News Kannada
Thursday, March 23 2023

ಹಾಸನ

ಚನ್ನರಾಯಪಟ್ಟಣ: ಎಪಿಎಂಸಿ ಆವರಣದ ಮರಗಳ ತೆರವುಗೊಳಿಸದಂತೆ ಆಗ್ರಹ

Demand not to remove trees from APMC premises
Photo Credit : News Kannada

ಚನ್ನರಾಯಪಟ್ಟಣ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಮರಗಳನ್ನು ತೆರವು ಮಾಡಬಾರದೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಪರಿಸರ ಪ್ರೇಮಿ ಅಶೋಕ್ ಆಗ್ರಹಿಸಿದರು.

ಪಟ್ಟಣದ ಆವರಣದಲ್ಲಿ ಮಾತನಾಡಿ ಕಳೆದ ೧೫ ವರ್ಷಗಳ ಹಿಂದೆ ಎಪಿಎಂಸಿ ಆವರಣದಲ್ಲಿ ಸುಮಾರು ೧,೦೦೦ ವಿವಿಧ ಜಾತಿಯ ಗಿಡಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ ಅನುಮತಿ ಪಡೆದು ನೆಟ್ಟಿದ್ದವು. ಆದರೆ ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ೭೦೦ ಬಿಟ್ಟು, ಉಳಿದ ೩೦೦ ಮರಗಳನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಫಲ ಘಟಕವನ್ನು ನಿರ್ಮಾಣ ಮಾಡಲು ಟೆಂಡರ್ ನೀಡಿದ್ದಾರೆ ಆ ಸ್ಥಳದಲ್ಲಿ ಜಾನುವಾರುಗಳ ಮಾರುಕಟ್ಟೆ ಮರಗಳನ್ನು ತೆರವು ಇದ್ದು,ಅದರಲ್ಲಿ ೩೦೦ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಅನುಮತಿ ಕೋರಿ ತೆರವಿಗೆ ಪತ್ರವನ್ನು ಬರೆದಿದ್ದಾರೆ.

ಈ ಮೂರು ಎಕರೆ ಭಾಗದಲ್ಲಿ ಮರಗಳನ್ನು ತೆರವು ಮಾಡಬಾರದು. ಹಾಗೇನಾದರೂ ತೆರವು ಮಾಡಿದರೆ ಇದರಿಂದ ಜಾನುವಾರುಗಳಿಗೆ ಮತ್ತು ರೈತರಿಗೆ ಆದ್ದರಿಂದ ಕೃಷಿ ಪತ್ತಿನ ಮಾರುಕಟ್ಟೆಯ ಸಮಿತಿಯವರು ಮತ್ತು ಸ್ಥಳೀಯ ಶಾಸಕರು ಇತ್ತ ಗಮನಹರಿಸಿ. ಉಗ್ರಾಣ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಮನವಿ ಮಾಡಿದರು, ಇದೆ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಸಿ ಜಿ ರವಿ ಮಾತನಾಡಿ ಹಾಸನ ಜಿಲ್ಲೆಯಲ್ಲಿಯೇ ಪಟ್ಟಣದ ಮಧ್ಯಭಾಗದಲ್ಲಿರುವಂತಹ ಎಪಿಎಂಸಿ ಮಾರುಕಟ್ಟೆ ಹಾಸನ ಜಿಲ್ಲೆಯ ಯಾವ ತಾಲೂಕಿನಲ್ಲೂ ಇರುವುದಿಲ್ಲ, ಇಂತಹ ಅನುಕೂಲಕರವಾದ ಮಾರುಕಟ್ಟೆಯ ಆವರಣದಲ್ಲಿ ಮರಣ ಮರಗಳ ಮರಣ ಹೋಮ ಮಾಡುತ್ತಿರುವುದು ರೈತರಿಗೆ ಹಾಗೂ ದನ ಕರುಗಳಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ.

ಈ ಸ್ಥಳವನ್ನು ನೀಡಿದಂತಹ ರೈತರ ಮಕ್ಕಳುಗಳು ಇಂದು ಅನ್ನ ಇಲ್ಲದೆ ಬೀದಿ ಬೀದಿಯನ್ನು ಸುತ್ತುವ ಪರಿಸ್ಥಿತಿ ಬಂದು ಒದಗಿದೆ, ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯವರು ಪ್ರತಿ ಕುಂಟೆಗೆ ಖರೀದಿಸಿ. ಇಂದು ವ್ಯಾಪಾರಸ್ಥರಿಗೆ ಖಾಸಗಿ ವ್ಯಕ್ತಿಗಳಿಗೆ ಈ ಸ್ಥಳವನ್ನು ನೀಡಿ ಆದಾಯ ಮಾಡಿಕೊಳ್ಳಲು ಮುಂದಾಗಿದ್ದಾರೆ ಆದ್ದರಿಂದ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹೋದಲ್ಲಿ ರೈತ ಸಂಘದಿಂದ ಮತ್ತು ವಿವಿಧ ಪರ ಸಂಘಟನೆಗಳಿಂದ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮೀಸೆ ಮಂಜಣ್ಣ, ಹಸಿರು ಸೇನೆ ಮತ್ತು ರಾಜ್ಯ ರೈತ ತಾಲೂಕು ಅಧ್ಯಕ್ಷ ಶಿವಣ್ಣ, ರೈತ ಮುಖಂಡರಾದ ಟೈಲರ್ ಕುಮಾರ್, ಅಪ್ಪಾಜಿ ಗೌಡ, ಮಂಜಣ್ಣ, ಶೆಟ್ಟಿಹಳ್ಳಿ ಶ್ರೀನಿವಾಸ್, ಚಿಕ್ಕ ಮತಿಗಟ್ಟ ಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.

See also  ಬೇಲೂರು: ಹೈಟೆಕ್ ಶೌಚಾಲಯ ಕಾಮಗಾರಿಗೆ 6 ಲಕ್ಷ ನೆರವು ನೀಡಿದ ಎಚ್ ಲಕ್ಷ್ಮಣ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು