News Karnataka Kannada
Friday, March 29 2024
Cricket
ಚಾಮರಾಜನಗರ

ಆಹಾರ ಸಂಸ್ಕರಣ ಘಟಕದಲ್ಲಿದ್ದ ಮಹಿಳೆ ಆತ್ಮಹತ್ಯೆಗೆ ಕಾರಣವೇನು?

Photo Credit :

ಚಾಮರಾನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಸಂಸ್ಕರಣ ಘಟಕದಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆಹಾರ ಸಂಸ್ಕರಣ ಘಟಕದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಸಂಸ್ಕರಣ ಘಟಕದಲ್ಲಿ ಪ್ಯಾಕಿಂಗ್ ಮಾಡುತ್ತಿದ್ದ ಹೊರೆಯಾಲ ಗ್ರಾಮದ ಮಹದೇವಮ್ಮ (45) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ನೌಕರಳಾಗಿದ್ದಾರೆ.

ಬೇಗೂರು ಗ್ರಾಮದಲ್ಲಿರುವ ಆಹಾರ ಸಂಸ್ಕರಣ ಘಟಕದಲ್ಲಿ 17 ಮಂದಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ಪಾಳಿಯದಲ್ಲಿ ಮಹಿಳಾ ನೌಕರರ ಕೆಲಸ ಮಾಡುತ್ತಿದ್ದರು. ಪ್ರತಿ ನಿತ್ಯ ಬೆಳೆಗ್ಗೆ 8.30 ಆಟೋದಲ್ಲಿ ಹೊರೆಯಾಲದಿಂದ ಬೇಗೂರಿಗೆ ಬರುತ್ತಿದ್ದ ಮೃತ ಮಹದೇವಮ್ಮ, ಸೋಮವಾರ ಸಂಜೆ ಆಹಾರ ಸಂಸ್ಕರಣ ಘಟಕದ ಬೀಗದ ಕೀ ತೆಗೆದು ಕೊಂಡಿದ್ದರು ಎನ್ನಲಾಗಿದೆ.

ಸಾರ್ವಜನಿಕರು ಹೇಳುವಂತೆ ಪ್ರಕಾರ ಫುಡ್ ಪ್ಯಾಕಿಂಗ್ ಮಾಡುವಾಗ ಕಡಿಮೆ ತೂಕ ಮಾಡಲಾಗುತ್ತಿತ್ತು ಒಂದು ಕೆಜಿ ಆಹಾರ ಧಾನ್ಯದ ಬದಲು 850 ಗ್ರಾಮ್ ಪ್ಯಾಕ್ ಮಾಡಲಾಗ್ತಿತ್ತು ಎಂಬ ಆರೋಪ ಮಾಡಿದ್ದಾರೆ, ಈ ಅವ್ಯವಹಾರ ಹೊರಗೆ ಗೊತ್ತಾದ್ರೆ ಅವಮಾನ ಆಗುತ್ತೆ ಎಂದು ಮಹದೇವಮ್ಮ ಆಹಾರ ಸಂಸ್ಕರಣ ಘಟಕದ ಕೊಠಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಿಡಿಪಿಓ ಚೆಲುವರಾಜು ಆಗಮಿಸಿದ ಸಂದರ್ಭದಲ್ಲಿ ಮೃತ ಮಹದೇವಮ್ಮ ಕಡೆಯವರು ತರಾಟೆಗೆ ತೆಗೆದುಕೊಂಡರು. ಬೇಗೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಶವ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು