ತಿ.ನರಸೀಪುರ: ಸ್ಕೂಟರ್ ಗೆ ಬೊಲೇರೋ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ತಾಲೂಕಿನ ಆಲಗೂಡು ಗ್ರಾಮದ ದಮ್ಮಯ್ಯನ ಬೊರೆ ಬಳಿ ನಡೆದಿದೆ.
ಪಟ್ಟಣದ ಪರಿವಾರ ಬೀದಿ ನಿವಾಸಿ ಗುರುಪ್ರಸಾದ್(44) ಮೃತಪಟ್ಟ ದುರ್ದೈವಿ. ಇವರು ಪತ್ನಿ ಊರಾದ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಬೆಳಗ್ಗೆ ತಮ್ಮ ಮನೆಗೆ ಸ್ಕೂಟರಲ್ಲಿ ಬರುತ್ತಿದ್ದ ವೇಳೆ ಆಲಗೂಡು ಗ್ರಾಮದ ದಮ್ಮಯ್ಯನ ಬೊರೆ ಬಳಿ ಬೊಲೇರೋ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಗುರುಪ್ರಸಾದ್ ಸ್ಕೂಟರ್ ನಿಂದ ನೆಲಕ್ಕುರುಳಿ ಬಿದ್ದಿದ್ದು, ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ತಿ.ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಆನಂದ್ ಸ್ಥಳದ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.