News Kannada
Thursday, March 30 2023

ಹಾಸನ

ಅರಕಲಗೂಡು: ರಾಜಕೀಯವಾಗಿ ನನ್ನನ್ನು ತುಳಿಯಲು ಯತ್ನ – ಶಾಸಕ ಎ.ಟಿ. ರಾಮಸ್ವಾಮಿ

An attempt is being made to suppress me politically, says MLA A.T. Ramaswamy
Photo Credit : News Kannada

ಅರಕಲಗೂಡು: ಪ್ರಮುಖ ರಾಜಕೀಯ ಪಕ್ಷಗಳು ದುಡ್ಡಿದ್ದವರನ್ನು ಹುಡುಕುತ್ತಿದ್ದು ಪಾರ್ಟಿ ಫಂಡ್ ಎಷ್ಟು ಕೊಡುತ್ತಾರೆ ಎಂದು ನೋಡುವ ಸ್ಥಿತಿಗೆ ಪ್ರಜಾಪ್ರುಭುತ್ವ ತಲುಪಿದ್ದು ರಾಜಕೀಯವಾಗಿ ನನ್ನನ್ನು ತುಳಿಯಲಾಗುತ್ತಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಅಸಮಧಾನ ಹೊರಹಾಕಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲೇ ಪ್ರಾಮಾಣಿಕ ರಾಜ ಕಾರಣಿ ಎಂದು ಹೆಸರು ಗಳಿಸಿರುವ ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಅಕ್ರಮ ವಾಗಿ ಲೂಟಿ ಮಾಡಿದವರಿಗೆ ಮಣೆ ಹಾಕುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು ಯಾರು ಎಷ್ಟು ಖರ್ಚು ಮಾಡುತ್ತಾರೆ ಎನ್ನುವ ಸ್ಥಿತಿಗೆ ಬಂದಿದೆ ಎಂದು ವಿಷಾದಿಸಿದರು.

ಸಮಾಜ, ರಾಜಕೀಯ ಕೆಟ್ಟು ಹೋಗಿದೆ, ಪ್ರಜಾಪ್ರುಭುತ್ವ ಹಾಳಾಗಿದೆ ಎಂದು ಮಾತಿನಲ್ಲಿ ಹೇಳಿದರೆ ಪ್ರಯೋಜನ ಆಗುವು ದಿಲ್ಲ. ನಮ್ಮ ಕೊಡುಗೆ ಏನು ಎಂಬುದನ್ನು ಯೋಚಿಸಬೇಕು ಪ್ರಜಾಪ್ರಭುತ್ವದ ಮಾಲೀಕರು ಜನರು. ಅದು ಡುಡ್ಡಿನ ಪ್ರಭುತ್ವ ಇಲ್ಲವೇ ಜಾತಿಯ ಪ್ರುಭುತ್ವ, ಧರ್ಮದ ಪ್ರಭುತ್ವ ಆಗಬಾರದು.

ಜಾತ್ಯಾತೀತ, ಧರ್ಮನಿರಪೇಕ್ಷಿತ ರಾಷ್ಟ್ರ ಆಗಬೇಕು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಆ ದಿಕ್ಕಿನಲ್ಲಿ ಎಲ್ಲರೂ ಸಹಕಾರ ನೀಡಿದರೆ ಮಾತ್ರ ಸಾಧ್ಯ. ಅದೆಲ್ಲೆ ದೊಡ್ಡ ವಿಷಯಗಳು ದೊಡ್ಡದಾಗಿ ಚರ್ಚೆ ಆಗಬೇಕು, ಕೆಲವು ನಿಮಗೆ ಅರ್ಥ ಆಗುತ್ತದೆ, ಇನ್ನು ಕೆಲವರಿಗೆ ಅರ್ಥವಾಗುವುದಿಲ್ಲ. ಮೇಲೇಯೇ ಕೆಟ್ಟುಬಿಟ್ಟಿದೆ, ಇದನ್ನು ಒಬ್ಬರು ಇಬ್ಬರು ಸುಧಾರಣೆ ಮಾಡಲು ಸಾಧ್ಯವಾಗದು. ಜನಸಮೂಹ ಏಳಬೇಕು, ಯುವಕರು ಎಚ್ಚರವಾಗಬೇಕು, ಒಳ್ಳೆಯದು ಕೆಟ್ಟದು ಯಾವು ದೆಂದು ಆಲೋಚಿಸಬೇಕು, ಒಳ್ಳೆಯದಕ್ಕೆ ಪ್ರೋತ್ಸಾಹಿಸಬೇಕು. ಇಲ್ಲವಾ ದರೆ ನಾವು ನಂಬಿರುವ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯದೆ ಸಾಯುತ್ತವೆ. ಇವೆಲ್ಲ ಸಾಯಲು ಬಿಡುವುದಿಲ್ಲ ಎನ್ನುವ ವಿಶ್ವಾಸ ಇನ್ನೂ ಕೂಡ ನನ್ನಲ್ಲಿ ಉಳಿದಿದೆ. ಅದನ್ನು ನಮ್ಮ ಯುವಕರು ಮುಂದಿನ ಪ್ರಜೆಗಳು ಉಳಿಸಿ ಬೆಳೆಸುವ ಕೆಲಸವನ್ನು ನೀವೆಲ್ಲಾ ಸೇರಿ ಮಾಡಬೇಕು. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.

See also  ಹಾಸನ: ಸಂಕ್ರಾಂತಿ ಸಂಭ್ರಮ, ವ್ಯಾಪಾರ ಬಲು ಜೋರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು