News Kannada
Wednesday, March 22 2023

ಮೈಸೂರು

ಅರಸೀಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಆರಂಭವಾಗಿದ್ದೆ ಬಿಜೆಪಿ ಸರ್ಕಾರದಿಂದ- ನಳಿನ್‌ಕುಮಾರ್ ಕಟೀಲ್

Nalin Kumar Kateel: Development started in Arsikere constituency from BJP government
Photo Credit : News Kannada

ಅರಸೀಕೆರೆ: ಬಿಜೆಪಿ ರಾಜಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದ ವಿಜಯಸಂಕಲ್ಪ ಯಾತ್ರೆಯು ನಗರಕ್ಕೆ ಆಗಮಿಸಿ, ಬೃಹತ್ ರೋಡ್ ಶೋ ನಡೆಸಿತ್ತು.

ವಿಜಯ ಸಂಕಲ್ಪ ಯಾತ್ರೆಯು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ರಾತ್ರಿ ೭.೩೦ಕ್ಕೆ ಘಂಟೆಗೆ ಆಗಮಿಸಿತ್ತು. ವಿಜಯಸಂಕಲ್ಪ ರಥಯಾತ್ರೆ ಬಿಜೆಪಿ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್‌ರ್‍ಯಾಲಿಯ ಮೂಲಕ ಕೊಂಡೋಯ್ದರು ಯಾತ್ರೆಯೂ ಡಾ.ಅಂಬೇಡ್ಕರ್ ಸರ್ಕಲ್ ಬಳಿ ಬಂದಾಗ ಸರ್ಕಲ್‌ನಲ್ಲಿರುವ ಅಂಬೇಡ್ಕರ್ ಕಂಚಿನ ಪ್ರತಿಮೆಗೆ ನಳಿನ್‌ಕುಮಾರ್ ಕಟೀಲ್ ಹೂವಿನ ಹಾರವನ್ನು ಅರ್ಪಿಸಿ ಪುಷ್ಪಾರ್ಚನೆ ನೆರವೇರಿಸಿ, ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಾಗಿತು ಸಂಕಲ್ಪಯಾತ್ರೆಯ ರಥದ ಮುಂದೆ ಬಿಜೆಪಿ ಬಾವುಟ ಕಟ್ಟಿದ್ದ ನೂರಾರು ಬೈಕ್‌ಗಳ ಸಾಗಿದವು.

ನಗರದ ಬಸವೇಶ್ವರ ವೃತ್ತದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ನಳಿನ್‌ಕುಮಾರ್ ಕಟೀಲ್ ಮಾತನಾಡಿ ನಮ್ಮ ನಾಯಕರಾದ ಪ್ರಧಾನಿ ನರೇಂದ್ರಮೋದಿ ಅವರು ಜನರಿಗೆ ಬಡವರಿಗೆ ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ ನೀಡಿದ್ದಾರೆ.

ಭಾಗ್ಯಲಕ್ಷಿ ಯೋಜನೆ ಮುಂತಾದ ಬಿಜೆಪಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆ ಪ್ರಧಾನಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕರೋನಾ ಹಾಗೂ ಯುದ್ಧದಿಂದ ಆರ್ಥಿಕ ದುಸ್ಥಿತಿಗೆ ತಲುಪಿ ತಿನ್ನುವ ಅನ್ನಕ್ಕೂ ಆಹಾಕಾರ ಪಡುವ ಪರಿಸ್ಥಿತಿ ಎದುರಾಗಿದೆ.

ಆದರೆ ಭಾರತ ದೇಶ ಆರ್ಥಿಕವಾಗಿ ದಿನೇ-ದಿನೇ ಅಭಿವೃದ್ಧಿಹೊಂದಿ ವಿಶ್ವದಲ್ಲೇ ಎಲ್ಲರು ಗುರುತಿಸುವಂತೆ ಮಾಡಿದೆ. ಮತ್ತು ಭಾರತದ ಕಡೆ ಪ್ರಪಂಚವೇ ತಿರುಗಿನೋಡುವಂತೆ ಮಾಡಿದ್ದಾರೆ ವೈರಿ ದೇಶವಾದ ಪಾಕಿಸ್ತಾನದ ಜನರು ನರೇಂದ್ರ ಮೋದಿ ನಮ್ಮ ಪ್ರಧಾನಿಯಾಗಲಿ ಎಂದು ಬಯಸುತ್ತಿದ್ದಾರೆ.ಇದು ನಮ್ಮ ನರೇಂದ್ರಮೋದಿಜೀ ಅವರಿಂದ ಮಾತ್ರಾಸಾಧ್ಯವಾಗಿದೆ ಎಂದರು.

ಅರಸೀಕೆರೆ ಕ್ಷೇತ್ರ ಅಭಿವೃದ್ಧಿಯನ್ನು ಕಂಡಿದ್ದು ಬಿಜೆಪಿ ಸರ್ಕಾರ ಬಂದ ಮೇಲೆ ಜೆಡಿಎಸ್ ವರಿಷ್ಠಾ ದೇವೇಗೌಡರು ಹಾಗೂ ಅಂದಿನ ಕಾಂಗ್ರೇಸ್ ಸಂಸತ್ ಸದಸ್ಯರಾಗಿದ್ದು ಪುಟ್ಟಸ್ವಾಮಿ ಗೌಡ ಅರಸೀಕೆರೆ ಕ್ಷೇತ್ರಕ್ಕೆ ಯಾವುದೇ ಮೂಲದಿಂದ ನೀರು ಬರಲು ಸಾಧ್ಯವಿಲ್ಲ ಎಂದು ಬಹಿರಂಗ ಸಭೆಗಳಲ್ಲೆ ಹೇಳಿದ್ದರು ಆದರೆ ರಾಜ್ಯದಲ್ಲೆ ಬಿಜೆಪಿ ನೇತೃತ್ವದ ಬಿ.ಎಸ್ ಯಡಯೂರಪ್ಪ ಸರ್ಕಾರದ ಅವಽಯಲ್ಲಿ ಹೊನ್ನವಳ್ಳಿ ಏತ ನೀರಾವರಿ ,ಅರಸೀಕೆರೆ ನಗರಕ್ಕೆ ಕುಡಿಯುವ ನೀರು ,ತಾಲೂಕಿನ ೫೩೦ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಅವಽಯಲ್ಲಿ ಎತ್ತಿನಹೊಳೆ ಯೋಜನೆ ಮಂಜೂರು ಮಾಡಲಾಗಿತ್ತು ಅಭಿವೃದ್ಧಿ ಎಂಬುದು ಆರಂಭವಾಗಿದ್ದೆ ಬಿಜೆಪಿ ಸರ್ಕಾರದಿಂದ ಎಂದು ಹೇಳಿದರು.

ಇತ್ತೀಚೆಗೆ ನಡೆದ ನಾಗಲ್ಯಾಂಡ್ , ತ್ರೀಪುರ ,ಮೇಘಾಲಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಽಕಾರಕ್ಕೆ ಬಂದಿದ್ದು ಕಾಂಗ್ರೇಸ್ ಹೇಳಹೆಸರಿಲ್ಲದಂತಾಗಿ ಕಾಂಗ್ರೆಸ್ ಪಕ್ಷ ಭಾರತ ಮುಕ್ತವಾಗಿದ್ದಾರೆ ,ರಾಜ್ಯದಲ್ಲೂ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ ಜೆಡಿಎಸ್ ಪಕ್ಷಕ್ಕೆ ಯಾವುದೇ ಅಸ್ತಿತ್ವ ಇಲ್ಲ ಹಾಗಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ, ಬಿಜೆಪಿ ಅಭ್ಯರ್ಥಿ ಮತ್ತೆ ಕಮಲ ಅರಳಬೇಕು ನಿಮ್ಮ ಎಲ್ಲರ ಸಹಕಾರದೊಂದಿಗೆ ಬಿಜೆಪಿ ಕಮಲವನ್ನು ಅರಳಿಸಲೇಬೇಕು ಅರಸೀಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಮತ್ತೆ ಡಬ್ಬಲ್ ಎಂಜಿನ್ ಸರ್ಕಾರ ಮತ್ತೆ ಬರಬೇಕು ಎಂದು ತಿಳಿಸಿದರು.

See also  ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ಮಾತನಾಡಿ, ಅನ್ನದಾತರಿಗೆ, ಈ ದೇಶಕ್ಕೆ ಶಕ್ತಿಯಾಗಿರುವ ಮಹಿಳೆಯರ ದಿನಾಚರಣೆಯಂದು ಜಿಲ್ಲೆಗೆ ವಿಜಯ ಸಂಕಲ್ಪಯಾತ್ರೆಯ ಪ್ರವೇಶವಾಗಿದೆ.ಪಕ್ಷದ ಸಂಘಟನೆ ದುರ್ಬಲ ಎನ್ನುವರಿಗೆ ಇಂದು ಸೇರಿರುವ ಜನಸ್ತೋಮದಿಂದ ಉತ್ತರ ಸಿಕ್ಕಿದೆ.ಇದು ಜಿಲ್ಲೆಯ ೭ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎನ್ನುವ ಶುಭಸೂಚಕವೆಂದರು.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಹೆಚ್ಚಿನ ಮತ್ತು ಮೆಚ್ಚಿನ ರಾಜ್ಯನಾಯಕರುಗಳು ಆಗಮಿಸದೇ ಇರುವುದಕ್ಕೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು ಕೆಲವು ಕಾರ್ಯಕರ್ತರು ನಿರಾಶಾದಾಯಕರಾಗಿದ್ದು ಕಂಡುಬಂತ್ತು ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಎನ್ ಆರ್ ಸಂತೋಷ್, ಜಿ ವಿ ಟಿ ಬಸವರಾಜು,ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನ ಕುಮಾರ್ , ತರೀಕೆರೆ ಶಾಸಕರಾದ ಸುರೇಶ್, ಕಡೂರು ಶಾಸಕರಾದ ಬೆಳ್ಳಿ ಪ್ರಕಾಶ್, ಬಿಜೆಪಿ ಮುಖಂಡರಾದ ಅಣ್ಣನಾಯಕನಹಳ್ಳಿ ವಿಜಯ್ ಕುಮಾರ್, ಏನ್ ಡಿ ಪ್ರಸಾದ್, ಮುಂತಾದ ಬಿಜೆಪಿ ಮುಖಂಡರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು