ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮತದಾರರ ಕೃತಜ್ಞತ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ನೀಡಿದ ಸನ್ಮಾನದ ಬೆಳ್ಳಿ ಗದೆಯನ್ನ ಸಿಎಂ ಹೆಗಲ ಮೇಲೆ ಹಾಕಿಕೊಂಡು ದುರ್ಯೋದನನ ಶೈಲಿಯಲ್ಲಿ ಜನರಿಗೆ ಫೋಸ್ ಕೊಟ್ಟಿದ್ದು ವಿಶೇಷವಾಗಿತ್ತು.
ಇಂದು ನಂಜನಗೂಡಿನ ಮತದಾರರಿಗೆ ಕಾಂಗ್ರಸ್ ಪಕ್ಷದಿಂದ ಕೃತಜ್ಞತ ಸಮಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಅದೇ ಬೆಳ್ಳಿ ಗದೆಯನ್ನ ಸಿಎಂ ಹೆಗಲ ಮೇಲೆ ಇಟ್ಟುಕೊಂಡು ದುರ್ಯೋಧನ ರೀತಿ ಜನರಿಗೆ ತೋರಿಸುವ ಮೂಲಕ ಕ್ಯಾಮಾರಗಳಿಗೆ ಫೋಸ್ ನೀಡಿ ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಹೇಳುವ ರೀತಿಯಲ್ಲಿ ಜನರಿಗೆ ಹಾಗೂ ವೇದಿಕೆಯ ಮೇಲಿದ್ದ ನಾಯಕರಿಗೂ ಶಾಕ್ ನೀಡಿದರು.