News Kannada
Thursday, March 30 2023

ಮೈಸೂರು

ಹೆಚ್.ಸಿ ಮಹದೇವಪ್ಪ ನೇತೃತ್ವದಲ್ಲಿ ಮಹತ್ವದ ಸಭೆ

Photo Credit :

ಹೆಚ್.ಸಿ ಮಹದೇವಪ್ಪ ನೇತೃತ್ವದಲ್ಲಿ ಮಹತ್ವದ ಸಭೆ

ಮೈಸೂರು: ಜಿಲ್ಲಾಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರೂ ಆದ ಡಾ. ಹೆಚ್.ಸಿ. ಮಹದೆವಪ್ಪ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಲವಾರು ವಿಷಯಗಳ ಕುರಿತು ಮಹತ್ವದ ಸಭೆ ನಡೆಸಿದರು.

ಆಗಸ್ಟ್ 15 ರಂದು 70ನೇ ಸ್ವಾತಂತ್ಯ್ರ ದಿನಾಚರಣೆ ಹಾಗೂ ಅದರ ಸಿದ್ಧತೆಗಳ ಮತ್ತು ಭದ್ರತೆ ಬಗ್ಗೆ  ಜಿಲ್ಲಾಧಿಕಾರಿ ಶಿಖಾ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಲೋಪದೋಷಗಳಿದ್ದಲ್ಲಿ ಸರಿಪಡಿಸಿಕೊಂಡು ಯಾವುದೇ ಧಕ್ಕೆ ಉಂಟಾಗದಂತೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು.

ನಂತರ ದಸರಾ ಮಹೋತ್ಸವಕ್ಕೆ ಅರಣ್ಯಗಳಿಂದ ಗಜಪಡೆಯನ್ನು ಕರೆತರುವ ಬಗ್ಗೆ, ಹುಣಸೂರು ತಾಲ್ಲೂಕಿನ ನಾಗರ ಹೊಳೆ ಅರಣ್ಯದಂಚಿನಿಂದ ಗಜಪಯಣ ಆರಂಭಿಸುವ ದಿನಾಂಕ ನಿಗದಿಗೊಳಿಸಿ, ಈ ತಿಂಗಳ 18 ರಂದು  ಗಜಪಯಣಕ್ಕೆ ಕಾರ್ಯಕ್ರಮ ರೂಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಆನೆಗಳ ಆರೋಗ್ಯ ಕಾಪಾಡುವ ಅಧಿಕಾರಿಗಳಿಗೆ ಸೂಚನೆಯಿತ್ತರು.

ಸಚಿವರು ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿ ಹಾಗೂ ರಸ್ತೆಗಳ ದುರಸ್ಥಿಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಆದಷ್ಟು ಬೇಗ ಮುಗಿಸಬೇಕು, ಗುಣಮಟ್ಟದ ಕಾಮಗಾರಿಯಾಗಬೇಕು ಎಂದು ಆದೇಶಿಸಿದರು.

 ಸಭೆಯಲ್ಲಿ ಶಾಸಕರುಗಳು, ಜಿಲ್ಲಾಧಿಕಾರಿ ಸಿ.ಶಿಖಾ,  ಎಸ್.ಪಿ. ಅಭಿನವಕರೆ, ಪೊಲೀಸ್ ಆಯುಕ್ತ ಬಿ.ದಯಾನಂದ್, ಅರಣ್ಯ ಇಲಾಖೆ ಅಧಿಕಾರಿ ಕರಿಕಾಳನ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

See also  ನಂಜನಗೂಡಿನಲ್ಲಿ ಮೋದಿ ಅಲೆ, ಕಾಂಗ್ರೇಸ್ ನವರ ದರೋಡೆ ಲೂಟಿ ವಿಚಾರವೇ ಪ್ರಮುಖ ಅಸ್ತ್ರ: ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು