News Kannada
Thursday, March 23 2023

ಚಾಮರಾಜನಗರ

ಜೆಡಿಎಸ್ ಕಾರ್ಯಕರ್ತರ ಸ್ವಾಗತಿಸಿದ ಸಿಪಿವೈ

Photo Credit :

ಚನ್ನಪಟ್ಟಣ: ಬಿಜೆಪಿಗೆ ಸೇರ್ಪಡೆಯಾದ ತಾಲೂಕಿನ ಬೇವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಮುಖಂಡರು. ಗ್ರಾ.ಪಂ.ಸದಸ್ಯರನ್ನು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುಷ್ಪಮಾಲೆ ಹಾಕಿ ಸ್ವಾಗತಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಹಿಂದಿನ ದಿನಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಹಾಗೂ ಈ ಬಾರಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಅರಿವು ಹೊಂದಿರುವ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಚಿಂತಿಸಿ ಹಾಗೂ ಅಶೋತ್ತರಗಳ ಈಡೇರಿಕೆಗಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಮಾತನಾಡಿದ ಅವರು ತಾಲೂಕಿನ ಮತದಾರ ಬಂಧುಗಳು. ಅದರಲ್ಲೂ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಬಹುತೇಕ ಅಶೋತ್ತರಗಳಿಂದ ಕುಮಾರಸ್ವಾಮಿಯನ್ನು ಬೆಂಬಲಿಸಿ ಅವರಿಗೆ ಅಧಿಕಾರವನ್ನು ದಕ್ಕಿಸಿಕೊಟ್ಟರೂ ಇಲ್ಲಿಯವರೆಗೂ ಕಾರ್ಯಕರ್ತರಿಗೆ ಸ್ಪಂದಿಸಿಲ್ಲ ಎಂದು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಕಳೆದ 20 ವರ್ಷಗಳಿಂದ ತಾಲೂಕಿನಲ್ಲಿ ಅಭಿವೃದ್ಧಿಪಡಿಸಿದ ಕೆಲಸ ಕಾರ್ಯಗಳು, ನೀರಾವರಿ ಯೋಜನೆಗಳ ಬಗ್ಗೆ ಪ್ರಾಮಾಣಿಕವಾಗಿ ದುಡಿದಿದ್ದ ನನ್ನ ಮೇಲೆ ವಿಶ್ವಾಸವಿಟ್ಟಿದ್ದ ರೈತ ಬಂಧುಗಳು, ಜೆಡಿಎಸ್‌ನ ಕಾರ್ಯಕರ್ತರು ಮನದಟ್ಟು ಮಾಡಿಕೊಂಡು ಸಿಪಿವೈ ಅವರ ಸೋಲಿಸಿ ನಾವುಗಳೇ ತಪ್ಪು ಮಾಡಿದ್ದೇವೆ ಎಂದು ತಿಳಿದಿರುವ ಮತದಾರ ಬಂಧುಗಳು ಇನ್ನು ಮುಂದಿನ ಅಭಿವೃದ್ಧಿ ವಿಚಾರಗಳ ಬಗ್ಗೆ ಚಿಂತಿಸಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ ಹಾಗೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಪಣ ತೊಟ್ಟಿದ್ದಾರೆ ಹಾಗಾಗಿ ನಿಮ್ಮಗಳ ನಂಬಿಕೆ ಮತ್ತು ವಿಶ್ವಾಸಕ್ಕೆ ತಕ್ಕದಾಗಿ ಸೇವೆ ಸಲ್ಲಿಸಲು ಮುಂದಾಗುತ್ತೇನೆೆ ಎಂದು ಭರವಸೆ ನೀಡಿದರು.

ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾ.ಪಂ.ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಜಿ.ಪಂ.ಮಾಜಿ ಸದಸ್ಯ ಕೃಷ್ಣಪ್ಪ, ಡೈರಿ ರಾಮಣ್ಣ, ವಿಜೇಂದ್ರ, ಮೋಹನ, ಸಿದ್ದರಾಜು, ಕೆಂಪೇಗೌಡ, ಕೃಷ್ಣ, ಯೋಗೇಶ್, ಜಗದೀಶ್, ಯೋಗೇಶ್, ಸಿದ್ದಪ್ಪ, ರಾಮಲಿಂಗ, ರಮೇಶಯ್ಯ, ರಾಜಮ್ಮ, ಮುಳ್ಳುಡಿ ಕುಮಾರ್, ಸರ್ವೇ ಜಗದೀಶ್, ಜಮ್ಮಸಿದ್ದು, ರಾಮು, ನಟರಾಜು, ಮುತ್ತು, ಸತೀಶ್, ಭಾಸ್ಕರ್, ರಂಗಸ್ವಾಮಿ, ಕೆಲಗೆರೆ ಪಟೇಲರಾಜು, ಮೋಗೇನಹಳ್ಳಿ ರಾಜು, ಮೊಗೇನಹಳ್ಳಿ ರಾಜು, ಮರಿಯಪ್ಪ, ಬೈರನಾಯಕನಹಳ್ಳಿ ನಿಂಗೇಗೌಡ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.

See also  ಬಿಜೆಪಿ ನಾಯಕರಿಂದಲೇ ನಮಗೆ ಬಿಟ್ ಕಾಯಿನ್ ದಂಧೆ ಬಗ್ಗೆ ಮಾಹಿತಿ ಬಂದಿದೆ : ಡಿ ಕೆ ಶಿವಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು