News Kannada
Thursday, March 23 2023

ಹಾಸನ

ಕೊಣನೂರು: ಜೆಡಿಎಸ್‌ನಿಂದ ಹೊರದಬ್ಬಿರುವುದನ್ನು ನಾನು ಸವಾಲಾಗಿ ಸ್ವಿಕರಿಸಿದ್ದೇನೆ ಎಂದ ರಾಮಸ್ವಾಮಿ

I have taken up the challenge of being expelled from THE JD(S), says Ramaswamy
Photo Credit : News Kannada

ಕೊಣನೂರು: ನನ್ನನ್ನು ಕೆಟ್ಟವನು ಎಂದು ಬಿಂಬಿಸಿ ನನ್ನನ್ನು ಹೊರದಬ್ಬಿರುವುದನ್ನು ನಾನು ಸವಾಲಾಗಿ ಸ್ವಿಕರಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರುವವರೆಗೆ ಇಂತಹವರು ನನ್ನ ಮೈ ಮೇಲಿನ ಒಂದು ರೋಮ ವನ್ನು ಮುಟ್ಟಲಾಗುವುದಿಲ್ಲ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಹೋಬಳಿಯ ಚಿಕ್ಕಬೊಮ್ಮನ ಹಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕ ಎ.ಟಿ.ರಾಮಸ್ವಾಮಿಯವರ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು ಹಳ್ಳಿಮೈಸೂರು ಹೋಬಳಿಯ ಭಾಗದ ರೈತರು ಕಳೆದ ೩೦. ೪೦ ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಮಂಜೂರಾತಿ ನೀಡಲು ಶಾಸಕನಾಗಿ ನಾನು ಆದೇಶ ನೀಡಿದರೆ ನನಗೆ ಒಳ್ಳೆಯ ಹೆಸರು ಬಂದು ಬಿಡುತ್ತದೆ ಎಂಬುದನ್ನು ಸಹಸದೆ ಅವರಿಗೆ ಮಂಜೂರಾತಿ ಯನ್ನು ನೀಡುವ ಬದಲು ರಾಮ ಸ್ವಾಮಿಯವರಿಗೆ, ಅಧಿಕಾರಿಗಳಿಗೆ ಕಡತ ತಯಾರು ಮಾಡಿಡಬೇಡಿ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನನ್ನ ಮೇಲೆ ಪಿತೂರಿ ಮಾಡು ವುದು ಕಳೆ ಒಂದು ವರ್ಷದಿಂದ ನಡೆದುಕೊಂಡು ಬಂದಿದ್ದು ಶ್ರವಣೂರು ಕೃಷಿ ಪತ್ತಿನ ಬ್ಯಾಂಕ್ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿಯ ರೈತರು ನಾವು ಸಾಲವನ್ನೆ ಪಡೆದಿಲ್ಲ ಆದರೂ ನಮ್ಮ ಪಹಣೆಗಳ ಮೇಲೆ ಸಾಲ ತೆಗೆದುಕೊಂಡಿದ್ದಾರೆ ಎಂದು ಬಂದಿದೆ ಎಂದು ಅಲವತ್ತುಕೊಂಡರು, ರೇವಣ್ಣನವರು, ಬ್ಯಾಂಕಿನ ಅಧಿಕಾರಿ ಗಳು ಇದ್ದ ಆ ಸಮಾರಂಭದಲ್ಲಿ ನಾನು ರೈತರಿಗೆ ಇಲ್ಲಿ ಮೋಸವಾಗುತ್ತಿದೆ, ಸಾಲವನ್ನೆ ಪಡೆಯದ ರೈತರ ಪಹಣಿಯಲ್ಲಿ ಸಾಲವಿದೆ ಎಂದು ಬರುತ್ತಿರುವವುದರ ಹಿನ್ನೆಲೆ ರೈತರಿಗೆ ಮೋಸವಾಗುತ್ತಿದೆ ಎಂದು ಹೇಳಿದೆ. ಈ ವಿಷಯವನ್ನು ಚರ್ಚೆ ಮಾಡಬೇಡಿ ಎಂದರು ಇಂತಹ ಅನ್ಯಾಯಗಳನ್ನು ನೋಡಿಕೊಂಡು ನಾನು ಶಾಸಕನಾ ಗಿರಲು ಸಾಧ್ಯವಿಲ್ಲ ಎಂದು ಹೇಳಿದಕ್ಕೆ ನನ್ನನ್ನು ಹೊರದಬ್ಬುವ ಕೆಲಸವಾಯಿತು.

ಹಾಸನದ ಚನ್ನಪಟ್ಟಣದ ಕಲ್ಯಾಣ ಮಂಟಪದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಕುರಿತು ನಡೆದ ಸಭೆಯಲ್ಲಿ ನನ್ನನ್ನು ಹೊರತುಪಡಿಸಿ ಎಲ್ಲರೂ ಪ್ರಜ್ವಲ್ ರೇವಣ್ಣರಿಗೆ ಟಿಕೆಟ್ ಕೊಡಿ ಎಂದರೂ, ವಯಸ್ಸಾಗಿರುವ ಮಾಜಿ ಪ್ರಧಾನಿಯವರನ್ನ ತಮ್ಮ ಕ್ಷೇತ್ರಬಿಟ್ಟು ಬೇರೆಡೆಗೆ ಕಳುಹಿಸುವುದು ನನಗೆ ಇಷ್ಟವಿರದ ಕಾರಣ ನಾನು ಅದಕ್ಕೆ ಸಹಮತಿಸಲಿಲ್ಲ. ಅಂದಿನಿಂ ದಲೆ ನನ್ನ ಮೇಲೆ ದ್ವೇಷ ಪ್ರಾರಂಭವಾಯಿತು. ಸಂಸದ ಪ್ರಜ್ವಲ್ ಮೇಲೆ ಎ.ಮಂಜು ಹಾಕಿರುವ ಕೇಸನ್ನು ರಾಜಿ ಮಾಡಿಕೊಳ್ಳುವ ಸಲುವಾಗಿ, ತಮ್ಮ ಸ್ವಾರ್ಥಕ್ಕಾಗಿ ನನ್ನನ್ನು ಬಲಿತೆಗೆದುಕೊಳ್ಳಲು ಹೊರಟಿದ್ದಾರೆ ಎಂದು ಶಾಸಕ ರೇವಣ್ಣರ ಮೇಲೆ ಆರೋಪಿಸಿದರು.

ನಾನು ಜನಸಾಮಾನ್ಯರ ಪ್ರತಿನಿಧಿ, ನಿಮ್ಮಗಳಿಗಾಗಿ ರಾಜಕಾರಣವನ್ನು ಮಾಡುತ್ತಿರುವವನು ನಾನು, ನನ್ನ ಜೀವವರುವರೆಗೂ ನಿಮ್ಮ ಕೈ ಬಿಡುವುದಿಲ್ಲ ನಾನು ರಾಜಕಾರಣದಲ್ಲಿರುವವರೆಗೂ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ. ತಾಲ್ಲೂಕಿನ ಘನತೆ ಗೌರವ ಹೆಚ್ಚಿಸಲು ಶ್ರಮಿಸುತ್ತೇನೆ. ನಿಮ್ಮೆಲ್ಲರ ತೀರ್ಮಾನದ ಮೇರೆಗೆ ನಿಮ್ಮೊಂದಿಗೆ ಇರುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಡೆಯನ್ನು ನಿಮ್ಮ ಜೊತೆಗೆ ತೀರ್ಮಾನಿಸುತ್ತೇನೆ ಎಂದರು.

ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ವಿವಿಧ ಮುಖಂಡರು ರಾಮಸ್ವಾಮಿಯವರು ರಾಜ ಕೀಯವಾಗಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಭದ್ಧರಾಗಿ ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

See also  ನವದೆಹಲಿ: ಚರ್ಚ್ ಕಟ್ಟಡದ ಗೋಡೆ ಕುಸಿತ, ಓರ್ವನಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು