News Kannada
Tuesday, March 28 2023

ಮೈಸೂರು

ಹರ್ಷದೊಂದಿಗೆ ಆತಂಕ ತಂದ ಆಲಿಕಲ್ಲು ಮಳೆ

Photo Credit :

ಹರ್ಷದೊಂದಿಗೆ ಆತಂಕ ತಂದ ಆಲಿಕಲ್ಲು ಮಳೆ

ಮೈಸೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷವನ್ನುಂಟು ಮಾಡಿದೆ. ಇದರ ಜತೆ ಜತೆಯಲ್ಲೇ ಬಿರುಗಾಳಿ, ಆಲಿಕಲ್ಲು ಮಳೆ ಸಹಿತ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಬಹಳಷ್ಟು ರೈತರು ಕಷ್ಟಪಟ್ಟು ಮಾಡಿದ ಕೃಷಿ ನಾಶವಾಗಿದೆ.

ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಹನಗೋಡು ಹೋಬಳಿ ಕೆಲ ಗ್ರಾಮಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿಯಿಂದ ಕೂಡಿದ ಆಲಿಕಲ್ಲು ಸಹಿತ ಮಳೆಯಾಗಿರುವ ಕಾರಣದಿಂದಾಗಿ ಇಲ್ಲಿನ ರೈತರು ಕಷ್ಟ ಪಟ್ಟು ಮಾಡಿದ್ದ ಕೃಷಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಹನಗೋಡು ಸೇರಿದಂತೆ  ಈ ಭಾಗದ ಉಡುವೇಪುರ, ಕಾಳಬೋಚನಹಳ್ಳಿ, ಅಯ್ಯನಕೆರೆ, ಕಚುವಿನಹಳ್ಳಿ, ಅಬ್ಬೂರು, ಕಡೇಮನುಗನಹಳ್ಳಿ, ನೇರಳಕುಪ್ಪೆ, ಬೀಲ್ಲೇನಹೊಸಹಳ್ಳಿ, ಬಿ.ಆರ್ ಕಾವಲ್ ಮೊದಲಾದ ಗ್ರಾಮಗಳಲ್ಲಿ ರೈತರು ಶುಂಠಿ, ಮೆಣಸು, ಸೇರಿದಂತೆ ಹಲವು ಬೆಳೆಬೆಳೆದಿದ್ದರಾದರೂ ಅವುಗಳೆಲ್ಲ ನೀರಲ್ಲಿ ಕೊಚ್ಚಿ ಹೋಗಿದೆ. ಇನ್ನು ಕಲ್ಲಿನಾಕಾರದ ಆಲಿಕಲ್ಲುಗಳು ಬಿದ್ದ ಪರಿಣಾಮ ಇತರೆ ಕೃಷಿ ಫಸಲು ನಾಶವಾಗಿದೆ.
ಗ್ರಾಮಗಳಲ್ಲಿದ್ದ ಸಣ್ಣಪುಟ್ಟ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದ್ದರಿಂದ ಜಾನುವಾರುಗಳಿಗೆ ನೀರು ಸಿಕ್ಕಂತಾಗಿದೆ. ಬಿಸಿಲಿನಿಂದ ಎಲ್ಲ ಒಣಗಿ ಹೋಗಿತ್ತಾದರೂ ಇದೀಗ ಮಳೆಯಿಂದ ಎಲ್ಲವೂ ನಳನಳಿಸುವಂತಾಗಿದೆ.

ಉಡುವೇಪುರ ಗ್ರಾಮದಲ್ಲಿ ಬಿರುಗಾಳಿಯ ಹೊಡೆತಕ್ಕೆ ಏಲಕ್ಕಿಗೌಡ, ರಾಮೆಗೌಡ, ಲಕ್ಕೇಗೌಡ, ಕುಮಾರ, ಭಾಗ್ಯಮ್ಮ ಎಂಬುವರ ಮನೆಯ ಮೇಲ್ಛಾವಣಿ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ, ಅಯ್ಯನಕೆರೆ ಗಿರಿಜನ ಹಾಡಿಯಲ್ಲಿ ಪೊನ್ನಪ್ಪ ಎಂಬುವರ ವಾಸದ ಮನೆ ಮೇಲೆ ಮರವೊಂದು ಬಿದ್ದು ಜಖಂ ಆಗಿದೆ. ಕಳಬೋಚನಹಳ್ಳಿ ಗ್ರಾಮದ ದಿವಂಗತ ಹುಚ್ಚೇಗೌಡ ಪತ್ನಿ ಜಯಮ್ಮರಿಗೆ ಸೇರಿದ ಒಂದು ಎಕರೆ  ಶುಂಠಿ ಬೆಳೆ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋದರೆ, ಒಂದು ಎಕರೆ  ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಗಿಡಗಳು ನಾಶವಾಗಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಹಾಗೂ ಹುಣಸೂರು ವಲಯದ ಭೀಮನಕಟ್ಟೆ, ಅಯ್ಯನಕೆರೆ, ಬಿಲ್ಲೆನಹೊಸಹಳ್ಳಿ ಭಾಗದ ಅರಣ್ಯ ಪ್ರದೇಶಕ್ಕೂ ಉತ್ತಮ ಮಳೆಯಾಗಿದೆ. ಮಳೆಯಿಂದ ಒಂದಡೆ ಅನುಕೂಲವಾಗಿದ್ದರೆ, ಮತ್ತೊಂದೆಡೆ ಹಾನಿಯೂ ಆಗಿದೆ. ಮಳೆ ಹೀಗೆಯೇ ಮುಂದುವರೆದರೆ ಈ ಬಾರಿ ಬರದಿಂದ ಹೊರಬಂದು ಬೆಳೆ ಬೆಳೆಯಬಹುದು ಎಂಬುದು ರೈತರ ಆಲೋಚನೆಯಾಗಿದೆ.

See also  ತಹಶೀಲ್ದಾರ್ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು