News Kannada
Monday, October 02 2023
ಮೈಸೂರು

ರಾಜ್ಯ ರೈತ ಕಲ್ಯಾಣ ಸಂಘದಿಂದ ವೈಯಕ್ತಿಕ ಪರಿಹಾರ ವಿತರಣೆ

Untitled 2 Recovered 13
Photo Credit :

ಮೈಸೂರು: ಕಾಡಾನೆ ದಾಳಿಗೆ ಸಿಲುಕಿ  ಸಾವನ್ನಪ್ಪಿದ ಆದಿವಾಸಿಯ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ವಿತರಿಸಿದರು‌.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಮಾಳ ಹಾಡಿಯಲ್ಲಿ ಕಾಡಾನೆ ದಾಳಿಯಿಂದಾಗಿ ರೈತ  ಪುಟ್ಟಪ್ಪ(75) ಮೃತಪಟ್ಟಿದ್ದರು. ವಿಷಯ ತಿಳಿದು ಶುಕ್ರವಾರ ಬೆಳಗ್ಗೆ ಆನೆಮಾಳ ಹಾಡಿಗೆ ಭೇಟಿ ನೀಡಿದ ಚಂದನ್ ಗೌಡ,ಕಾಡಂಚಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮೃತಪಟ್ಟ ಪುಟ್ಟಪ್ಪ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಸಹಾಯಧನ ವಿತರಿಸಿ,ಸರ್ಕಾರದಿಂದ ಬರಬೇಕಿರುವ ಪರಿಹಾರವನ್ನು  ದೊರಕಿಸಿಕೊಡುವ ಭರವಸೆ‌ ನೀಡಿದರು.

ಅಲ್ಲದೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ, ಕಾಡುಪ್ರಾಣಿಗಳ ದಾಳಿ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ,ಮೃತ ರೈತನ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಬೇಕೆಂದು ಚಂದನ್ ಗೌಡ ಅವರು ಮಾಡಿದ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆ ವತಿಯಿಂದ ಕೊಡ ಮಾಡಲಾಗುವ ಪರಿಹಾರದ ಚೆಕ್ ಅನ್ನು ಕುಟುಂಬವರ್ಗಕ್ಕೆ ಹಸ್ತಾಂತರಿಸಿದರು.

ಇದೇ ವೇಳೆ ಅಂತರಸಂತೆ ವಲಯದ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿಗೆ  ಭೇಟಿ ನೀಡಿದ ಚಂದನ್ ಗೌಡ ಮತ್ತು ಸಂಘದ ಪದಾಧಿಕಾರಿಗಳು, ಅಲ್ಲಿನ ಅಂಗನವಾಡಿಯ ದುಸ್ಥಿತಿಯ ಕುರಿತು ಚರ್ಚಿಸಿದರಲ್ಲದೇ, ಅಂಗನವಾಡಿ ಅಭಿವೃದ್ದಿಗೆ ಹಾಗೂ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ  ವೈಯಕ್ತಿಕವಾಗಿ ನೆರವು ನೀಡಲು ಸಿದ್ದರಿದ್ದು, ದಯಮಾಡಿ ಅಭಿವೃದ್ದಿ ಬಗ್ಗೆ ಗಮನ ಹರಿಸಬೇಕೆಂದು ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.

ರೈತ ಕಲ್ಯಾಣ ಸಂಘದ ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷರಾದ ನವೀನ್ ಗೌಡ,  ಮೋಸಿನ್ ವೀರಣ್ಣ, ಬೇಬಿ,ಅಂತರಸಂತೆ ಘಟಕದ ಅಧ್ಯಕ್ಷ ಮಂಜುಗೌಡ್ರು, ಸದಾನಂದ, ನಂಜನಗೂಡು ತಾಲೂಕು ಘಟಕದ ಹೇಮಂತ್ ಗೌಡ, ಅಭಿ ಸಂಜಯ್, ಹರೀಶ್ ಪಿ.ಗೌಡ, ಮೂರ್ತಿ ಸೇರಿದಂತೆ ಸಂಘದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

See also  ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ತಪ್ಪಿದ ಅನಾಹುತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು