News Kannada
Tuesday, March 28 2023

ಹಾಸನ

ಆಲೂರು: ಅಕ್ರಮ ಕಲ್ಲು ಗಣಿಗಾರಿಕೆ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Illegal quarrying, election boycott warned
Photo Credit : News Kannada

ಆಲೂರು: ಅಧಿಕಾರಿಗಳು ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಗಾರಿಕೆ ನಡೆಸಲು ಅನುಮತಿ ನೀಡಿರುವುದನ್ನು ರದ್ದು ಪಡಿಸಬೇಕು, ಗಣಿಗಾರಿಕೆ ನಿಲ್ಲಿಸದಿದ್ದರೆ ಚುನಾವ ಣೆಯನ್ನು ಬಹಿಷ್ಕಾರಿಸುವುದರ ಜೊತೆಗೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹಳೇ ಹೊಂಕರವಳ್ಳಿ ಗ್ರಾಮಸ್ಥರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಗ್ರಾಮಸ್ಥ ಪ್ರಕಾಶ್ ಮಾತನಾಡಿ, ತಾಲ್ಲೂಕಿನ ಮಲ್ಲಾಪುರ ಗ್ರಾ ಪಂ ಗೆ ಸೇರಿರುವ ಹೊಂಕರವಳ್ಳಿ ಗಡಿ ಭಾಗದ ಸರ್ವೇ ನಂ ೫೭ ರ ಪಕ್ಕ, ಸಕಲೇಶಪುರ ತಾಲೂಕು ಬೆಳ ಗೋಡು ಹೋಬಳಿ ಹೊಸಗದ್ದೆ ಗ್ರಾಮದ ಸರ್ವೇ ನಂ ೧೪೯ ರಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ನಡೆಸಲು ಪ್ರಭಾವಿ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದು, ಅಲ್ಲಿ ವಾಸ ಮಾಡುತ್ತಿರುವ ಕುಟುಂಬ ಗಳನ್ನು ಒಕ್ಕಲೆಬ್ಬೆಸುವ ಕೆಲಸ ಮಾಡುತ್ತಿದ್ದಾರೆ, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಸಹಾಯದಿಂದ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ, ಕಳೆದ ಆರೇಳು ತಿಂಗಳಿನಿಂದ ಈ ವಿಷಯವಾಗಿ ತಹಶೀಲ್ದಾರ್, ಲೋಕಾಯುಕ್ತ ಹಾಗೂ ಗಣಿಗಾರಿ ಕೆಯವರಿಗೆ ದೂರು ನೀಡಿದರು ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ದಾಖಲಾತಿ ಕೊಟ್ಟರು ಯಾವ ಅಧಿಕಾರಿಗಳು ಪರಿಗಣಿ ಸುತ್ತಿಲ್ಲ, ಮೂರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದು ದಿನನಿತ್ಯ ಗ್ರಾಮಸ್ಥರು ಮನೆಯಿಂದ ಸಕಲೇಶಪುರ, ಆಲೂರು ತಾಲೂಕು ಕಚೇರಿಗೆ ಅಲೆದಾಡಿ ಸಾಕಾಗಿದೆ, ತಾಲ್ಲೂಕು ಮಟ್ಟದ ಅಧಿಕಾರಿ ಗಳಿಂದ ಹಿಡಿದು ಪಂಚಾಯಿತಿ ಅಧಿಕಾರಿಗಳೆಲ್ಲಾ ಶಾಮಿಲಾಗಿದ್ದು ಹಣದ ಆಸೆಗೆ ಕುಳಿತಲ್ಲೇ ಅಧಿಕಾರಿಗಳು ಹಾಗೂ ಗಣಿ ಇಲಾಖೆಯವರು ಸ್ಥಳ ಪರಿಶೀಲನೆ ಮಾಡದೆ ಅಕ್ರಮ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ಮಾಡಿಕೊ ಟ್ಟಿದ್ದಾರೆ, ಹಣದ ಆಮಿಷಕ್ಕೆ ಒಳಗಾಗಿರುವ ಅಧಿಕಾರಿಗಳು, ಬಡವರ ಜೀವನ ಹಾಗೂ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಇನ್ನೂ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಜೀವ, ಜೀವನ ನಡೆಸಲು ಕಷ್ಟಕರವಾಗಿದೆ, ಹಾಗೂ ಹಲವು ಪ್ರಾಣಿಗಳಿಂದ ಬೆಳೆದಿರುವ ಬೆಳೆಯು ಕೂಡ ಹಾನಿಯಾಗುತ್ತಿದ್ದು ತಿನ್ನುವ ಅನ್ನಕ್ಕೂ ನೆಮ್ಮದಿ ಇಲ್ಲ ದ್ದಂತಾಗಿದೆ. ಈಗ ಈ ಗಣಿಗಾರಿ ಕೆಯಿಂದ ಇನ್ನೂ ಹೆಚ್ಚಿನ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಹಾಗಾಗಿ ಇವೆಲ್ಲವನ್ನೂ ಅಧಿಕಾರಿಗಳು ಮನಗೊಂಡು ನಮಗೆ ಜೀವನ ನಡೆಸಲು ಸಹಕಾರ ಮಾಡಿ ಕೊಡಬೇಕು ಮತ್ತು ಅಕ್ರಮ ಗಣಿಗಾರಿಕೆ ಮಾಡುವವರಿಗೆ ಸಹಾಯ ಮಾಡದೆ ಜನ ಸಾಮಾನ್ಯರ ಹಿತದೃಷ್ಟಿಯನ್ನು ಅರಿಯಬೇಕು, ಗ್ರಾಮಸ್ಥರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸದೆ ನಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಅಕ್ರಮ ಗಣಿಗಾರಿಕೆ ಮಾಡುತ್ತಿರು ವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಯೊಗೇಶ್, ರಾಕೇಶ್, ಚಂದ್ರು ಕುಮಾರ್, ಪ್ರಕಾಶ್, ಅಣ್ಣಪ್ಪ ಗುರುಪ್ರಸಾದ್, ಯೋಗೇಶ್, ನಾಗೇಶ್ ಇದ್ದರು.

See also  ಬೇಲೂರು: ಭ್ರಷ್ಟಾಚಾರ ತೊಲಗಬೇಕಾದರೆ ಕಾಂಗ್ರೆಸ್ ತೊಲಗಿಸಿ- ಜೆ.ಪಿ.ನಡ್ಡಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು