ಮೈಸೂರು: ವಿಶ್ವಕಪ್ನಲ್ಲಿ ಭಾರತ ಗೆದ್ದು ಬರಲಿ ಎಂದು ಕ್ರಿಕೆಟ್ ಪ್ರೇಮಿಗಳು ಭಾರತ ತಂಡದ ಆಟಗಾರರ ಹೆಸರಿನಲ್ಲಿ ಜಲಪುರಿ ಪೊಲೀಸರ ಹೆಸರಿನಲ್ಲಿ ಅರ್ಚನೆ ಸಂಕಲ್ಪ ಮತ್ತು ವಿಶೇಷ ಪೂಜೆ ಸಲ್ಲಿಸಿ ವಿಶ್ವಕಪ್ ನಲ್ಲಿ ಭಾರತ ಗೆದ್ದು ಬರಲಿ ಎಂದು ಜೈಕಾರ ಕೂಗಿದರು.
ಈ ವೇಳೆ ಬಿಜೆಪಿ ಯುವ ಮುಖಂಡ ಹಾಗೂ ಕ್ರಿಕೆಟ್ ಅಭಿಮಾನಿ ಲೋಹಿತ್ ಮಾತನಾಡಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುಧ್ಧ ಗೆದ್ದು ಪಾಕಿಸ್ತಾನ ವಿರುದ್ದ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಉತ್ತಮ ಪ್ರದರ್ಶನ ನೀಡಲಿ ಭಾರತ ತಂಡದ ಆಟಗಾರರಿಗೆ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವೂ ಪ್ರಮುಖವಾಗಿದ್ದು ಇಲ್ಲಿಯವರೆಗೂ ಎಲ್ಲಾ ಪಂದ್ಯಾವಳಿಯನ್ನು ಗೆದ್ದುಕೊಂಡು ಬಂದಿದ್ದು ಅದೇ ರೀತಿಯಲ್ಲಿ ವಿಜಯಗಳಿಸಿ ಇತಿಹಾಸ ನಿರ್ಮಿಸುವಂತಾಗಲಿ ಎಂದು ಆಶಿಸಿದರು.
ಈ ಬಾರಿಯ ವಿಶ್ವಕಪ್ ನಲ್ಲಿ ಕೆಲವು ಪಂದ್ಯಗಳು ಮಳೆಯಿಂದ ರದ್ದಾದವು ಇದರಿಂದಾಗಿ ಕೆಲವು ತಂಡಗಳಿಗೆ ತೀರಾ ಅನ್ಯಾಯವಾಯಿತು. ದಕ್ಷಿಣ ಆಫ್ರಿಕಾಗೆ ಮೂರು ಸೋಲಿನ ಬಳಿಕ ಸೆಮಿಫೈನಲ್ಗೆ ಏರಲು ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅಗತ್ಯವಾಗಿತ್ತು. ಆದರೆ ಮಳೆ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನೆಷ್ಟು ಪಂದ್ಯಗಳು ಮಳೆಗೆ ಆಹುತಿಯಾಗುವವೋ ತಿಳಿಯುವುದಿಲ್ಲ. ಇಂತಹ ಮಹತ್ವದ ಟೂರ್ನಿಯಲ್ಲಿ ಮೀಸಲು ದಿನವನ್ನು ನಿಗದಿಪಡಿಸಿರುವುದು ದೊಡ್ಡ ತಪ್ಪು ಪ್ರತಿಯೊಂದು ಪಂದ್ಯಕ್ಕೂ ಮೀಸಲು ದಿನವನ್ನು ನಿಗದಿಪಡಿಸಿದರೆ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇನ್ನುಳಿದ ಪಂದ್ಯಗಳಿಗಾದರೂ ಐಸಿಸಿ ಮೀಸಲು ನಿಗದಿ ಪಡಿಸಲಿ ಎಂದರು.
ಇದೇ ಸಂದರ್ಭದಲ್ಲಿ, ನವೀನ್ ಶೆಟ್ಟಿ, ಕಿರಣ್, ಬಸವರಾಜು, ಶಂಕ್ರಣ್ಣ, ಬಸವರಾಜು, ಪ್ರವೀಣ್ ಶರ್ಮಾಪ್ರವೀಣ್, ಪ್ರಕಾಶ್ ಹಾಗೂ ಇನ್ನಿತರ ಕ್ರೀಡಾ ಪ್ರೇಮಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.