ಚಾಮರಾಜನಗರ: ಪ್ರತಿಯೊಬ್ಬ ವಿದ್ಯಾರ್ಥಿನಿಯರು ತಮ್ಮ ಮುಟ್ಟಿನ ಸಮಸ್ಯೆಯನ್ನು ಸಂಕೋಚ ಪಟ್ಟುಕೊಳ್ಳದೆ ಮಹಿಳಾ ವೈದ್ಯರಿಗೆ ಮಾಹಿತಿ ನೀಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮೈಸೂರಿನ ಜೆಎಸ್ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ತಜ್ಞ ಪ್ರಸಿದ್ಧ ವೈದ್ಯೆ ಡಾ. ವಿದ್ಯಾ ನಾರಾಯಣ ಸಲಹೆ ನೀಡಿದ್ದಾರೆ.
ಚಾಮರಾಜನಗರದ ಜೆಎಸ್ಎಸಮಹಿಳಾ ಕಾಲೇಜಿನಲ್ಲಿ. ಜೆಎಸ್ಎಸ್ ಹಿರಿಯ ಹಿರಿಯ ವಿದ್ಯಾರ್ಥಿನಿಯರ ಸಂಘ ಏರ್ಪಡಿಸಿದ ವಿಶೇಷ ಉಪನ್ಯಾಸ ಹಾಗೂ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರ. ವಿಷಯ ಗರ್ಭಕೋಶ ಕ್ಯಾನ್ಸರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಎಲ್ಲಾ ವಿದ್ಯಾರ್ಥಿನಿಯರು. ಹಾಗೂ ಮಹಿಳೆಯರು. ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಮಹಿಳೆಯರ ಹಲವಾರು ಸಮಸ್ಯೆಗಳಿಗೆ ಮಹಿಳಾ ನುರಿತ ವೈದ್ಯರನ್ನು ಸಂಪರ್ಕಿಸಿ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸೂಚನೆ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಆದ್ದರಿಂದ ನೀವು ಉತ್ತಮ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಕೆಎಸ್ ಮರಿಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಮುಗ್ಧ ಯುವತಿಯರು ತಮ್ಮ ದೈನಂದಿನ ಜೀವನದಲ್ಲಿ ತಮಗೆ ಆಗುವ ವೈಯಕ್ತಿಕ ಸಮಸ್ಯೆಗಳನ್ನು ನಿಮ್ಮ ತಾಯಿ ಅಥವಾ ನಿಮ್ಮ ಅಜ್ಜಿ, ಸ್ನೇಹಿತೆಯರು ವಿಷಯಗಳನ್ನು ಹೇಳಿಕೊಳ್ಳಬೇಕು. ಒಂದು ವೇಳೆ ಸಮಸ್ಯೆ ಪರಿಹಾರ ಸಿಗದಿದ್ದಲ್ಲಿ ಸಮೀಪದ ಆಸ್ಪತ್ರೆಯ ನುರಿತ ಮಹಿಳಾ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ತಿಳಿಸಿದರು. ಕಾಲೇಜಿನ ಬಾತ್ ರೂಮ್ ಗಳನ್ನು ಎಲ್ಲೆಲ್ಲೆಲ್ಲೂ ಗಲೀಜು ಮಾಡಿದೆ ಸೂಕ್ತವಾಗಿ ಬಳಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. ನಿಮಗೆ ಏನೇ ಉಪಯೋಗ ಆಗಬೇಕಾದರೆ. ನಿಮ್ಮ ಉಪನ್ಯಾಸಕಿ ಬಳಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಜೆಎಸ್ಎಸ್ ಆಸ್ಪತ್ರೆ ಅಧೀಕ್ಷಕ ಡಾ. ಗೋವಿಂದಶೆಟ್ಟಿ, ಜೆಎಸ್ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಸಂಘದ ಸಂಚಾಲಕಿ ನಿರ್ಮಲ, ಉಪನ್ಯಾಸಕರಾದ ಅರುಣ. ಅಂಬಿಕ ದೇವಿ, ವಾತ್ಸಲ್ಯ, ರೂಪಶ್ರೀ ಮೊದಲಾದವರು ಇದ್ದರು.