಪೇರಿ ಮಾಡುತ್ತಿದ್ದ ವೇಳೆ ಇಬ್ವರು ಪವರ್ ಮ್ಯಾನ್ ಗಳಿಗೆ ಶಾಕ್ ಹೊಡೆದಿದ್ದು ಒಬ್ಬ ಕಂಬದಲ್ಲೇ ಜೀವ ಬಿಟ್ಟಿದ್ದಾನೆ. ಮತ್ತೋರ್ವ ಜೀವಾಪಾಯದಿಂದ ಪಾರಾಗಿದ್ದಾನೆ.

11 ಕೆವಿ ಕಂಬಹತ್ತಿ ರಿಪೇರಿ ಮಾಡುತ್ತಿದ್ದ ಕಿರಣ್ ಮತ್ತು ಸುನೀಲ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಕಿರಣ್ ಕಂಬದಲ್ಲೇ ಅಸು ನೀಗಿದ್ದಾನೆ. ಸುನೀಲ್ ರನ್ನ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಹಾಲೇಶ್ ಎಂಬ ಪವರ್ ಮ್ಯಾನ್ ವಿನೋಬ ನಗರ ಹೆಚ್ ಇಟಿ ಲೈನ್ ರಿಪೇರಿ ಮಾಡುವಾಗ ಅಸು ನೀಗಿದ್ದ. ಆಗ ಪವರ್ ಮ್ಯಾನ್ ಗಳಿಗೆ ಸುರಕ್ಷತೆ ಇಲ್ಲವೆಂಬ ಕೂಗು ಕೇಳಿ ಬಂದಿತ್ತು. ಇವತ್ತೂ ಅದೇ ಕೂಗು ಕೇಳಿ ಬರುತ್ತಿದೆ.

ಅಂದರೆ ಯಾವ ಸುರಕ್ಷತೆಗಳು ಕಂಡು ಬರುತ್ತಿಲ್ಲ. ಅಂದು ಹಾಲೇಶ್ ಸಾವನ್ಬಪ್ಪಿದ್ದಕ್ಕೆ ಪವರ್ ಮ್ಯಾನ್ ಗಳ ಪ್ರತಿಭಟನೆ ಮಾಡಲು ಹವಣಿಸಿದ್ದರು. ಮೆಸ್ಕಾಂ‌ಅಧಿಕಾರಿ ಬಂದಾಗ ಸುರಕ್ಷತೆ ಧ್ವನಿ ಎತ್ತಲಾಗಿತ್ತು. ಇಂದು ಸಹ ಅದೇ ಧ್ವನಿ ಎತ್ತಲಾಗಿದೆ.

See also  ಪ್ರಧಾನಿ ಮೋದಿ ಹುಟ್ಟುಹಬ್ಬ ; ಜಿಲ್ಲಾ ಯುವ ಕಾಂಗ್ರೆಸ್ ನಿಂದ ಅಣಕು ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು