News Kannada
Monday, September 25 2023
ಚಾಮರಾಜನಗರ

ಚಾಮರಾಜನಗರ: ಉಮ್ಮತ್ತೂರು ದೊಡ್ಡ ಕೆರೆಗೆ ಬಾಗಿನ ಅರ್ಪಣೆ

Chamarajanagar: Offering of to Ummattur Dodda Lake
Photo Credit : By Author

ಚಾಮರಾಜನಗರ: ಮಳೆಯಿಂದಾಗಿ ತಾಲೂಕಿನ ಉಮ್ಮತ್ತೂರು ದೊಡ್ಡ ಕೆರೆಗೆ ರೈತರು ಬಾಗಿನ ಅರ್ಪಿಸಿದ್ದಾರೆ.

ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜ್ ಈ ಭಾಗದ ರೈತರಿಗೆ ಉಮ್ಮತ್ತೂರು ದೊಡ್ಡಕೆರೆ ಜೀವನಾಡಿಯಾಗಿದೆ. ಈ ಯೋಜನೆಗಳು ಕಾರ್ಯಗತವಾಗಬೇಕಾದರೆ ಹೋರಾಟವೇ ಮುಖ್ಯ ಕಾರಣ. ರಾಜಕಾರಣಿಗಳು ರೈತರನ್ನು ಚುನಾವಣೆಯಲ್ಲಿ ಮಾತ್ರ ಬಳಸಿಕೊಳ್ಳತ್ತಾರೆ. ಆದರೆ ಚುನಾವಣೆ ನಂತರ ರೈತರ ಕಷ್ಟವನ್ನು ಕೇಳದ ಭ್ರಷ್ಟ ರಾಜಕಾರಣಿಗಳ ಗೆಲ್ಲಿಸಿ ಪ್ರಯೋಜನವೇನು? ಕೆರೆಗೆ ಹೋರಾಟ ತಂತ್ರಗಾರಿಕೆಯಲ್ಲಿ ನೀರು ತುಂಬಿಸಲು ರೈತರು ಕಾರಣಕರ್ತರಾಗಿದ್ದಾರೆ.

ರೈತ ಮುಖಂಡ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ ಹೋರಾಟ ರೈತರ ಹಕ್ಕು. ಈ ಭಾಗದಲ್ಲಿ ರೈತರು ಕೃಷಿಗೆ ನೀರಿಲ್ಲದೆ ಪಟ್ಟಣಗಳತ್ತ ವಲಸೆ ಹೋಗಿದ್ದರು. ಆದರೆ ದೊಡ್ಡ ಕೆರೆಗೆ ನೀರು ಬಂದ ಮೇಲೆ ಮತ್ತೆ ಕೃಷಿ ಅರಸಿ ಬಂದಿರುವುದು ಬಹಳ ವಿಶೇಷವಾಗಿದೆ. ಈ ಭಾಗದಲ್ಲಿ ರೈತರು ಗುಡಿ ಕೈಗಾರಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಹೆಗ್ಗವ್ವಡೀಪುರ ಮಹದೇವಸ್ವಾಮಿ, ಗುರುಪ್ರಸಾದ್, ಶೈಲಜಾ, ಗ್ರಾ ಪಂ ಅಧ್ಯಕ್ಷ ಮಹದೇವಸ್ವಾಮಿ, ಮುಖಡಹಳ್ಳಿ ಮಹದೇವಪ್ಪ, ಚುಂಗಡಿಪುರ ರಾಜು, ಹಾಲಿನ ನಾಗರಾಜ್, ಪಟೇಲ್ ಶಿವಮೂರ್ತಿ, ಉಡಿಗಲ ಗುರು, ಕುರುಬುರು ಮಂಜು, ಶಿವಸ್ವಾಮಿ, ಉಮೇಶ್, ರವಿ ಮತ್ತಿತರರು ಇದ್ದರು

See also  ಬೆಳ್ತಂಗಡಿ: ಎಕ್ಸಿಬಿಷನ್ ನಲ್ಲಿ ಧರ್ಮಸ್ಥಳದ ಪೊಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು