News Kannada
Sunday, April 02 2023

ಹಾಸನ

ಹಾಸನ: ಆಣೆ ಪ್ರಮಾಣಕ್ಕೆ ಸಿದ್ಧ, ಶಿವಲಿಂಗೇಗೌಡ ವಿರುದ್ಧ ರೇವಣ್ಣ ಗುಡುಗು

Ready to compromise with Manju, take oath: Revanna
Photo Credit : News Kannada

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎ. ಮಂಜು ನಡುವಿನ ಲೋಕಸಭೆ ಚುನಾವಣೆ ವಿಚಾರ ಪ್ರಕರಣ ನ್ಯಾಯಾಲ ಯದಲ್ಲಿದ್ದು,ಈ ಸಂಬಂಧ ನಾನು ರಾಜಿ ಮಾಡಿಕೊಂಡಿದ್ದರೆ ನನಗೆ ಮಂಜುನಾಥ ಸ್ವಾಮಿ ಶಿಕ್ಷೆ ನೀಡಲಿ ಎಂದು ಮಾಜಿ ಸಚಿವ ಎಚ್. ಡಿ ರೇವಣ್ಣ ಸವಾಲು ಹಾಕಿದರು.

ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಚಿವ ಎ.ಮಂಜು ಜೊತೆ ಮಗನಿಗಾಗಿ ರೇವಣ್ಣ ರಾಜಿ ಮಾಡಿಕೊಂ ಡಿದ್ದಾರೆ ಎಂದು ಎ.ಟಿ. ರಾಮಸ್ವಾಮ ಹೇಳಿಕೆ ನೀಡುರುವುದು ಸತ್ಯಕ್ಕೆ ದೂರವಾಗಿದೆ ಎಂದರು. ನಾನು ಮತ್ತೆ ಎ.ಮಂಜು ಕಳೆದ ಒಂದು ವರ್ಷದಿಂದ ಸಂಪರ್ಕದ ಲ್ಲಿದ್ದರೆ ಅದನ್ನು ಸಾಬೀತುಪಡಿಸಲಿ. ರಾಮಸ್ವಾಮಿ ಏನು ಹೇಳುತ್ತಾರೆ.  ಆ ಶಿಕ್ಷೆಗೆ ನಾನು ಸಿದ್ಧ ಎಂದು ರೇವಣ್ಣ ಗುಡುಗಿದರು.

ಸುಖಾಸುಮ್ಮನೆ ಆರೋಪ ಮಾಡ ಬಾರದು. ಪ್ರಜ್ವಲ್ ರೇವಣ್ಣ ಮತ್ತು ಎ. ಮಂಜು ನಡುವಿನ ಲೋಕಸಭೆ ಚುನಾವಣೆ ವಿಚಾರದ ಪ್ರಕರಣ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ ಎಂದರು.

ಎ.ಮಂಜು ಪಕ್ಷಕ್ಕೆ ಬಂದರೆ ನಾನು ಬೇಡ ಅನ್ನಲು ಆಗುತ್ತದೆಯೇ? ಅದು ಪಕ್ಷದ ನಿರ್ಧಾರ.  ಕೆಲವರು ಪಕ್ಷದಲ್ಲೇ ಇದ್ದುಕೊಂಡು ಚೂರಿ ಇರಿದರು ಎಂದು ಆರೋಪಿಸಿದ ರೇವಣ್ಣ ಅವರು ನಾನು ಅರಕಲಗೂಡು ಕ್ಷೇತ್ರದಲ್ಲಿ ಯಾವುದೇ ಗುಂಪುಗಾರಿಕೆ ಮಾಡಿಲ್ಲ. ಇತ್ತೀಚೆಗೆ ಕೆ. ಟಿ. ರಾಮ ಸ್ವಾಮಿ ಅವರಿಗೆ ಟಿಕೆಟ್ ನೀಡ ಬೇಡಿ ಎಂದು ನನ್ನ ಮನೆಗೆ ಬಂದಂ ತಹ ನೂರಾರು ಮಂದಿಯನ್ನು ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿ ವಾಪಸ್‌ ಕಳುಹಿಸಿದ್ದೇನೆ, ಇದೀಗ ನನ್ನ ವಿರುದ್ಧ ಹೇಳಿಕೆ ನೀಡಿರುವ ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.

ಮಾಜಿ ಪಿಎಂ ಎಚ್.ಡಿ. ದೇವೇಗೌಡರನ್ನು ಹೊರಗೆ ಕಳಿಸಿದರು ಎಂದು ಹೇಳಿದ್ದಾರೆ ಆ ಒಂದು ವಿಚಾರವನ್ನು ಬಹಿರಂಗ ಪಡಿಸಲು ಎರಡು ವರ್ಷ ಬೇಕೇ ಎಂದು ಪ್ರಶ್ನಿಸಿದರು, ಸೀಟ್ ಗಾಗಿ ಯಾರ ಮನೆ ಬಾಗಿಲಿಗೂ ಹೋಗಲ್ಲ ಎಂದು ಹೇಳಿದ್ದರು .ಆದರೆ ಎರಡು ವರ್ಷದಿಂದ ರಾಮಸ್ವಾಮಿಯವರು ಕಾಂಗ್ರೆಸ್ ಬಾಗಿಲನ್ನು ತಟ್ಟುತ್ತಿರುವು ದು ಎಲ್ಲರಿಗೂ ಗೊತ್ತಿದೆ. ಜೆಡಿ ಎಸ್ ನಿಂದ ಹೊರ ಹೋಗುವವರಿಗೆ ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.

ರಾಮಸ್ವಾಮಿಯವರು ಬೆಂಗ ಳೂರಿನಲ್ಲಿ ನಡೆದ ಜಲಧಾರೆ ಯಾ ತ್ರೆಗೂ ಬರಲಿಲ್ಲ ಹಾಸನದಲ್ಲಿ ನಡೆ ದಂತ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ , ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡರಿಗೂ ದೇವರು ಒಳ್ಳೆಯದು ಮಾಡಲಿ ೧೫ ವರ್ಷ ಜೆಡಿಎಸ್ ಪಕ್ಷದಲ್ಲಿ ಅಧಿ ಕಾರ ಅನುಭವಿಸಿದ್ದಾರೆ. ನಾನು ದೇವರಾಣೆಗೂ ಈ ಪಕ್ಷವನ್ನು ಬಿಡಲ್ಲ ಎಂದು ಕುಮಾರಸ್ವಾಮಿ ಅವರ ಮನೆಯಲ್ಲಿ ಹೇಳಿದ್ದರು, ರಾಗಿ ಕಳ್ಳತನ ವಿಚಾರದಲ್ಲಿ ಧರ್ಮ ಸ್ಥಳ ಹೋಗಿ ಮಂಜುನಾಥ ಸ್ವಾಮಿ ಯ ಆಣೆ ಮಾಡಿದ ಶಿವಲಿಂಗೇ ಗೌಡರು ಈ ವಿಚಾರದಲ್ಲಿ ಆಣೆ ಮಾಡಲಿ ಎಂದು ಸವಾಲು ಹಾಕಿದರು.

See also  ಆಲೂರು: ಅಂಗಡಿ ಬೀಗ ಮುರಿದು ಕಳ್ಳತನ

ಕುಮಾರಸ್ವಾಮಿ ದೇವೇಗೌಡ ರನ್ನು ನೋಡಿ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡರು ಹೇಳಿ ದ್ದರು  ನಾನೇ ನನ್ನ ಮಗನನ್ನು ರಾಜೀನಾಮೆ ಕೊಡಿಸಿ ನಿಮ್ಮನ್ನು ಎಂಎಲ್ಸಿ ಮಾಡುವೇ ಎಂದು ಶಿವಲಿಂಗೇ ಗೌಡರಿಗೆ ಹೇಳಿದ್ದೆ. ನಾವು ಪ್ರಜ್ವಲ್ ಅವರನ್ನು ಎಂಪಿ ಮಾಡುವ ವಿಚಾರ ದಲ್ಲಿ ಏಕ ಪಕ್ಷಿಯ ನಿರ್ಧಾರ ಕೈಗೊಂ ಡಿಲ್ಲ ಎಂದು ಸಮರ್ಥಿಸಿಕೊಂಡರು.

ಧೃತರಾಷ್ಟ್ರರಂತವರಿಂದ ಕುಮಾರಸ್ವಾಮಿ ಕೆಟ್ಟರು: ಕುಮಾರಸ್ವಾಮಿ ಅವರು ದೃತರಾಷ್ಟ್ರನನ್ನು ಇಟ್ಟುಕೊಂಡರು. ಆದ್ದರಿಂದ ಕಳೆದ ಬಾರಿ ಸರ್ಕಾರ ರಚನೆ ವೇಳೆ ಸಂಕಷ್ಟ ಎದುರಿಸಿದರು ರಾಮ- ಆಂಜನೇಯನನ್ನು ಇಟ್ಟುಕೊಂಡಿದ್ದರೆ ಬುಜಕ್ಕೆ ಭುಜ ಕೊಡುತ್ತಿದ್ದರು ಎಂದು ಟೀಕಿಸಿದ ಅವರು ಬೆಳಗಾದರೆ ಕುಮಾರಸ್ವಾಮಿ ಅವರ ದರ್ಶನ ಮಾಡುತ್ತಿದ್ದ , ಕುಮಾರಸ್ವಾಮಿ ಡಿಕೆ ಶಿವಕುಮಾರ್ ಜೋಡೆತ್ತು ಎಂದು ಅವರೇ ಹೇಳುತ್ತಿದ್ದರು ಇದೀಗ ಯಾವ ಮಟ್ಟಕ್ಕೆ ಮಾತನಾಡುತ್ತಿದ್ದಾರೆ ನೋಡಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಹಾಸನ ಜೆಡಿಎಸ್ ಟಿಕೆಟ್ ಗೊಂದಲ ವಿಚಾರವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪುನರುಚ್ಚರಿಸಿದ  ಅವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ತನಿಖೆ ಮಾಡಲಿ: ಡಿಸಿಸಿ ಬ್ಯಾಂಕ್ ಮೂಲಕ ರೈತರ ಸಾಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಎ.ಟಿ ರಾಮಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು ಈ ವಿಚಾರವಾಗಿ ಯಾ ವುದೇ ತನಿಖೆಗೆ ಸಿದ್ದ, ಸಹಕಾರಿ ಬ್ಯಾಂಕುಗಳಲ್ಲಿ ಜಾರಿಯಲ್ಲಿರುವ ನಿಯಮದಂತೆ ಯಾವುದೇ ಯೋಜನೆಯ ಹಣವು ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ.  ಕೆಲವು ಲೋಪ ದೋಷದಿಂದ ಪಹಣಿಯಲ್ಲಿ ಸಾಲ ಪಡೆದಿರುವ ಬಗ್ಗೆ ನಮೂದಾ ಗಿರಬಹುದು ಈ ಬಗ್ಗೆ ಎ.ಟಿ ರಾಮಸ್ವಾಮಿ ಅವರೇ ಉಸ್ತುವಾರಿ ವಹಿಸಿಕೊಂಡು ತನಿಖೆಗೆ ಶಿಫಾರಸು ಮಾಡಲಿ ಎಂದು ಸವಾಲು ಹಾಕಿದರು.

ಡಿಕೆಶಿ ವಿರುದ್ದ ಏಕವಚನದಲ್ಲಿ ವಾಗ್ದಾಳಿ:  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇವಣ್ಣ ಅವರು ನನಗೆ ಆರಡಿ, ಮೂರಡಿ ಜಾಗ ಸಾಕು, ನನಗೆ ಕಾರಿನಲ್ಲಿಯೇ ಕುಳಿತರು ನಿದ್ದೆ ಬರುತ್ತದೆ. ಬೇಕಾದರೆ ಡಿಕೆ ಶಿ ಅವರು ಇನ್ನೂ ಎರಡು ಅಡಿ ಹೆಚ್ಚಾಗಿ ಜಾಗ ಬಳಸಿಕೊಳ್ಳಲಿ ಎಂದು ಲೇವಾಡಿ ಮಾಡಿದರು.

ನಾನು ನನ್ನ ಮನೆಗೋಸ್ಕರ ಫ್ಲೈ ಓವರ್ ಮಾಡಿಕೊಂಡಿ ದ್ದೇನೆಯೇ, ಪರಿಸ್ಥಿತಿ ನೋಡಿ ಮಾತನಾಡಬೇಕು ಒಂದು ಪಕ್ಷದ ಅಧ್ಯಕ್ಷ ಈ ರೀತಿ ಮಾತನಾಡಬಾರದು, ಅವನಿಗೆ ಮಾನ ಮರ್ಯಾದೆ ಇದೆಯೇ, ಎಂದು ಏಕವಚನದಲ್ಲಿಯೇ ಜರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು