ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರವಾದ ನಗರದ ಹೊರವಲಯ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಭೇಟಿ ಸಿದ್ದತೆಗಳನ್ನು ನೀಡಿ ಪರಿಶೀಲಿಸಿದರು.
ಮತ ಎಣಿಕೆಗೆ ಅಗತ್ಯವಾಗಿರುವ ಕೊಠಡಿಗಳಲ್ಲಿ ಕೈಗೊಳ್ಳುತ್ತಿರುವ ಸಿದ್ಧತೆಗಳನ್ನ ವ್ಯಾಪಕವಾಗಿ ವೀಕ್ಷಿಸಿದರು. ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಗೆ ಟೇಬಲ್ ಗಳು, ಆಸನಗಳು ಸೇರಿದಂತೆ ಕೊಠಡಿಗಳಲ್ಲಿ ಅಳವಡಿಸುತ್ತಿರುವ ಇನ್ನಿತರ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆ ನೀಡಿದರು.
ಮತ ಎಣಿಕೆ ಕೇಂದ್ರದಲ್ಲಿ ಬಂದೋಬಸ್ತ್ ಸಂಬಂಧ ಪರಿಶೀಲಿಸಿದರು. ಕಾಲೇಜಿನ ಮುಖ್ಯ ದ್ವಾರದಿಂದಲೇ ಕೈಗೊಳ್ಳಬೇಕಿರುವ ಪೊಲೀಸ್ ಬಂದೋಬಸ್ತ್ ನಿಯೋಜನೆ ಸಂಬಂಧ ವೀಕ್ಷಣೆ ಮಾಡಿದರು. ಬ್ಯಾರಿಕೇಡ್ಗಳ ಅಳವಡಿಕೆ, ವಾಹನಗಳ ನಿಲುಗಡೆಗೆ ಸ್ಥಳವಕಾಶ, ಉಪಹಾರದ ಕೌಂಟರ್ ಸೇರಿದಂತೆ ಇನ್ನಿತರ ಅವಶ್ಯಕ ಸಿದ್ದತೆಗಳ ಬಗ್ಗೆ ವಿವರವಾಗಿ ಪರಿಶೀಲನೆ ಮಾಡಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಸಿ. ಕೆಂಪರಾಜು ಈ ಸಂದರ್ಭದಲ್ಲಿ ಇದ್ದರು.