News Kannada
Saturday, March 25 2023

ಹಾಸನ

ಬೇಲೂರು: ಬೆಂಕಿಗಾಹುತಿಯಾದ ಅಡಿಕೆ ಗಿಡ-ಭತ್ತದ ಹುಲ್ಲು

Photo Credit : News Kannada

ಬೇಲೂರು: ಬೆಂಕಿ ಅವಘಡಕ್ಕೆ ಭತ್ತದ ಹುಲ್ಲು ಹಾಗೂ ಅಡಿಕೆ ಗಿಡ ಸಂಪೂರ್ಣ ಭಸ್ಮಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಹುನುಗುನಹಳ್ಳಿ ಗ್ರಾಪಂ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದ ಚಂದ್ರೇಗೌಡ ಎಂಬುವರಿಗೆ ಸೇರಿದ ಸುಮಾರು ೪ ಎಕರೆ ಭತ್ತದ ಹುಲ್ಲಿಗೆ ಸಂಜೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದ್ದು ಪಕ್ಕದಲ್ಲಿ ಇದ್ದ ಅಡಿಕೆ ತೋಟಕ್ಕೂ ಸಹ ಬೆಂಕಿ ವ್ಯಾಪಿಸಿ ಸುಮಾರು ೧೦೦ ಅಡಿಕೆ ಗಿಡ, ಫಸಲಿಗೆ ಬಂದ ಬಾಳೆಗಿಡ ಸೇರಿದಂತೆ ಇನ್ನಿತರ ಕೃಷಿ ಪರಿಕರಗಳು ಬೆಂಕಿಗೆ ಆಹುತಿಯಾಗಿದೆ.

ವಿಷಯ ತಿಳಿದು ಗ್ರಾಮಸ್ಥರೆಲ್ಲಾ ಸೇರಿ ಬೆಂಕಿ ನಂದಿಸಲು ಹರ ಸಾಹಸಪಟ್ಟರು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾದರು.

ಗ್ರಾಪಂ ಉಪಾಧ್ಯಕ್ಷ ಹರೀಶ್ ಮಾತನಾಡಿ, ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಬೆಂಕಿ ವ್ಯಾಪಿಸುತ್ತಿದ್ದು ಬಡ ಕುಟುಂಬ ಕಷ್ಟ ಪಟ್ಟು ದುಡಿದ ಸುಮಾರು ೩ ಲಕ್ಷ ಮೌಲ್ಯದ ಭತ್ತದ ಹುಲ್ಲು ಸಂಪೂರ್ಣ ನಾಶವಾಗಿದೆ. ಫಸಲಿಗೆ ಬಂದಂತ ಅಡಿಕೆ, ಬಾಳೆ, ತೆಂಗು ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದ್ದು ಅವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

See also  ಬೇಲೂರು: ಕುರಿಗಳ ತಾಣವಾದ ಪುರಸಭೆ ಪಾರ್ಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು