News Kannada
Thursday, June 01 2023
ಹಾಸನ

ಬೇಲೂರು ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಅಪಾರ, ಜಯಭೇರಿ ಖಚಿತ- ಆಡಗೂರು ಆನಂದ್

BJP's contribution to Belur constituency is immense, victory assured: Adagur Anand
Photo Credit : News Kannada

ಬೇಲೂರು: ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಬೇಲೂರು ವಿಧಾನಸಭಾ ಕ್ಷೇತ್ರದ ಸಮಗ್ರ ನೀರಾವರಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಬೇಲೂರು ಜನತೆ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪೂರ್ಣ ಬೆಂಬಲ ನೀಡುವ ಮೂಲಕ ಬಿಜೆಪಿಯ ಜಯಭೇರಿಗೆ ಕಾರಣಕರ್ತರಾಗು ತ್ತಾರೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಲೂರು ಕ್ಷೇತ್ರದ ಭೌಗೋಳಿಕವಾಗಿ ವಿಭಿನ್ನ ವಾಗಿದೆ. ಬಿಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ಬೇಲೂರು ಕ್ಷೇತ್ರಕ್ಕೆ  ೧೮೦೦ ಕೋಟಿ ರೂ ಹಣ ನೀಡಿದ್ದಾರೆ. ಆದರೆ ಸ್ಥಳೀಯ ಶಾಸಕ ಕೆ.ಎಸ್. ಲಿಂಗೇಶ್ ರೂ ೧೮೦೦ ಕೋಟಿ ಹಣ ನನ್ನ ಪರಿಶ್ರಮ ಎನ್ನುವುದು  ಹಾಸ್ಯಾಸ್ಪದ ಎಂದು ಬೇಲೂರು ಶಾಸಕರಿಗೆ ತೀರುಗೇಟು ನೀಡಿದರು.

ಬೇಲೂರು ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಐದಾರು ಮಂದಿ ಆಕಾಂ ಕ್ಷಿಗಳು ಪೈಪೋಟಿ ನಡೆಸಿದ್ದು ಸತ್ಯ, ಹಾಗಂತ ಎಲ್ಲಿಯೂ ಭಿನ್ನಮತವಿಲ್ಲ, ನಮ್ಮಲ್ಲಿ  ವ್ಯಕ್ತಿಗಿಂತ ಪಕ್ಷಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಸಂಬಂಧ ಎಲ್ಲಾ ಆಕಾಂಕ್ಷಿಗಳಲ್ಲಿ ಮಾತನಾಡಿದ್ದು ಅವರು ಸಕಾರತ್ಮವಾಗಿ ಸ್ಪಂದಿಸಿ ಸಹಕಾರ ನೀಡುವ ಬಗ್ಗೆ ತಿಳಿಸಿದ್ದಾರೆ. ಬೇಲೂರು ಕ್ಷೇತ್ರವನ್ನು ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಆಳ್ವಿಕೆ ನಡೆಸಿದೆ. ಆದರೆ ಕ್ಷೇತ್ರದಲ್ಲಿ ಇನ್ನು ಮೂಲ ಭೂತ ಸೌಲಭ್ಯಗಳು ಮರಿಚಿಕೆಯಾಗಿದೆ. ಬೇಲೂರು ಪ್ರವಾಸೋದ್ಯಮ ಅಭಿವೃದ್ಧಿ ಮರಿಚಿಕೆಯಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೀಡಿದ ಮಹತ್ವಪೂರ್ಣ ಯೋಜನೆಗಳಿಂದ ಜನರು ಈ ಬಾರಿ ಬಿಜೆಪಿಗೆ ಬಹುಮತ ನೀಡುತ್ತಾರೆ. ಹಾಗೇಯೆ ಬೇಲೂರಿನಲ್ಲಿ ಕಮಲ ಆರಳುವುದು ಖಚಿತವೆಂದರು.

ಹಾಸನ ಜಿಲ್ಲಾ ಬಿಜೆಪಿ ಚುನಾವಣೆ ಸಂಚಾಲಕ ರೇಣುಕುಮಾರ್ ಮಾತನಾಡಿ, ಎಲ್ಲಾ ಪಕ್ಷದಲ್ಲಿ ಕೂಡ ಟಿಕೇಟ್ ಹಂಚಿಕೆ ಸಂದರ್ಭದಲ್ಲಿ ಗೊಂದಲ ಇರುವುದು ಸಾಮಾನ್ಯವಾಗಿದೆ. ಆದರೆ ಪಕ್ಷದ ವರಿಷ್ಠರು ಒಬ್ಬ ಅಭ್ಯರ್ಥಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಎಲ್ಲಾ ಆಕಾಂಕ್ಷಿಗಳು ಅವರ ಪರ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಭಿನ್ನಮತವಿಲ್ಲದೆ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದ  ರಣಘಟ್ಟ ಯೋಜನೆಗೆ   ಬಿಜೆಪಿ ಸರ್ಕಾರ ಹಣ ನೀಡಿ ಇಂದು ಕಾಮಗಾರಿಗೆ ಅನುವು ಮಾಡಿದೆ. ಕಳೆದ ಐದಾರು ವರ್ಷದಿಂದ ಹುಲ್ಲಹಳ್ಳಿ ಸುರೇಶ್ ಅವರು ಕ್ಷೇತ್ರದಲ್ಲಿ ಕೈಗೊಂಡ ಸಾಮಾಜಿಕ ಮತ್ತು ಜನಪರ ಕೆಲಸಗಳು ಅವರ ಜಯಕ್ಕೆ ಕಾರಣವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಜಿಲ್ಲಾ ಉಪಾಧ್ಯಕ್ಷೆ ಬಿ ಕೆ ಚಂದ್ರಕಲಾ, ಪುರಸಭಾ ನಾಮಿನಿ ಸದಸ್ಯ ಪೈಂಟ್ ರವಿ, ತಾಲ್ಲೂಕು ಚುನಾವಣೆ ಉಸ್ತುವಾರಿ ದಿನೇಶ್ ಹಾಜರಿದ್ದರು.

See also  ಮೈಸೂರು: ತಿಹಾರ್‌ ಜೈಲೂಟ ಮಾಡಿದವರಿಂದ ನೀತಿ ಬೋಧನೆ- ಈಶ್ವರಪ್ಪ ಟೀಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು