News Kannada
Saturday, June 03 2023
ಹಾಸನ

ಜೆಡಿಎಸ್ ಪಕ್ಷ ಬಿಟ್ಟು ಸರ್ಕಾರ ರಚನೆ ಅಸಾಧ್ಯ ಎಂದ ಮಾಜಿ ಸಚಿವ ಎಚ್. ಡಿ ರೇವಣ್ಣ

It is not possible to leave JD(S) and form the government.
Photo Credit : News Kannada

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ೧೨೩ ಸ್ಥಾನಗಳನ್ನು ಗೆಲ್ಲಲಿದ್ದು ಜೆಡಿಎಸ್ ಹೊರತಾಗಿ ಯಾರು ಸಹ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್. ಡಿ ರೇವಣ್ಣ ಭವಿಷ್ಯ ನುಡಿದರು.

ಹೊಳೆನರಸೀಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾ ಡಿದ ಅವರು ಎಚ್ ಡಿ ದೇವೇಗೌಡರು ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಹೊಳೆನರಸೀಪುರದಲ್ಲಿ ರಸ್ತೆ, ನೀರಾವರಿ, ಆಸ್ಪತ್ರೆ, ಹಾಸ್ಟೆಲ್ ಗಳನ್ನು ಮಾಡಿರುವುದು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು.

ಕೆಲವರು ಚುನಾವಣೆ ಸಂದರ್ಭ ದಲ್ಲಿ ಕಂಡುಬಂದ ನಂತರ ಐದು ವರ್ಷ ಕ್ಷೇತ್ರದ ಕಡೆ ಮುಖ ಮಾಡು ವುದಿಲ್ಲ ಆದರೆ ನಾವು ಕ್ಷೇತ್ರದಲ್ಲಿಯೇ ಇದ್ದು ಜನರ ಸೇವೆ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಹೊಳೆನರಸೀಪುರ ಆಸ್ಪತ್ರೆ ನಂಬರ್ ಒನ್ ಸ್ಥಾನದಲ್ಲಿದ್ದು, ಕುಮಾರಣ್ಣ ನಾವು ಹಾಸನದಲ್ಲಿ ಇಂಜಿನಿಯರಿಂಗ್ ಕಾಲೇಜ್ ತೆರೆದಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಎಂದರು.

ಕಳೆದ ಬಾರಿಯ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ೨೫,೦೦೦ ಕೋಟಿ ರೈತರ ಸಾಲವನ್ನು ಕುಮಾರ ಸ್ವಾಮಿ ಅವರು ಮನ್ನಾ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡಲಿದ್ದೇವೆ. ೬೦ ವರ್ಷ ಆಗಿರುವವರಿಗೆ ೫೦೦೦ ಸಹಾಯಧನ ನೀಡಲಿದ್ದೇವೆ ಎಂದರು.

ದೇವೇಗೌಡರು ಪ್ರಧಾನಮಂತ್ರಿ ಯಾಗಿದ್ದಾಗ ಹಾಸನಕ್ಕೆ ಕೈಗಾರಿಕೆಗಳನ್ನು ತಂದರು ಇಂದು ೬೦,೦೦೦ ಹೆಣ್ಣು ಮಕ್ಕಳು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನೂರಕ್ಕೆ ನೂರರಷ್ಟು ನಮ್ಮ ಸರ್ಕಾರ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು.

“ನಮ್ಮಲ್ಲೇ ಇದ್ದು ನಮ್ಮಲ್ಲೇ ತಿಂದು ತೆಗಿ ಇಂದು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” “ಹುಣಸೆಹಣ್ಣು ಮಾರುತಿದ್ದವನನ್ನು ಕರೆದುಕೊಂಡು ಬಂದು ನಗರಸಭೆ ಸದಸ್ಯನಾಗಿ ಮಾಡಲಾಯಿತು ಇಂದು ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಇತ್ತೀಚಿಗೆ ಜೆಡಿಎಸ್ ತೊರೆದ ನಗರಸಭೆ ಸದಸ್ಯರ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದರು.

ನಂತರ ಭವಾನಿ ರೇವಣ್ಣ ಅವರು ಮಾತನಾಡಿ ಪತಿ ರೇವಣ್ಣ ಅವರ ಅಭಿವೃದ್ಧಿ ಬಗ್ಗೆ ಗುಣಗಾನ ಮಾಡಿ ದರು, ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರ ಹೆಚ್ಚು ಪ್ರಗತಿಯಲ್ಲಿದ್ದು ಜಾನು ವಾರಿಗಳಿಗೂ ಉತ್ತಮ ಚಿಕಿತ್ಸೆ ಸೌಲಭ್ಯ ವಿದೆ. ಶಿಕ್ಷಣ ಕ್ಷೇತ್ರದಲ್ಲಿ ರೇವಣ್ಣ ಅವರು ಮಹತ್ತರ ಸಾಧನೆ ಮಾಡಿದ್ದಾರೆ. ಒಂದು ತಾಲೂಕು ಕ್ಷೇತ್ರಕ್ಕೆ ಕಾನೂನು ಕಾಲೇ ಜನ್ನು ಮಂಜೂರು ಮಾಡುವುದಿಲ್ಲ ಆದರೆ ರೇವಣ್ಣ ಅವರ ಶ್ರಮದಿಂದ ಕಾನೂನು ಕಾಲೇಜನ್ನು ಒದಗಿಸಲಾಗಿದೆ .

ಒಂದೇ ತಾಲೂಕಿನಲ್ಲಿ ೨೮ ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದ್ದು ಶಿಕ್ಷಣ ಆರೋಗ್ಯಕ್ಕೆ ರೇವಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದರು ವಿಧಾನಸಭಾ ಕ್ಷೇತ್ರದಲ್ಲಿ ರೇವಣ್ಣ ಅವರು ಶಾಶ್ವತವಾದ ಹಲವು ಕಾರ್ಯ ಕ್ರಮಗಳನ್ನು ಮಾಡಿದ್ದು , ಜಿಲ್ಲಾ ಕೇಂದ್ರದಲ್ಲಿ ಇಲ್ಲದಂತಹ ಶಿಕ್ಷಣ ವ್ಯವಸ್ಥೆ ಹೊಳೆನರಸೀಪುರದಲ್ಲಿದೆ. ೨೪ ಬಿಸಿಎಂ ಹಾಸ್ಟೆಲ್ ಗಳನ್ನು ತಂದಿ ದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗ ಳಿಗೆ ಉತ್ತಮ ಕಟ್ಟಡಗಳನ್ನು ಒದಗಿ ಸಲಾಗಿದ್ದು ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದರು.

See also  ಹಾಸನ: ಅನಧಿಕೃತ ವಿದ್ಯುತ್ ಸಂಪರ್ಕ ಮನೆಗಳ ಮೇಲೆ ದಾಳಿ

ಕೆಲವರು ಹತ್ತು ರೂಪಾಯಿ ಕೆಲಸ ಮಾಡದೆ ಅಪಪ್ರಚಾರ ಮಾಡುತ್ತಾರೆ ಎಂದು ವಿರೋಧಿಗಳ ವಿರುದ್ಧ ಕಿಡಿಕಾರಿದ ಭವಾನಿ ರೇವಣ್ಣ ಅವರು ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದು ಹೊಳೆನರಸೀಪುರಕ್ಕೆ ಸೀಮಿತವಾಗದೆ ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಓಡಾಟ ನಡೆಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ , ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಸೇರಿದಂತೆ ಇತರ ನಾಯಕರು ಹಾಗೂ ಮುಖಂಡರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು