News Kannada
Thursday, March 30 2023

ಹಾಸನ

ಬೇಲೂರು ಬಿಜೆಪಿ ನಾಯಕರ ಕಚ್ಚಾಟ: ಅರ್ಧಕ್ಕೆ ಮೊಟಕುಗೊಂಡ ವಿಜಯಸಂಕಲ್ಪ ಯಾತ್ರೆ

Belur BJP leaders clash: Vijaysankalpa yatra cut short by half
Photo Credit : News Kannada

ಬೇಲೂರು: ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿಕೊಂಡಂತೆ ಕುಣಿಯುತ್ತಿ ರುವ ಬೇಲೂರು ತಾಲ್ಲೂಕಿನ ಬಿಜೆಪಿ ಮುಖಂಡರ ಕಚ್ಚಾಟ ಇಂದು ವಿಜಯ ಸಂಕಲ್ಪ ಯಾತ್ರಗೆ ಬಂದಿದ್ದ ಬಿಜೆಪಿ ವರಿಷ್ಠರಿಗೂ ಬಿಸಿ ಮುಟ್ಟಿಸಿದ್ದು , ಈ ಕಚ್ಚಾಟದಿಂದ ಬೇಸತ್ತ ಬಿಜೆಪಿ ವರಿಷ್ಠರು ಇಂದು ಬೇಲೂರಿನಲ್ಲಿ ನಡೆಯಬೇಕಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಕಲೇಶಪುರಕ್ಕೆ ತೆರಳಿದ ಪ್ರಸಂಗಕ್ಕೆ ಬೇಲೂರು ಬಿಜೆಪಿಯ ನಾಯಕರು ಸಾಕ್ಷಿಯಾದರು.

ಇಂದು ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ನಿಂದ ವಿಜಯಸಂಕಲ್ಪ ಯಾತ್ರೆ ಅರಂಭಗೊಂಡಿದ್ದು ಬೆಳಗ್ಗೆ ೧೦ ಗಂಟೆಗೆ ಆರಂಭವಾಗಬೇಕಿದ್ದ ಯಾತ್ರೆಯನ್ನು ೧೨ಕ್ಕೆ ಆರಂಭಿಸ ಲಾಯಿತು. ಯಾತ್ರೆಯಲ್ಲಿ ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಶಿ, ಹಾಗೂ ಶೋಭಾ ಕರಂ ದ್ಲಾಜೆ ರವರುಗಳು ಪಾಲ್ಗೊಂಡಿದ್ದರು. ಈ ವೇಳೆ ಬೇಲೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳು ವಿಜಯ ಸಂಕಲ್ಪ ಯಾತ್ರೆಯಲ್ಲಿ ಸೇರಿದ್ದ ಜನರನ್ನೇ ತಮ್ಮ ಸಾಧನೆಯಂತೆ ಬಿಂಬಿಸಿ ಕೊಳ್ಳಲು ತಮ್ಮ ತಮ್ಮೊಳಗೆ ಜಿದ್ದಿಗೆ ಬಿದ್ದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.

ಬಳಿಕ ವಿಜಯ ಸಂಕಲ್ಪ ಯಾತ್ರೆ ಬೇಲೂರು ತಾಲ್ಲೂಕಿನ ಹಳೇಬೀಡಿಗೆ ಆಗಮಿಸಿದ ವೇಳೆ ಪೂರ್ವ ನಿಗದಿಯಂತೆ ಇಲ್ಲಿಯ ಅಣ್ಣಪ್ಪಶೆಟ್ಟಿ ಎಂಬುವವರ ಮನೆಯಲ್ಲಿ ಕಾಫಿ ಕುಡಿಯುವ ವೇಳೆ ಮನೆಯಿಂದ ಹೊರ ಭಾಗದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಶಕ್ತಿ ಪ್ರದರ್ಶನ ಹಾಗೂ ಜೈಕಾರಗಳು ಕೇಂದ್ರ ಸಚಿವರುಗಳಿಗೆ ಇರುಸು ಮುರುಸು ಉಂಟು ಮಾಡಿತು.

ಒಂದು ಗುಂಪು ಹೆಚ್.ಕೆ. ಸುರೇಶ್ ಪರವಾಗಿ ಜೈಕಾರ ಕೂಗಿದರೆ , ಮತ್ತೊಂದು ಗುಂಪು ಸಿದ್ದೇಶ್ ನಾಗೇಂದ್ರ ಪರವಾಗಿ ಘೋಷಣೆ ಕೂಗುತ್ತಿತ್ತು. ಮಗ ದೊಂದು ಗುಂಪು ಸಂತೋಷ್ ಕೆಂಚಾಂಬ ಪರವಾಗಿ ಘೋಷಣೆ ಕೂಗುತ್ತಿತ್ತು. ಜೈಕಾರಗಳು ಅತಿ ರೇಕಕ್ಕೆ ಹೋಗಿದ್ದರಿಂದ ತೀವ್ರ ಮುಜುಗರಕ್ಕೊಳಗಾದ ವರಿಷ್ಠರು ಬೇಲೂರು ತಾಲ್ಲೂಕಿನಲ್ಲಿ ಸಾಗ ಬೇಕಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ರದ್ದುಗೊಳಿಸಿ ಹಳೇಬೀಡಿನಿಂದ ಬೇಲೂರು ಮಾರ್ಗವಾಗಿ ಹಾಗೂ ಬೇಲೂರಿ ನಿಂದ ಅರೇಹಳ್ಳಿ ಮಾರ್ಗವಾಗಿ ಸಾಗಿ ಸಕಲೇಶಪುರಕ್ಕೆ ತೆರಳಬೇಕಿದ್ದ ಕೇಂದ್ರ ಸಚಿವರುಗಳಾದ ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ್ ಜೋಶಿ ರವರುಗಳು ಹೆಲಿಕಾಫ್ಟರ್ ಮೂಲಕ ಹಳೇಬೀಡಿನಿಂದ ನೇರವಾಗಿ ಸಕಲೇಶ ಪುರ ತಲುಪಿದರು.

ಕೈ ಕೈ ಮಿಲಾಯಿಸಲು ಮುಂದಾದ ಗುಂಪುಗಳು
ಹಳೇಬೀಡಿನಲ್ಲಿ ಕೇಂದ್ರ ಸಚಿವರುಗಳು ಸಂಘಟನಾ ತ್ಮಕವಾಗಿ ಕಾರ್ಯಕರ್ತರ ಮನೆಯಲ್ಲಿದ್ದ ವೇಳೆ ಬೇಲೂರು ವಿಧಾನಸಭಾ ಕ್ಷೇತ್ರದ ಆಕಾಂ ಕ್ಷಿಗಳ ಬೆಂಬಲಿಗರು ಮನೆಯ ಹೊರ ಭಾಗದಲ್ಲಿ ಗುಂಪು ಗಳಾಗಿ ಕೈ-ಕೈ ಮಿಲಾಯಿಸಲು ಹಂತಕ್ಕೆ ಮುಂದಾಗಿದ್ದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಎಲ್ಲಾ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಒಗ್ಗಟ್ಟಿನ ಮಂತ್ರ ಪಠಿಸಿದ ಸಂತೋಷ್ ಕೆಂಚಾಂಬ
ಹಳೇಬೀಡಿನಿಂದ ಬೇಲೂರು ಮಾರ್ಗವಾಗಿ ಸಚಿವರೊಂದಿಗೆ ತೆರಳಬೇಕಿದ್ದ ವಿಜಯಸಂಕಲ್ಪ ರಥವು ಸಚಿವರುಗಳ ಅನುಪಸ್ಥಿತಿಯಲ್ಲಿ ಬೇಲೂರಿಗೆ ಬಂದ ವೇಳೆ ಬೇಲೂರಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿದ್ದೇಶ್ ನಾಗೇಂದ್ರ ಹಾಗೂ ಸಂತೋಷ್ ಕೆಂಚಾಂಬ ಅವರುಗಳು ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದು. ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವುದಾಗಿ ಹೇಳುವ ಮೂಲಕ ಹಳೇಬೀಡಿನಲ್ಲಿ ನಡೆದ ಸಂಘರ್ಷ ತಣಿಸಲು ಯತ್ನಿಸಿದರು. ಬಳಿಕ ವಿಜಯಸಂಕಲ್ಪ ರಥವು ಸಕಲೇಶಪುರದತ್ತಾ ಸಾಗಿತು.

See also  ಹಿಜಾಬ್ ವಿವಾದದ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರ ಇದೆ; ಹೆಚ್.ಡಿ,ಕುಮಾರಸ್ವಾಮಿ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು