News Kannada
Thursday, March 30 2023

ಹಾಸನ

ಅರಕಲಗೂಡು: ಚಿರತೆಯನ್ನು ಬಿಸ್ಲೆ ಅರಣ್ಯಕ್ಕೆ ಬಿಟ್ಟ ಇಲಾಖೆ, ಸ್ಥಳೀಯರ ಆಕ್ರೋಶ

Arakalagud: Leopard released into Bisle forest, locals angry
Photo Credit : News Kannada

ಅರಕಲಗೂಡು : ತಾಲೂಕಿನಿಂದ ನಿಂದ ರಾತ್ರೋ ರಾತ್ರಿ ಬಿಸ್ಲೆ ಅರಣ್ಯಕ್ಕೆ ನಿಗೂಢವಾಗಿ ಅಪಾಯಕಾರಿ ಜಾನುವಾರು ಬೇಟೆ ಆಡುವ ಚಿರತೆಯನ್ನು ಅರಣ್ಯ ಇಲಾಖೆ ಬಿಟ್ಟು ಯಡವಟ್ಟು ಮಾಡಿಕೊಂಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟ ವ್ಯಾಪ್ತಿಯ ಬಿಸಿಲೆ ವ್ಯಾಪ್ತಿಯ ಮಾವಿನೂರು, ಆನೆಗುಂಡಿ , ಅರಣಿ , ಸುತ್ತಮುತ್ತ ೧೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಾನುವಾರು ಸಾಕು ನಾಯಿಗಳನ್ನು ರಾತ್ರೋರಾತ್ರಿ ಹಿಡಿದು ತಿನ್ನುತ್ತಿದ್ದ ಅಪಾಯಕಾರಿ ಚಿರತೆಯನ್ನು ಬಿಸ್ಲೆ ಆಸು ಪಾಸಿನಲ್ಲಿ ಬಿಟ್ಟಿದ್ದಾರೆ ಎಂದು ಸುತ್ತಮುತ್ತ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ ನಂತರ ಅರಣ್ಯ ಇಲಾಖೆ ಆಗಿನ ದಕ್ಷ ಅರಣ್ಯ ಅಧಿಕಾರಿ ಆರ್ ಎಫ್ ಮೋಹನ್ ಅವರ ನೆರವಿನೊಂದಿಗೆ ಅರಣ್ಯದ ನಡುವೆ ಬೋನು ಇಟ್ಟು ನರ ಹಂತಕ ಚಿರತೆಯನ್ನು ಸೆರೆಹಿಡಿದು ಬಿಸಿಲೆ ಅರಣ್ಯದಿಂದ ತೆರವುಗೊಳಿಸಲಾಗಿತ್ತು .

ಚಿರತೆ ತೆರವು ನಂತರ ಈ ಭಾಗದ ಜಾನುವಾರುಗಳು ಸಾಕು ನಾಯಿಗಳು ಚಿರತೆ ದಾಳಿಯಿಂದ ಮೃತಪಡುವ ಘಟನೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು ಈ ಬಗ್ಗೆ ಗ್ರಾಮಸ್ಥರು ನಿಟ್ಟುಸಿರ ಬಿಟ್ಟಿದ್ದರು.

ಇದೀಗ ಅರಕಲಗೂಡು ಭಾಗದಲ್ಲಿ ಇದೇ ಕೆಲಸವನ್ನು ಮುಂದುವರಿಸಿದ ಕಾಡು ಚಿರತೆ ಬಯಲು ಸೀಮೆಯಲ್ಲಿ ರೈತ ಜಾನುವಾರು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವ ಅಭ್ಯಾಸವನ್ನು ಮುಂದುವರಿಸಿತ್ತು .ಈ ಬಗ್ಗೆ ಅಲ್ಲಿನ ರೈತರು ಪ್ರತಿಭಟಿಸಿದ ನಂತರ ಅರಣ್ಯ ಇಲಾಖೆ ಬೋನಿನಲ್ಲಿ ಚಿರತೆಯನ್ನು ಸೆರೆ ಹಿಡಿದು ರಾತ್ರೋರಾತ್ರಿ ಸಾರ್ವಜನಿಕರಿಗೆ ಗೊತ್ತಾಗದಂತೆ ಬಿಸ್ಲೆ ಅರಣ್ಯಕ್ಕೆ ತಂದು ಚಿರತೆಯನ್ನು ಮತ್ತೆ ಬಿಟ್ಟಿದ್ದು. ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ .

ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ ಎಂಬ ಉದಾಸೀನ ಉತ್ತರ ಸಾರ್ವಜನಿಕರಿಗೆ ನೀಡಿದ್ದು ಸ್ಥಳೀಯ ಅರಣ್ಯ ಇಲಾಖೆ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಸಳೂರು ವಿಭಾಗದಲ್ಲಿರುವ ಆರ್ ಎಫ್ ಓ ಜಗದೀಶ್ ಇಂಥ ಸೂಕ್ಷ್ಮ ವಿಷಯಗಳಿಗೆ ಅಸಡ್ಡೆ ವಹಿಸುತ್ತಾರೆ. ಗ್ರಾಮಸ್ಥರು ಈ ಬಗ್ಗೆ ವಿಚಾರಿಸಿದರೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಮೌನವಾಗಿರುವುದು ಏಕೆ ಎಂಬುದು ಗ್ರಾಮಸ್ಥರ ಪ್ರಶ್ನೆ. ಒಂದು ವೇಳೆ ಮತ್ತೆ ಈ ಭಾಗದಲ್ಲಿ ಚಿರತೆ ದಾಳಿಯಿಂದ ಜಾನುವಾರು ಸಾಕುಪ್ರಾಣಿಗಳು ಮನುಷ್ಯರಿಗೆ ಯಾವುದೇ ರೀತಿ ಅಪಾಯ ಉಂಟಾದರೆ ಅರಣ್ಯ ಇಲಾಖೆಗೆ ಕಾರಣವಾಗಬಹುದು ಎಂಬುದು ಸ್ಥಳೀಯರ ಆರೋಪ.

See also  'ತುರ್ತು ಪರಿಸ್ಥಿತಿಯ ಆ ಭಯಾನಕ ಅವಧಿಯನ್ನು ನಾವು ಎಂದಿಗೂ ಮರೆಯಬಾರದು': ಪ್ರಧಾನಮಂತ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು