News Kannada
Thursday, June 01 2023
ಹಾಸನ

ಆಲೂರು: ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ, ಪೋಷಕರಿಂದ ರಸ್ತೆ ತಡೆದು ಪ್ರತಿಭಟನೆ

Alur: Parents of infant die due to negligence of doctors, block road, stage protest
Photo Credit : News Kannada

ಆಲೂರು:  ವೈದ್ಯ- ನರ್ಸ್‌ಗಳ ನಿರ್ಲಕ್ಷ್ಯದಿಂದಾಗಿ ಆಗತಾನೆ ಹುಟ್ಟಿದ ಮಗು ಕಣ್ಣು ಬಿಡುವುದಕ್ಕೂ ಮುನ್ನವೇ ಸಾವನ್ನಪ್ಪಿದ ಘಟನೆ ಆಲೂರು ತಾಲೂಕಿನ ಪಾಳ್ಯ ಆರೋಗ್ಯ ಕೇಂದ್ರದ ಮೇಲೆ ಕೇಳಿ ಬಂದಿದೆ.

ವೈದ್ಯರು ಫಾತಿಮಾ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿ ಹೆರಿಗೆ ಸಾಧ್ಯವಾಗದಿದ್ದರೂ ಬಲವಂತವಾಗಿ ಮಾಡಿಸಿದ್ದರಿಂದ ಮಗು ಮೃತ ಪಟ್ಟಿದೆ ಎಂಬ ಬಗ್ಗೆ ದೂರು ಗರ್ಭಿಣಿ ಜ್ಯೋತಿ ಕುಟುಂಬಸ್ಥ ರಿಂದ ಕೇಳಿ ಬಂದಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಆಸ್ಪತ್ರೆ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಸಿಂಗಟಕೆರೆ ಗ್ರಾಮದಿಂದ ಬುಧವಾರ ಸಂಜೆ ಹೊಟ್ಟೆ ನೋವು ಎಂದ ಗರ್ಭಿಣಿ ಜ್ಯೋತಿಯನ್ನು ಪಾಳ್ಯದ ಆರೋಗ್ಯ ಕೇಂದ್ರಕ್ಕೆ ಪತಿ ಸತೀಶ್ ಹಾಗೂ ಕುಟುಂಬಸ್ಥರು ಕರೆದುಕೊಂಡು ಬಂದಿದ್ದಾರೆ ಗರ್ಭಿಣಿಯ ಪರಿಸ್ಥಿತಿಯಬಗ್ಗೆ ವೈದ್ಯ ಡಾಕ್ಟರ್ ಫಾತಿಮಾ ಅವರನ್ನು ಕೇಳಿದಾಗ ಯಾವುದೇ ಸಮಸ್ಯೆ ಇಲ್ಲ ಗರ್ಭಿಣಿ ಹೊಟ್ಟೆಯಲ್ಲಿ ಮಗು ಆರೋಗ್ಯವಾಗಿದೆ ಇಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ನಾರ್ಮಲ್ ಹೆರಿಗೆ ಆಗುತ್ತದೆ ಎಂದು ತಿಳಿಸಿದ್ದಾರೆ ಆದರೆ ವೈದ್ಯ ಫಾತಿಮಾ ಹಾಗೆ ಹೇಳಿದ ಕೆಲವೇ ಸಮಯದಲ್ಲಿ ಮಗು ಮೃತಪಟ್ಟಿದೆ. ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಸ್ವಲ್ಪ ಸಮಯ ಕಳೆದ ನಂತರ ಗರ್ಭಿಣಿ ಹೊಟ್ಟೆ ನೋವಿನಿಂದ ಒದ್ದಾಡಿದ್ದಾರೆ ಯಾವ ವೈದ್ಯರು ವಾರ್ಡಗೆ ಬಂದಿಲ್ಲ ಗರ್ಭಿಣಿ ಜ್ಯೋತಿ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಅನುಪಸ್ಥಿತಿಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಬಲವಂತವಾಗಿ ಹೆರಿಗೆ ಮಾಡಿಸಿದ್ದಾರೆ ಮಗು ಹುಟ್ಟಿದ ಕೇವಲ ೧೦ ನಿಮಿಷ ಮಾತ್ರ ಉಸಿರಾಟ ನಡೆಸಿದೆ ಬಲವಂತವಾಗಿ ಹೆರಿಗೆ ಮಾಡಿದ ಕಾರಣ ಮಗು ಸಾವನ್ನಪ್ಪಿದೆ ಪಾಳ್ಯ ಆರೋಗ್ಯ ವೈದ್ಯಾಧಿಕಾರಿ ಫಾತೀಮಾ ಹಾಗೂ ಸಿಬ್ಬಂದಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಮೃತ ಮಗುವಿನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಪಾಳ್ಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆ ಫಾತೀಮಾ ಹಲವು ವರ್ಷಗಳಿಂದ ಪಾಳ್ಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಣ ಮಾಡುವ ಉದ್ದೇಶದಿಂದ ಸಿಬ್ಬಂದಿಗಳ ಜೊತೆ ಸೇರಿ ನಾರ್ಮಲ್ ಹೆರಿಗೆ ಮಾಡಿಸುವುದಾಗಿ ಹೇಳಿ ಹಣ ಪಡೆದು ಬಲವಂತವಾಗಿ ಹೆರಿಗೆ ಮಾಡಿಸುವ ಮೂಲಕ ಬಾಣಂತಿಯರು ಒಂಬತ್ತು ಹೊತ್ತು ತಿರುಗಿ ಕಣ್ಣು ಬೀಡುವದಕ್ಕಿಂತ ಮುಂಚೆ ತಮ್ಮ ಮಕ್ಕಳನ್ನು ಕಳೆದುಕೊಳ್ಳುವಂತಾಗಿದೆ ಇವರು ರಾಜಕೀಯವಾಗಿ ಪ್ರಬಲವಾಗಿ ಬೆಳೆದಿದ್ದಾರೆ ಯಾವುದೇ ಮುಲಾಜಿಗೂ ಒಳಪಡದೇ ಅಮಾನತ್ತು ಮಾಡಬೇಕು ಎಂದು ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದರು.

ಗರ್ಭಿಣಿ ಜ್ಯೋತಿ ಅಜ್ಜಿ ಕೆಂಚಮ್ಮ ಮಾತನಾಡಿ ವೈದ್ಯರ ನಿರ್ಲಕ್ಷದಿಂದ ಮಗು ಮರಣ ಹೊಂದಿದೆ ಸಮಯಕ್ಕೆ ಸರಿಯಾಗಿ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದರೆ ತಾಯಿ ಮಗು ಇಬ್ಬರೂ ಸುರಕ್ಷಿತವಾಗಿ ಮನೆ ಸೇರುತ್ತಿದ್ದರು ನನ್ನ ಮೊಮ್ಮಗಳು ಗರ್ಭಿಣಿಯಾದ ಮೊದಲಿನಿಂದಲೂ ಇದೆ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸುತ್ತಿದ್ದು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಬೇಕಾಬಿಟ್ಟಿ ಹೆರಿಗೆ ಮಾಡಿಸಿದ್ದರಿಂದ ಮಗುವಿನ ತಲೆ ಹಾಗೂ ಮೈಮೇಲೆ ಗಾಯಗಳಾಗಿದ್ದು ಮಗು ತಾಯಿಯ ಹೊಟ್ಟೆಯಿಂದ ಆಚೆ ಬಂದ ಕೇವಲ ೧೦ ನಿಮಿಷ ಮಾತ್ರ ಜೀವಂತವಾಗಿದ್ದು ನಂತರ ಸಾವನ್ನಪ್ಪಿದೆ ಎಂದು ಆರೋಪಿಸಿದರು.

See also  ಹಸಿರುಭೂಮಿ ಪ್ರತಿಷ್ಠಾನದಿಂದ ಸಾಮೂಹಿಕ ಶ್ರಮದಾನ

ಸತ್ಯ ಶಾಕ್ ಗೆ ಒಳಗಾಗಿರುವ ಬಾಣಂತಿ ಜ್ಯೋತಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ವೈದ್ಯಾದಿಕಾರಿ ಡಾಕ್ಟರ್ ಶಿವಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ ತಪ್ಪಿತಸ್ಥ ವೈದ್ಯೆ ಹಾಗೂ ಹೆರಿಗೆ ಮಾಡಿಸಿದ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು