News Kannada
Tuesday, June 06 2023
ಹಾಸನ

ಚನ್ನರಾಯಪಟ್ಟಣ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಸಿ.ಎನ್. ಬಾಲಕೃಷ್ಣ

MLA C.N. Manjunath performed the bhoomi pujan for road development works
Photo Credit : News Kannada

ಚನ್ನರಾಯಪಟ್ಟಣ: ಗುಲಸಿಂದ ಗ್ರಾಮದ ಪರಿಮಿತಿ ಯಲ್ಲಿ ಜನಸಂದಣಿ ಹಾಗೂ ವಾಹನ ದಟ್ಟನೆ ಹೆಚ್ಚಾಗಿರುವುದ ರಿಂದ ಅಪಘಾತಗಳನ್ನು ತಡೆ ಯುವ ನಿಟ್ಟಿನಲ್ಲಿ ರಸ್ತೆ ಅಗಲೀ ಕರಣಕ್ಕೆ ಕ್ರಮ ಕೈಗೊಂಡಿರು ವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಮಾಳೆ ಕೊಪ್ಪಲು ರಾಷ್ಟ್ರೀಯ ಹೆದ್ದಾರಿ೭೫ರ ಬೈಪಾಸ್ ರಸ್ತೆಯ ಬಳಿ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮೂರು ಕೋಟಿ ರೂ ಅನುದಾನದಲ್ಲಿ ೯ ಮೀಟರ್ ರಸ್ತೆ ಅಗಲೀಕರಣದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು.

ಅವರು ಮಾತನಾಡಿ ಗುಲಸಿಂದ ಗ್ರಾಮದ ಪರಿಮಿತಿ ಯಿಂದ ಬೈಪಾಸ್ ರಸ್ತೆಯವರೆಗೆ ೯ ಮೀಟರ್ ರಸ್ತೆ ಅಗಲೀಕರಣ ಗುಲಸಿಂದ ಗ್ರಾಮವು ಗ್ರಾ.ಪಂ. ಕೇಂದ್ರ ಸ್ಥಾನವಾದರಿಂದ ಗ್ರಾಮದ ಪರಿಮಿತಿಯಲ್ಲಿ ಎರಡು ಕಡೆ ಕೂಡ ಪ್ರಮಾಣದ ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಬಾಗೂರು ರಸ್ತೆ ಯಿಂದ ಮರುವನಹಳ್ಳಿ ಗ್ರಾಮದ ವರೆಗೆ ಮರು ಡಾಂಬರೀಕರಣ ಕುರುವಂಕ ಮತ್ತು ಕೆಲವು ಗ್ರಾಮಗಳ ಗ್ರಾಮದ ಪರಿಮಿತಿ ಯಲ್ಲಿ ಎರಡು ಬದಿ ಚರಂಡಿ ನಿರ್ಮಾಣ ಮಾಡಲಾಗುವು ದೆಂದು ತಿಳಿಸಿದರು.

ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಮಾಡುತ್ತಿದ್ದು ಗ್ರಾಮಗಳ ಪರಿಮಿತಿಯಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ನಿರ್ಮಿಸಲಾಗುವುದು.ರಸ್ತೆ ಕಾಮ ಗಾರಿಯಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವಂತೆ ಸೂಚಿಸಿದರು. ಹಾಗೂ ಎರಡನೇ ಹಂತದಲ್ಲಿ ಡಿವೈಡರ್ ಮತ್ತು ಹೆಚ್ಚುವರಿ ಯಾಗಿ ಎರಡು ಮೀಟರ್ ರಸ್ತೆ ಅಗಲೀಕರಣ ಮಾಡಲು ಗಮನಹರಿಸುವುದಾಗಿ ತಿಳಿಸಿದರು.

ಈ ಭಾಗ ಶೀತ ಪ್ರದೇಶವಾಗಿ ರುವುದರಿಂದ ಹಂತಹಂತವಾಗಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದರು. ಬಾಗೂರು ರಸ್ತೆಯಿಂದ ಬೈಪಾಸ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಯನ್ನು ಸಹ ಅಭಿವೃದ್ಧಿಪಡಿ ಸಲಾಗುವುದು.ಸ್ಥಳೀಯ ಗ್ರಾಮಸ್ಥರು ಗೊಬ್ಬರವನ್ನು ರಸ್ತೆಯ ಬದಿಯಲ್ಲಿ ಹಾಕಿ ಎರಡರಿಂದ ಮೂರು ಅಡಿ ಗುಂಡಿ ಬಿದ್ದು ರಸ್ತೆ ಹಾಳಾಗಿ ಅಪಘಾತಗಳಾಗುವ ಸನ್ನಿವೇಶ ಹೆಚ್ಚಾಗಿರುವುದರಿಂದ ಗೊಬ್ಬರವನ್ನು ತಮ್ಮ ಜಮೀನಿನಲ್ಲಿ ಹಾಕಿಕೊಳ್ಳಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗುಲಸಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಉಮೇಶ್, ಗಿರೀಶ್, ಅಣ್ಣೇಗೌಡ ಗ್ರಾಮದ ಮುಖಂಡರು  ಉಪಸಿತರಿದ್ದರು.

See also  ಬೇಲೂರು: ಶಿಕ್ಷಣದಿಂದ ವಂಚಿತರಾಗದೆ ಭವಿಷ್ಯ ರೂಪಿಸಿಕೊಳ್ಳಲು ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು