ಮೈಸೂರು: ದ್ವಿಚಕ್ರವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಮೈಸೂರು-ಬೆಂಗಳೂರು ರಸ್ತೆ ದಂಡಿಮಾರಮ್ಮ ದೇವಸ್ಥಾನದ ಸಮೀಪ ನಿನ್ನೆ ರಾತ್ತಿ ನಡೆದಿದೆ.
ಮೃತರನ್ನು ಸಿದ್ದಲಿಂಗಪುರದ ರಮೇಶ್(41), ಇವರ ಪತ್ನಿ ಉಷಾ(34)ಪುತ್ರಿ ಮೊನಿಷಾ(5) ಎಂದು ಗುರುತಿಸಲಾಗಿದ್ದು ಪುತ್ರ ಸಿದ್ದಾರ್ಥ(3)ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಟಿ ಕೆ ಲೇ ಔಟ್ ನಿವಾಸಿಗಳಾದ ಈ ನಾಲ್ವರೂ ಸಿದ್ದಲಿಂಗಪುರದಿಂದ ಮೈಸೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದರು. ಈ ವೇಳೆ ಮೈಸೂರಿನಿಂದ ಶ್ರೀರಂಗಪಟ್ಟಣದ ಕಡೆ ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕ ದಾಟಿ ಬೈಕಿಗೆ ಡಿಕ್ಕಿ ಹೊಡೆದಿದೆ. ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದ್ದು ಕಾರಿನ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಸಂದೇಶ್ ಕುಮಾರ್ ತೆರಳಿ ಪರಿಶೀಲನೆ ನಡೆಸಿದರು.