News Kannada
Wednesday, March 29 2023

ಹಾಸನ

ಬೇಲೂರು: ವೀರಯೋಧ ಶಿವಕುಮಾರ್ ನಿಧನ

Belur: Veteran Shivakumar passes away
Photo Credit : News Kannada

ಬೇಲೂರು: ನಗರದ ಬಂಟೇನಹಳ್ಳಿ ಗ್ರಾಮದ ಶಿವಕುಮಾರ್ ಬಿ.ಆರ್ (೫೬) ಎಂಬ ವೀರ ಯೋಧ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿಳೆದಿದ್ದಾರೆ.

ನೆನ್ನೆ ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ ಬಳಿಕ ಶಿವಕುಮಾರ್ ರವರ ಪಾರ್ಥಿವ ಶರೀರವನ್ನು ಸ್ವಗ್ರಾಮವಾದ ಬಂಟೇನಹಳ್ಳಿ ಗ್ರಾಮಕ್ಕೆ ಬಾರತೀಯ ಸೇನಾ ಸಬ್ ಇನ್ಸ್ ಪೆಕ್ಟರ್ ನೇತೃತ್ವದ ತಂಡದೊಂದಿಗೆ ಆಗಮಿಸಿ,ಪಾರ್ಥಿವ ಶರೀರ ವನ್ನು ಶಿವಕುಮಾರ್ ಕುಟುಂಬಸ್ಥರಿಗೆ ರವಾನಿಸಲಾಯಿತು.

ನಂತರ ಸಾರ್ವಜನಿಕರಿಗೆ ಕೆಲ ಕಾಲ ಪಾರ್ಥೀವ ಶರೀರ ವನ್ನು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು,ತಾಲ್ಲೂಕು ದಂಢಾಧಿಕಾರಿ ರಮೇಶ್, ಹಾಗೂ ಶಾಸಕ ಕೆ.ಎಸ್.ಲಿಂಗೇಶ್,ಸರ್ಕಲ್ ಇನ್ಸ್‌ಪೆಕ್ಟರ್ ರವಿಕಿರಣ್,ಹಾಗೂ ಪೋಲೀಸ್ ಸಿಬ್ಬಂದಿ,ನಾಗೇಶ್.ಎ.ಎಸ್.ಐ. ಮುಖ್ಯಪೇದೆ ಸುರೇಶ್. ಶಾಂತ ಕುಮಾರ್ ಚೇತನ್.ಉಮೇಶ್ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಇನ್ನೂ ಶಿವಕುಮಾರ್ ೧೯೯೪ ರಲ್ಲಿ ಸೇನೆಗೆ ಸೇರಿ,ಉತ್ತಮ ದೇಶ ಸೇವೆ ಮಾಡುವ ಜೊತೆಗೆ ಎಲ್ಲರ ಜೊತೆ ಉತ್ತಮ ಸಂಭಂದ ಇಟ್ಟುಕೊಂಡಿದ್ದರು ಎನ್ನಲಾಗಿದ್ದು, ಸ್ವಗ್ರಾಮವಾದ ಬಂಟೇನಹಳ್ಳಿಗ್ರಾಮದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.

ಶಿವಕುಮಾರ್ ರವರು, ಪತ್ನಿ ವಿಜಯಕುಮಾರಿ, ಶರತ್ ಹಾಗೂ ಅಮಿತ್ ಎಂಬ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

See also  ಸೌಧಿಯಲ್ಲಿ ಅಪಘಾತ: ಹಾಸನದ ಯುವಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು