ಮೈಸೂರು: ದುಷ್ಕರ್ಮಿಯೋರ್ವ ಜರ್ಮನಿ ಯುವತಿಯಿಂದ ಮೊಬೈಲ್ ಕಿತ್ತುಕೊಂಡು ಲೈಗಿಂಕ ಕಿರುಕುಳ ನೀಡಿ ಹಲ್ಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಬಳಿ ನಡೆದಿದ್ದು. ಈ ಸಂಬಂದ ಕೆ.ಆರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜರ್ಮನಿಯ 23 ವರ್ಷದ ಜೆನಿಫರ್ ಬಾಲ್ಕೆ ಎಂಬ ಯುವತಿ ಪ್ರವಾಸಕ್ಕಾಗಿ ಫೆಬ್ರವರಿ 13 ರಂದು ಮೈಸೂರಿಗೆ ಬಂದಿದ್ದು, ನಿನ್ನೆ ಸಂಜೆ ಚಾಮುಂಡಿ ಬೆಟ್ಟದ ಸೂರ್ಯಾಸ್ತಮವನ್ನ ವೀಕ್ಷಣೆ ಮಾಡಿಕೊಂಡು ಮೆಟ್ಟಿಲಿನ ಮೂಲಕ ನಡೆದುಕೊಂಡು ಬರುವಾಗ ನಂದಿ ವಿಗ್ರಹದ ಹತ್ತಿರ ಸುಮಾರು 7.10ರ ಸಮಯದಲ್ಲಿ ಕತ್ತಲಾಂದರಿಂದ ಮೊಬೈಲ್ ಟಾರ್ಚ್ ನಲ್ಲಿ ಮೆಟ್ಟಿಲು ಇಳಿಯುತ್ತಿದ್ದು, ಈ ಸಂಧರ್ಭದಲ್ಲಿ ಯುವಕನೊಬ್ಬ ಮೊಬೈಲ್ ಕಿತ್ತುಕೊಂಡು ಮುತ್ತು ಕೊಡಲು ಯತ್ನಿಸಿದಾಗ ಪ್ರತಿರೋದವೊಡ್ಡಿದ ಮಹಿಳೆಯ ತುಟ್ಟಿ, ಎದೆ ಭಾಗವನ್ನ ಗಾಯಗೊಳಿಸಿ ಬ್ಯಾಗಿನಲ್ಲಿದ್ದ 2500 ರೂಪಾಯಿ ಹಣವನ್ನ ಕಿತ್ತು ಪರಾರಿಯಾಗಿದ್ದಾನೆ.
ಘಟನೆ ನಡೆಯುತ್ತಿದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಗರುಡ ವಾಹನ ಯುವತಿಯನ್ನ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿಕೊಂಡು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಆಕೆಯನ್ನ ಆಕೆ ತಂಗಿದ್ದ ಹೋಟೆಲ್ ಗೆ ಬಿಟ್ಟಿದ್ದಾರೆ. ಆಕೆ ನೀಡಿದ ದೂರಿನ ಅನ್ವಯ ಐಪಿಸಿ 394, 354, 326 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕೆ.ಆರ್ ಠಾಣಾ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದು, ಇದಕ್ಕಾಗಿ ಸಿಸಿಬಿಯ ವಿಶೇಷ ತಂಡವನ್ನ ಸಹ ರಚಿಸಿದ್ದು ಶೀಘ್ರವೇ ಯುವಕನನ್ನ ಬಂಧಿಸಲಾಗುವುದೆಂದು ಕಾನೂನು ಸುವ್ಯವಸ್ಥೆ ಡಿಸಿಪಿ ಡಾ.ಹೆಚ್.ಟಿ ಶೇಖರ್ ತಿಳಿಸಿದ್ದಾರೆ.