ಮೈಸೂರು: ಇನ್ನು ಮುಂದೆ ಮೈಸೂರು ನಗರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳ ಅಂಚೆ ಕಚೇರಿಯಲ್ಲಿ ಆಧಾರ್ ಅಪ್ಡೇಶನ್ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ. ಬುಧವಾರ ನಗರದ ಯಾದವಗಿರಿ ಅಂಚೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಿ.ಶಿವಯ್ಯ ಅವರು ದೀಪಬೆಳಗುವ ಮೂಲಕ ಚಾಲನೆ ನೀಡಿದರು.
ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಲಭ್ಯವಿರುವ ಕಾರಣ ಸಾರ್ವಜನಿಕರ ಇದರ ಸದುಪಯೋಗಪಡೆದುಕೊಳ್ಳ ಬಹುದಾಗಿದೆ. ಮೈಸೂರು ಅಂಚೆ ವಿಭಾಗದ ವ್ಯಾಪ್ತಿಗೆ ಬರುವ 14 ಅಂಚೆ ಕಚೆೇರಿಗಳಲ್ಲಿ ಈ ಸೇವೆಗೆ ಅವಕಾಶವಿದ್ದು, ಇಲ್ಲಿ ಆಧಾರ್ ಜನಸಂಖ್ಯಾ ಡೆಟಾವನ್ನು ಮಾತ್ರ ಅಪ್ಡೇಟ್ ಮಾಡಲಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಈ-ಮೇಲ್ ವಿಳಾಸವನ್ನು ಅಂಚೆ ಕಚೇರಿಗಳ ಮೂಲಕ ಅಪ್ಡೇಟ್ ಮಾಡಬಹುದಾಗಿದೆ.
ಸೌಲಭ್ಯವು ಮೈಸೂರು ಮುಖ್ಯ ಅಂಚೆ ಕಛೇರಿ, ಸರಸ್ವತಿಪುರಂ ಮುಖ್ಯ ಅಂಚೆ ಕಛೇರಿ, ಲಕ್ಶ್ಮೀಪುರಂ, ಇಟ್ಟಿಗೆಗೂಡು, ಮಾನಸಗಂಗೋತ್ರಿ, ಮೇಟಗಳ್ಳಿ, ಉದಯಗಿರಿ, ವಾಣಿ ವಿಲಾಸ ಮೊಹಲ್ಲಾ, ಯಾದವಗಿರಿ, ಕುವೆಂಪುನಗರ, ಹೆಗ್ಗಡದೇವನಕೋಟೆ, ಹುಣಸೂರು, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ಅಂಚೆ ಕಚೇರಿಯಲ್ಲಿ ದೊರೆಯಲಿದೆ.