News Kannada
Wednesday, October 04 2023
ಹಾಸನ

ಬೇಲೂರು: ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಹುನ್ನಾರ, ಮುತ್ತುಗನ್ನೆ ಗ್ರಾಮಸ್ಥರ ಪ್ರತಿಭಟನೆ

Belur: Muthuganne villagers protest against attempts to grab land by creating fake documents
Photo Credit : News Kannada

ಬೇಲೂರು: ಮುತ್ತುಗನ್ನೆ ಗ್ರಾಮದಲ್ಲಿ ಸರ್ವೆ ನಂಬರ್ ೭ ರಲ್ಲಿ ಇರುವ ಜಮೀನನ್ನು ನಕಲಿ ದಾ ಖಲೆ ಸೃಷ್ಟಿಸಿಕೊಂಡು ಜಾಗವನ್ನು ಕಬಳಿಸುವ ಹುನ್ನಾರ ಮಾಡುತ್ತಿ ದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮುತ್ತುಗನ್ನೆ ಗ್ರಾಮದ ನಿವಾಸಿಯಾದ ಸಿದ್ದಯ್ಯನವರ ಮಗ ಬಸವರಾಜ್ ಎಂಬುವವರಿಗೆ ಸರ್ವೆ ನಂಬರ್ ೭ ರಲ್ಲಿ ೨೨ ಕುಂಟೆ ಜಾಗವಿದ್ದು ಆ ಜಾಗವನ್ನು ಬೆಣ್ಣೂರು ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿಯು ತನ್ನ ಅಣ್ಣನ ಜಮೀನಿನಲ್ಲಿ ಬೆಳೆಯನ್ನು ಮಾಡಿಕೊಂಡು ಪಕ್ಕದಲ್ಲಿದ್ದ ಜಮೀನನ್ನಿ ಒತ್ತುವರಿ ಮಾಡಿಕೊಂಡು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕುಟಮಬಸ್ತರು ತಮ್ಮ ಅಳಲನ್ನು ತೋಡಿಕೊಂಡರು.

ಇದೇ ವೇಳೆ ಬಸವರಾಜ್ ಹಾಗೂ ಪತ್ನಿ ಜಯಮ್ಮ ಮಾತ ನಾಡಿ ನಮಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು ನಮ್ಮ ತಂದೆಯ ವರಾದ ರಾಮಯ್ಯ, ದ್ಯಾವಯ್ಯ ಅವರ ಹೆಸರಿನಲ್ಲಿದ್ದು ಅವರ ಮರಣ ನಂತರ ಈ ಜಾಗವು ನಮ್ಮ ಹೆಸರಿನಲ್ಲಿದ್ದು ಇದಕ್ಕೆ ಎಲ್ಲಾ ದಾಖಲೆ ಪತ್ರಗಳು ಹಾಗೂ ಜಮೀನಿನ ಹಕ್ಕುಪತ್ರ ಇದ್ದರೂ ಸಹ ನಮ್ಮ ಊರಿನವ ರಲ್ಲದ ವ್ಯಕ್ತಿಯೊಬ್ಬರು ಈ ಜಮೀನನ್ನು ಅಕ್ರ ಮವಾಗಿ ಒತ್ತುವರಿ ಮಾಡಿಕೊಂಡು ನಮ್ಮವರ ಮೇಲೆ ದೌರ್ಜನ್ಯ ಮಾ ಡುವುದರ ಜೊತೆಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಜಾಗವನ್ನು ನಮಗೆ ಗುರುತು ಮಾಡಿ ಕೊಡದಿದ್ದರೆ ತಾಲೂಕು ಕಚೇರಿ ಮುಂಭಾಗದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ನಂಗರ ಅವರ ಪುತ್ರ ಯೋಗೇಶ್ ಮಾತನಾಡಿ ನಮ್ಮ ಅಜ್ಜ ಅಜ್ಜಿ ಕಾಲದಿಂದಲೂ ಈ ಜಮೀನನ್ನು ಉಳಿಮೆ ಮಾಡಿಕೊಂಡು ಕೋವಿಡ್ ಸಂದರ್ಭದಲ್ಲಿ ನೀರಿಲ್ಲದ ಹಿನ್ನಲೆಯಲ್ಲಿ ಚಂದ್ರಶೇಖರ್ ಎಂಬುವವರ ಅಣ್ಣ ಅವರು ಶುಂಠಿ ಹಾಕಲು ಜಾವಯ್ಯ ಎಂಬುವವರು ನಮ್ಮ ಬಳಿ ಜಮೀನನ್ನು ಪಡೆದುಕೊಂಡಿದ್ದರು.ಆದಾದ ನಂತರ ನಮ್ಮ ಜಮೀನನ್ನು ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು.ಆದರೆ ಇತ್ತೀಚಿನ ದಿನಗಳಲ್ಲಿ ಚಂದ್ರಶೇಖರ್ ಎಂಬುವವರು ಕೆಲ ಗುಂಡಾಗಳನ್ನು ಕರೆದುಕೊಂಡು ಬಂದು ನಾವು ದನಕರುಗಳಿಗೆ ಹಾಕಿದ್ದ ಶೆಡ್ ಕಿತ್ತು ಹಾಕಿದ್ದಲ್ಲದೆ ನಮ್ಮ ತಂದೆ ತಾಯಿ ಮೇಲೆ ಹಲ್ಲೆನಡೆಸಿದಾರೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಅದೇ ರೀತಿ ನಮ್ಮ ಪಿತ್ರಾರ್ಜಿತ ಆಸ್ತಿಯ ಸಂಪೂರ್ಣ ದಾಖಲಾತಿಗಳು ಪಾಣಿ,ಹಕ್ಕುಪತ್ರ ಎಲ್ಲಾ ಇದ್ದು ನಮ್ಮ ಜಾಗ ಪೋಡಿಗೆ ಅರ್ಜಿ ಹಾಕಿದ್ದೇವೆ. ನಮ್ಮ ಜಮೀನಿನ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ನಮಗೆ ತೊಂದರೆ ಕೊಡುವ ಉದ್ದೇಶದಿಂದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅಲ್ಲಿ ನಮಗೆ ನಮ್ಮ ಪರ ನ್ಯಾಯ ಬಂದ ಹಿನ್ನೆಲೆಯಲ್ಲಿ ನಮಗೆ ತೊಂದರೆ ಕೊಡುವ ಉದ್ದೇಶದಿಂದ ನನ್ನ ತಂಗಿ ತಮ್ಮ ತಂದೆ ತಾಯಿಯರು ಕೆಲಸ ಮಾಡುವ ಸಂದರ್ಭದಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ದಾಖಲೆ ಪರಿಶೀಲಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಇವನ ದೌರ್ಜನ್ಯದಿಂದ ನಾವುಗಳು ವಿಷ ಕುಡಿಯುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

See also  ಮಂಗಳೂರು: ಜಿಲ್ಲಾ ಮಟ್ಟದ ಸ್ವಚ್ಛ ಅಭಿಯಾನಕ್ಕೆ ಚಾಲನೆ

ಈ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರು ತಮ್ಮ ಜಮೀನನಲ್ಲೇ ಕೂತು ಕಣ್ಣೀರು ಹಾಕುತ್ತಿದ್ದಿದ್ದು ಮನ ಕುಲುಕುವಂತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು