News Kannada
Tuesday, March 28 2023

ಹಾಸನ

ಹೊಳೆನರಸೀಪುರ: 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ

Holenarasipura: 66/11 KV power distribution station inaugurated
Photo Credit : News Kannada

ಹೊಳೆನರಸೀಪುರ: ಜಿಲ್ಲೆಯ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ವಿದ್ಯುತ್ ವಿತರಣಾ ಕೇಂದ್ರಗಳ ಅಗತ್ಯವಿದೆ ಎಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೆಚ್.ಡಿ.ರೇವಣ್ಣನವರು ತಿಳಿಸಿದರು.

ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ವತಿಯಿಂದ ಮೂರು ಕೋಟಿ ರೂಪಾಯಿಗಳಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಿರುವ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಸಮಾರಂಭಉದ್ದೇಶಿಸಿ ಮಾತನಾಡಿದರು.

ತಾವು ಅಧಿಕಾರದಲ್ಲಿದ್ದ ಅವಧಿ ಯಲ್ಲಿ ಒಂದೇ ಒಂದು ಪೈಸೆ ವಿದ್ಯುತ್ ದರವನ್ನು ಏರಿಸಿರಲಿಲ್ಲ ಈಗಿನ ಸರ್ಕಾರವು ವಿದ್ಯುತ್ ದರವನ್ನು ಏರಿಕೆ ಮಾಡಿ ಜನರಿಗೆ ಹೊರೆ ಹಾಕುತ್ತಿದ್ದಾರೆ, ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಸರಿಯಾಗಿ ರೈತರಿಗೆ ಎರಡು ಗಂಟೆ ವಿದ್ಯುತ್ ನೀಡುವಲ್ಲಿ ಸರ್ಕಾರವು ವಿಫಲವಾಗಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ದಿನವೂ ಕನಿಷ್ಠ ಬೆಳಿಗ್ಗೆ ಮತ್ತು ರಾತ್ರಿ ವಿದ್ಯುತ್ ನೀಡಬೇಕೆಂದು ಸಲಹೆಗಳನ್ನು ನೀಡಿದರು.

ತಾವು ಇಂಧನ ಸಚಿವರಾಗಿದ್ದಾಗ ಯಾವುದೇ ಪ್ರಮುಖ ನಿರ್ಧಾರ ಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳು ತ್ತಿದ್ದೆವು. ದಿನಕ್ಕೊಂದು ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಲಾಗಿತ್ತು ರಾಜ್ಯದಾದ್ಯಂತ 500 ಕ್ಕೂ ಹೆಚ್ಚಿನ ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಲು ಕ್ರಮವನ್ನು ಕೈಗೊಳ್ಳಲಾಯಿತು. ಈಗಾಗಲೇ ಇಂಧನ ಇಲಾಖೆಯ 48 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದ್ದು, ಕೆಲವು ರಾಜಕೀಯ ಪಕ್ಷಗಳು ಓಟಿಗಾಗಿ ಉಚಿತ ವಿದ್ಯುತ್ ಎಂಬ ಘೋಷಣೆ ಗಳನ್ನು ಮಾಡುತ್ತಿದ್ದು. ವಾರ್ಷಿಕ 9 ಸಾವಿರ ಕೋಟಿ ರೂಗಳು ಉಚಿತ ವಿದ್ಯುತ್ ನೀಡಲು ಬೇಕಾಗುತ್ತದೆ ಇದಕ್ಕೆ ಸಂಪನ್ಮೂಲ ಎಲ್ಲಿದೆ ಎಂದು ಪ್ರಶ್ನಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಇಂಧನ ಇಲಾಖೆ ಯನ್ನು ಲಾಭದಾಯಕವಾಗಿ ಮುನ್ನಡೆಸಲಾಗುತ್ತಿತ್ತು, ಬೆಸ್ಕಾಂ ನಲ್ಲಿ ತಾವು ಮಂತ್ರಿ ಯಾಗಿದ್ದಾಗ 500 ಕೋಟಿ ರೂಪಾಯಿಗಳ ಠೇವಣಿ ಇಡಲಾ ಗಿತ್ತು, ಈಗಿನ ಸರ್ಕಾರದ ಆಡಳಿತ ಜನರಿಗೆ ಬೇಸರ ತಂದಿದೆ. ತಾಲ್ಲೂಕಿನಲ್ಲಿ ಸೋಮನಹಳ್ಳಿ, ತಟ್ಟೆಕೆರೆ,ಪಡುವಲ ಹಿಪ್ಪೆ ಗ್ರಾಮಗಳು ಸೇರಿದಂತೆ ಮಂದಿನ ದಿನಗಳಲ್ಲಿ ಕನಿಷ್ಠ 4೦ ರಿಂದ 5೦ ಕ್ಕೂ ಹೆಚ್ಚಿನ ವಿದ್ಯುತ್ ವಿತರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಈ ಭಾಗದ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗವನ್ನು ನೀಡುವ ಅಶಯ ತಮ್ಮದಾಗಿದೆ ಎಂದು ತಿಳಿಸಿದರು. ವಿದ್ಯುತ್ ವಿತರಣಾ ಕೇಂದ್ರದ ಗುತ್ತಿಗೆದಾರರಾದ ಲೋಟಸ್ ಎಂಟರ್ ಪ್ರೈಸಸ್ ಮತ್ತು ಇಲಾಖೆಯ ಅಧಿಕಾರ ವೃಂದದ ವರನ್ನು ಶಾಸಕರು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಲೋಕೋ ಯೋಗಿ ಇಂಜಿನಿಯರ್ ಹೇಮಂತ್, ಅಧೀಕ್ಷಕ ಅಭಿಯಂತರರಾದ ಮಹೇಶ, ಉಮೇಶ, ಇಂಜಿನಿಯರ್ ಗಳಾದ ಸವಿತಾ,ಅನಿತಾ ಸಿದ್ದೇಶ್, ಮೋಹನ್ ಕುಮಾರ್, ಗೋಪಿ, ಜಿಲ್ಲಾಪಂಚಾಯತ್ ಸದಸ್ಯ ರಾದ ಕೃಷ್ಣೇಗೌಡ, ಗ್ರಾ.ಪಂ. ಅಧ್ಯಕ್ಷರುಗಳಾದ ಕಿರಣ್ ಕುಮಾರ್, ರಾಧಾ, ಹಾಸನ ಜಿಲ್ಲಾ ವಾರ್ತಾದಿಕಾರಿ ವಿನಯ ಚಂದ್ರ ಇದ್ದರು.

See also  ಸಕಲೇಶಪುರ: ಕಸ ವಿಲೇವಾರಿ ಮಾಡದೆ ಜಾತ್ರೆಗೆ ಸಿದ್ಧತೆ, ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು