News Kannada
Thursday, June 01 2023
ಹಾಸನ

ಬೇಲೂರು:  ಕ್ಷೇತ್ರದಲ್ಲಿ ಬಿ.ಎಸ್.ಪಿ ಅಭ್ಯರ್ಥಿ ಬಹುಜನ್ ಮಿಂಚಿನ ಸಂಚಾರ

BSP candidate Bahujan Lightning In Constituency
Photo Credit : News Kannada

ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಂದಲ್ಲ ಒಂದು ಖ್ಯಾತೆ, ಗೊಂದಲ, ಭಿನ್ನಾಭಿಪ್ರಾಯ, ಹಗರಣಗಳು ಸುತ್ತುಕೊಂಡ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷವಾದ ಬಿ.ಎಸ್.ಪಿ ಮಾತ್ರ ಸದ್ದುಗದ್ದಲವಿಲ್ಲದೆ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರಕ್ಕೆ ಮುಂದಾಗಿರುವುದು ಪ್ರಮುಖ ಮೂರು ಪಕ್ಷಗಳಿಗೆ ತಲೆನೋವು ತಂದಿದೆ ಎನ್ನಲಾಗಿದೆ.

ಕಳೆದ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದೊಂದಿಗೆ ಒಪ್ಪಂದದಿಂದ ಚುನಾವಣೆಯನ್ನು ಎದುರಿಸಿದ್ದ ಬಿ.ಎಸ್.ಪಿ ೨೦೨೩ ರಲ್ಲಿ ತನ್ನದೆಯಾದ ಸ್ವತಂತ್ರ ಅಭ್ಯರ್ಥಿಯನ್ನು ಈಗಾಗಲೇ ಕಣ ಇಳಿಸುವ ಮೂಲಕ ಕ್ಷೇತ್ರದಲ್ಲಿ ಸಂಘಟನೆಗೆ ಮುಂದಾಗಿದೆ.

೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಇದೇ ತಾಲ್ಲೂಕಿನ ಮನೆಮಗ ಗಂಗಾಧರ್ ಬಹುಜನ್ ೨೦೨೩ರ ಬಿ.ಎಸ್.ಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಮತಯಾಚನೆ ಜೊತೆಗೆ ಕ್ಷೇತ್ರದ ಸಮಸ್ಯೆಗಳನ್ನು ಅಲಿಸುತ್ತಾ ಮಿಂಚಿನ ಸಂಚಾರಕ್ಕೆ ಮುಂದಾಗಿದ್ದಾರೆ.

ಬಿ.ಎಸ್.ಪಿ ರಾಷ್ಟ್ರೀಯ ಪಕ್ಷವಾಗಿ ಸೈದ್ಧಾಂತಿಕ ತತ್ವಸಿದ್ಧಾಂತದ ಮೇಲೆ ರೂಪಿತವಾಗಿ ಜನ ಮನ್ನಣೆಗಳಿಸಿದೆ. ಸಂವಿಧಾನದ ಆಶೋತ್ತರಗಳ  ಕೆಲಸವನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಜನತೆ ಬೆಂಬಲ ನೀಡುವಂತೆ ಮನವಿ ಮಾಡಿದರು.

See also  ಆಮ್ ಆದ್ಮಿ ಪಾರ್ಟಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾರ್ಯಾಲಯ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು