News Kannada
Monday, October 02 2023
ಚಾಮರಾಜನಗರ

ಚಾಮರಾಜನಗರ:  ರೈತನ ಮೇಲೆ ಹುಲಿ ದಾಳಿ

Tiger attacks farmer in Chamarajanagar
Photo Credit :

ಚಾಮರಾಜನಗರ:  ಹುಲಿಯೊಂದು ರೈತನ ಮೇಲೆ ದಾಳಿ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಗೋಪಾಲಪುರ ಗ್ರಾಮದ ಕಾಡಂಚಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಅದೃಷ್ಟ ವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಪಾಲಪುರ ಗ್ರಾಮದ ರೈತ ಗವಿಯಪ್ಪ ಎಂಬುವರೇ ಹುಲಿ ದಾಳಿಗೆ ಸಿಲುಕಿದವರು. ಗ್ರಾಮದ ಚನ್ನಪ್ಪ ಎಂಬುವರು ಕಾಡಂಚಿನಲ್ಲಿ ಜಮೀನು ಹೊಂದಿದ್ದು. ಹಸುವನ್ನು ತೋಟದಲ್ಲಿ ಮೇಯಲು ಬಿಟ್ಟಿದ್ದರು.  ಈ ವೇಳೆ ಹುಲಿಯೊಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.  ಬಳಿಕ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ  ರೈತ ಗವಿಯಪ್ಪ ಅವರ ಮೇಲೆ   ದಾಳಿ ನಡೆಸಿದೆ.

ಈ ವೇಳೆ ಅವರು ಹೆದರಿ ಕೂಗಾಡಿದ್ದರಿಂದ ಅದೃಷ್ಟವಶಾತ್ ಬಿಟ್ಟು ಹೋಗಿದೆ. ಆದರೆ ದಾಳಿ ಮಾಡಿದ ಪರಿಣಾಮ ಗವಿಯಪ್ಪರವರ ಬಲಗಣ್ಣಿಗೆ ಪೆಟ್ಟು ಬಿದ್ದಿದ್ದು, ತಲೆಗೆ ಪರಚಿದ ಗಾಯವಾಗಿ ರಕ್ತ ಹರಿದಿದೆ. ಹುಲಿಯ ದಾಳಿಯ ನಡುವೆಯೇ ಗವಿಯಪ್ಪ ಸಂಬಂಧಿಕರಿಗೆ ಮೊಬೈಲ್ ಕರೆ ಮಾಡಿ ಹುಲಿ ದಾಳಿ ಮಾಡಿದ ಸಂಗತಿ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಗವಿಯಪ್ಪ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಹುಲಿ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಹಿಮವದ್ ಗೋಪಾಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಸಹಾಯಕ ಅರಣ್ಯಾಧಿಕಾರಿ ನವೀನ್ ಹಾಗೂ ಇನ್ನಿತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಹುಲಿ ದಾಳಿಯಿಂದಾಗಿ ಆತಂಕಗೊಂಡಿರುವ ಗ್ರಾಮಸ್ಥರು ಹುಲಿ ಸೆರೆಗೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಘಟನೆ ಬಳಿಕ ಗೋಪಾಲಪುರ  ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ  ಆತಂಕ ಸೃಷ್ಟಿಯಾಗಿದ್ದು, ರೈತರು ಜಮೀನಿಗೆ ತೆರಳಲು ಭಯ ಪಡುವಂತಾಗಿದೆ.

See also  ರಾಮನಗರ: ಬೈಕ್ ನಲ್ಲಿ ತೆರಳುವಾಗ ಕಲ್ಯಾಣಿಗೆ ಬಿದ್ದು ತಾಯಿ, ಮಗಳು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು