News Kannada
Sunday, March 26 2023

ಹಾಸನ

ಹಾಸನ: ವೀಲಿಂಗ್ ವಿಚಾರದಲ್ಲಿ ಘರ್ಷಣೆ – ಕೊಲೆಯಲ್ಲಿ ಅಂತ್ಯ

Two killed in indonesia landslide
Photo Credit : News Kannada

ಹಾಸನ: ವೀಲಿಂಗ್ ಮಾಡುವವರ ತಡೆದು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಘರ್ಷಣೆ ಉಂಟಾಗಿ ಕೊನೆಯಲ್ಲಿ ವೀಲಿಂಗ್ ಮಾಡಿದವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದು ಜನತೆ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನ ನಗರ ಮತ್ತು ಸುತ್ತ ಮುತ್ತ ವೀಲಿಂಗ್ ಮಾಡುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಆದರೇ ಇದನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಲಾಗಿದೆ.

ನೆನ್ನೆ ರಾತ್ರಿ ಗಂಟೆ ೮ ಗಂಟೆ ಸಮಯದಲ್ಲಿ ಹಾಸನ ನಗರದ. ೮೦ ಫೀಟ್ ರಸ್ತೆ ನಿವಾಸಿ ಸುಮಂತ್ (೨೦ ವರ್ಷ) ಆಟೋ ಚಾಲಕನಾಗಿದ್ದು, ತನ್ನ ಬೈಕ್ ತೆಗೆದುಕೊಂಡು ಮನೆಯಿಂದ ಹೊರಗೆ ಬಂದಿದ್ದು, ನಗರದ ಗವೇನಹಳ್ಳಿ ಬಳಿ ವಿಲಿಂಗ್ ಮಾಡುತ್ತಿದ್ದು, ಇದನ್ನು ಕಂಡ ಗವೇನಹಳ್ಳಿ ಗ್ರಾಮದ ಕೆಲ ಯುವಕರು ತಡೆದು ವಿಲಿಂಗ್ ಮಾಡದಂತೆ ಯವಕ ಸುಮಂತ್‌ಗೆ ತಿಳಿಮಾತು ಹೇಳಲಾಗಿತ್ತು. ವಿಲಿಂಗ್ ಮಾಡುತ್ತಿದ್ದ ವ್ಯಕ್ತಿ ಹಾಗೂ ಯುವಕರ ನಡುವೆ ಸಲ್ಪ ಮಾತುಕತೆ ನಡೆದಿದೆ. ಈ ವೇಳೆ ಸ್ಥಳಿಯರು ಮಧ್ಯಪ್ರವೇಶ ಮಾಡಿ ಎರಡು ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಲಾಗಿತ್ತು.

ವೀಲಿಂಗ್ ಮಾಡುವ ಸುಮಂತ್ ವಾಪಸ್ ಹೊರಟು ಹೋಗಿ ಕೆಲ ಸಮಯದಲ್ಲಿಯೇ ಮತ್ತೆ ವಾಪಸ್ ತನ್ನ ಜೊತೆ ಇಬ್ಬರನ್ನು ಕರೆದುಕೊಂಡು ಬಂದಿದ್ದು, ಇವರ ಕೈಲಿ ಲಾಂಗು, ಚಾಕು ತಂದು ತನ್ನ ವಿರುದ್ದ ಗಲಾಟೆ ಮಾಡಿದವರ ವಿರುದ್ದ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಚಾಕು ಮತ್ತು ಲಾಂಗ್ ಎರಡನ್ನು ಅವರಿಂದ ಕಸಿದುಕೊಂಡ ಗವೇನಹಳ್ಳಿ ಗ್ರಾಮದ ಪ್ರಜ್ವಲ್ ಮತ್ತು ಇತರ ಯುವಕರು ಸೇರಿ ಆಟೋ ಚಾಲಕ ಸುಮಂತ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಈ ವೇಳೆ ಕೆಳಗೆ ಕುಸಿದು ಬಿದ್ದ ಸುಮಂತ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗೊಂಡಿದ್ದ ಸುಮಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಈ ಬಗ್ಗೆ ಸುಮಂತ್ ತಂದೆ ನಿಂಗರಾಜು ನೀಡಿದ ದೂರಿನ ಮೆರೆಗೆ ಹಾಸನ ನಗರ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

See also  ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು