News Kannada
Wednesday, October 04 2023
ಹಾಸನ

ಬೇಲೂರು: ಕ್ಷುಲ್ಲಕ ಕಾರಣಕ್ಕೆ ಮಾರಾಣಾಂತಿಕ ಹಲ್ಲೆ

Belur: A deadly attack over a trivial issue
Photo Credit : News Kannada

ಬೇಲೂರು: ನಗರದ ನೆಹರು ನಗರ ಬಡಾವಣೆಯಲ್ಲಿ ವಾಸವಾಗಿರುವ ರುದ್ರಮ್ಮ ಕೋಂ ಚಂದ್ರ ಶೇಖರ್ ಎಂಬುವರಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಬೇಲೂರು ಪೋಲೀಸ್ ಠಾಣೆಯಲ್ಲಿ ನಡೆದಿದೆ.

ಬೇಲೂರು ತಾಲ್ಲೂಕು ಕಸಬಾ ಹೋಬಳಿ ಮುತ್ತುಗನ್ನೆ ಗ್ರಾಮದ ಸರ್ವೆ ನಂ ೦೭ ರ ಲ್ಲಿ ೧ ಎಕರೆ ೨೦ ಗುಂಟೆ ಜಮೀನನ್ನು ಸುಮಾರು ೩೦ ವರ್ಷದಿಂದಲೂ ಸಾಗು ಮಾಡಿ ಕೊಡು ಬಂದಿದ್ದು.ಹಾಗೂ ಅದೇ ಜಮೀನಿನಲ್ಲಿ ಕೊಳವೆ ಬಾವಿಯನ್ನು ಸಹ ಕೊರೆಯಿಸಿ, ಉಳುಮೆ ಮಾಡಿದಾಗಿನಿಂದಲೂ ಜೋಳ,ಮೆಣಸಿನ ಗಿಡ,ಬದನೆ ಗಿಡ ಸೇರಿದಂತೆ ಹಲವಾರು ಬೆಳೆ ಗಳನ್ನು ಬೆಳೆಯುತ್ತಿರುತ್ತಾರೆ. ಆದರೆಏಕಾಏಕಿ ಯೋಗೇಶ್, ಬಸವರಾಜು, ಆಶಾ,ಜಯಮ್ಮ ಇವರ ಕುಟುಂಬ ಸುಳ್ಳು ದಾಖಲಾತಿ ಸೃಷ್ಠಿಸಿ,ನಮ್ಮ ಜಮೀನನ್ನು ತಮ್ಮ ಜಮೀನೆಂದು, ಪಸಲು ಬಂದಿರುವ ಬದನೆ ಕಾಯಿ ಬೆಳೆಯನ್ನು ನಾಶ ಮಾಡಿ, ನಮ್ಮ ಕುಟುಂಬದ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಚಂದ್ರ ಶೇಖರ್ ಅಳಲು ತೋಡಿಕೊಂಡಿದ್ದಾರೆ.

ಜೊತೆಗೆ, ನಮ್ಮ ಜಮೀನಿಗೆ ಹೊಂದಿಕೊಡಂತೆ ೨೦ ಗುಂಟೆ ಸರ್ಕಾರಿ ಗೋಮಾಳವಿದ್ದು,೩೦ ವರ್ಷದಲೂ ನಾನೆ ಸಾಗು ಮಾಡಿಕೊಂಡು ಬರುತ್ತಿದ್ದು, ಕಲಂ ೫೭ ರಲ್ಲಿ ಅರ್ಜಿ ಸಹ ಹಾಕಿದ್ದೇನೆ. ಆದರೆ ಮುತ್ತುಗನ್ನೆ ಗ್ರಾಮದ ವಾಸಿ ಬಸವರಾಜು ರವರ ಕುಟುಂಬ ಏಕಾಏಕಿ ಮಚ್ಚು, ಮತ್ತು ದೊಣ್ಣೆಯಿಂದ ನನ್ನ ಮತ್ತು ಹೆಂಡತಿ ,ಮಕ್ಕಳ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.ಕೂಡಲೆ ಸ್ಥಳಿಯರು ಜಗಳ ಬಿಡಿಸಿ,ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ದ್ದಾರೆ ಎಂದು ಹಲ್ಲೆಗೊಳಗಾದ ರುದ್ರಮ್ಮ, ಚಂದ್ರಶೇಖರ್ ಆರೋಪಿಸಿದ್ದಾರೆ.

ಸ್ಥಳಕ್ಕೆಬೇಲೂರು ಪೋಲೀಸ್ ಠಾಣಾ ಎ.ಎಸ್.ಐ ಬಸವೇಗೌಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕೇಸ್ ದಾಖಲಿಸಿದ್ದಾರೆ.

ಚಂದ್ರ ಶೇಖರ್ ಹೇಳು ವಂತೆ,ನಾನು ೩೦ ವರ್ಷದಿಂದ ಸಾಗಿನಲ್ಲಿದ್ದೇನೆ,ಹಲವಾರು ವರ್ಷದಿಂದ ನಮ್ಮ ಅಣ್ಣನಾದ ರಾಮಯ್ಯ ನನಗೆ ಉಳುಮೆ ಮಾಡುವಂತೆ ಬರೆದುಕೊಟ್ಟಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಠಿಸಿ, ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಬಸವರಾಜು ಪಕ್ಕಾಪೋಡು ಮಾಡಿಸಿ ಅವರ ಜಮೀನನ್ನು ಗುರುತಿಸಿಕೊಳ್ಳಲಿ. ಸುಮ್ಮನೆ ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ.

See also  ಸಿಕ್ಕ ೨೧ ಸಾವಿರ ನಗದು ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ವಳಲಹಳ್ಳಿ ಪ್ರಸಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು