News Karnataka Kannada
Friday, April 19 2024
Cricket
ಮೈಸೂರು

ಜೂ.5ರಂದು ಮೈಸೂರು ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ

Photo Credit :

ಜೂ.5ರಂದು ಮೈಸೂರು ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ

ಮೈಸೂರು: ಸರ್ಕಾರ ನಡೆಸುತ್ತಿರುವ ರೈತ ವಿರೋಧಿ ಧೋರಣೆಗಳ ವಿರುದ್ಧ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜೂ.5 ರಂದು ರೈತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ಕೊರೋನಾ ಲಾಕ್ ಡೌನ್ ನಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದೆ, ಕೃಷಿ ಉತ್ಪನ್ನಗಳನ್ನು ಬೀದಿ ಬದಿಗಳಲ್ಲಿ ಸುರಿದು ನಷ್ಟ ಅನುಭವಿಸಿದ್ದಾರೆ. ಈಗ ಕೃಷಿ ಚಟುವಟಿಕೆ ಆರಂಭಿಸಲು ಹಣಕಾಸಿನ ಸಮಸ್ಯೆ ಉಂಟಾಗಿದೆ, ಸಹಕಾರಿ ಸಂಸ್ಥೆಗಳ 22ಲಕ್ಷ ರಾಷ್ಟ್ರೀಕೃತ ಬ್ಯಾಂಕ್ ಗಳ 20ಲಕ್ಷ ರೈತರ ಬಾಕಿ ಸಾಲ ಕಟ್ಟಿದವರಿಗೆ ಮಾತ್ರ ಹೊಸ ಸಾಲ ನೀಡುತ್ತೇವೆ ಎನ್ನುತ್ತಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ, ಹಳೆ ಸಾಲ ಮನ್ನಾ ಮಾಡಿ ಕೂಡಲೇ ಎಲ್ಲ ರೈತರಿಗೆ ಹೊಸ ಸಾಲ ನೀಡುವಂತಾಗಬೇಕು.

ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳು ಖಾಸಗಿ ಫೈನಾನ್ಸ್ ಗಳಿಂದ ಆಂದರೆ  ಧರ್ಮಸ್ಥಳ ಹಣಕಾಸು ಸಂಸ್ಥೆ, ಎಲ್ ಅಂಡ್ ಟಿ, ಸಂಜೀವಿನಿ, ಉಜ್ಜೀವನ, ಬಿಎಸ್‍ಎಸ್, ನಬಾರ್ಡ್, ಸೂರ್ಯೋದಯ, ಆಶೀರ್ವಾದ, ಸ್ಪಂದನ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದಾರೆ. ಈ ಸಾಲ ಮರುಪಾವತಿಸಲು ವಸೂಲಾತಿಗೆ ಒತ್ತಡ ತರುತ್ತಿದ್ದಾರೆ, ಈಗ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿರುವಾಗ ಸಾಲ ವಾಪಸಾತಿ ಕಷ್ಟಕರವಾಗಿದೆ, ಈ ಸಾಲ ವಸೂಲಾತಿಗೆ, 2021ರ ಮಾರ್ಚ್ ತನಕ  ತಡೆಹಾಕಬೇಕು.

ಲಕ್ಷಾಂತರ ಯುವಕರು ನಗರಗಳಿಂದ ಹಳ್ಳಿಗಳಿಗೆ ವಾಪಸ್ ಬಂದಿದ್ದಾರೆ ಅವರಿಗೆ ಉದ್ಯೋಗ ಕಲ್ಪಿಸಲು ಎನ್ ಆರ್ ಇ ಜಿ ಯೋಜನೆಯನ್ನು ಕೃಷಿಗೂ ವಿಸ್ತರಿಸಬೇಕು, ಈ ಮೂಲಕ ಕೂಲಿ ಕಾರ್ಮಿಕರ ರಕ್ಷಣೆಗೆ ಒತ್ತು ನೀಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಪತ್ರಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಮುಖಂಡರು ಹೇಳಿದ್ದಾರೆ.

ಪ್ರತಿಭಟನಾ ದಿನದಂದು  ಬೆಳಗ್ಗೆ 11 ಗಂಟೆಗೆ ಮೈಸೂರಿನ ಗನ್ ಹೌಸ್ ಬಳಿ ಇರುವ ಕುವೆಂಪು ಪಾರ್ಕ್ ಬಳಿ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಲಿದ್ದು ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು