News Kannada
Thursday, June 01 2023
ಹಾಸನ

ಜಿವಿಟಿ ಬಸವರಾಜ್ ರೋಡ್ ಶೋ: ನಟಿ ತಾರಾ ಸಾಥ್

GVT Basavaraj roadshow: Actress Tara Saath
Photo Credit : News Kannada

ಅರಸೀಕೆರೆ : ಸಹಸ್ರಾರು ತಮ್ಮ ಬೆಂಬಲಿಗರೊಂದಿಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಲು ಮುಂದಾದ ಬಿಜೆಪಿ ಅಭ್ಯರ್ಥಿ ಜಿ ವಿ ಟಿ ಬಸವರಾಜ್ ಅವರಿಗೆ ಖ್ಯಾತ ಚಲನಚಿತ್ರ ನಟಿ ತಾರಾ ಸಾತ್ ನೀಡುವ ಮೂಲಕ ರೋಡ್ ಶೋಗೆ ತಾರಾ ಮೆರುಗು ನೀಡಿದರು.

ನಗರದ ಸಿದ್ದರಾಮೇಶ್ವರ ಸಮುದಾಯ ಭವನದ ಸಮೀಪದಿಂದ ಆರಂಭಗೊಂಡ ರೋಡ್ ಶೋನಲ್ಲಿ ಮಾಜಿ ಶಾಸಕ ಎ.ಎಸ್ ಬಸವರಾಜು ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿಯ ಪರಾಜಿತ ಅಭ್ಯರ್ಥಿ ಮರಿಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ,ಎನ್ ಮನೋಜ್ ಕುಮಾರ್, ಸ್ಥಳೀಯ ಬಿಜೆಪಿ ಮುಖಂಡರಾದ ಕಾಟಿಕೆರೆ ಪ್ರಸನ್ನ ಕುಮಾರ್. ಅಣ್ಣನಾಯಕನಹಳ್ಳಿ ವಿಜಯ್ ಕುಮಾರ್. ಗ್ರಾಮೀಣ ಮಂಡಲದ ಅಧ್ಯಕ್ಷ ರಮೇಶ್. ನಗರಾಧ್ಯಕ್ಷ ಪುರುಷೋತ್ತಮ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.

ರೋಡ್ ಶೋನಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ತಾರಾ ಬಿಜೆಪಿ ಅಭ್ಯರ್ಥಿಗಳು ಪ್ರತಿಪಕ್ಷಗಳು ಹಾಗೂ ಅವರ ಅಭ್ಯರ್ಥಿಗಳನ್ನು ಟೀಕಿಸುತ್ತ ಮತ ಕೇಳುವುದಕ್ಕಿಂತ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಮಾಸ್ ಕಾರ್ಡ್ ಹಿಡಿದು ಮತ ಕೇಳುತ್ತೇವೆ ದೇಶದಲ್ಲಿ ನರೇಂದ್ರ ಮೋದಿ ರಾಜ್ಯದಲ್ಲಿ ಬಿ,ಎಸ್ ಯಡಿಯೂರಪ್ಪ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನೀಡಿದ ಹಾಗೂ ನೀಡುತ್ತಿರುವ ಜನಪರ ಆಡಳಿತ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಯಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ನೂರಾರು ಕೋಟಿ ಇರುವ ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಿದ ನರೇಂದ್ರ ಮೋದಿಯವರ ಕಾಳಜಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ರೈತ ಪರ ಚಿಂತನೆ, ಪಂಚಮಸಾಲಿ ಸೇರಿದಂತೆ ಹಿಂದುಳಿದ ಸಮಾಜಗಳ ಬಹು ಅಪೇಕ್ಷಿತ ಮೀಸಲಾತಿಯನ್ನ ಸಾಮಾಜಿಕ ನ್ಯಾಯದಡಿ ಸಮರ್ಪಕವಾಗಿ ಅನುಷ್ಠಾನ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ತೆಗೆದುಕೊಂಡ ನಿಲುವು ಬಿಜೆಪಿ ಪಕ್ಷಕ್ಕೆ ಇರುವ ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತೋರುತ್ತದೆ ಎಂದರು.

೨೦೦೪ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಎಸ್ ಬಸವರಾಜ್ ಅವರು ಆಯ್ಕೆಯಾಗಿದ್ದು ಪ್ರಸ್ತುತ ಚುನಾವಣೆಯಲ್ಲಿ ಜಿವಿಟಿ ಬಸವರಾಜ್ ಅವರು ಚುನಾಯಿತರಾಗುವುದರಲ್ಲಿ ಸಂದೇಹವಿಲ್ಲ . ಇಂದು ನಡೆಯುತ್ತಿರುವ ರೋಡ್ ಶೋನಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಉತ್ಸಾಹವನ್ನು ನೋಡಿದರೆ ಇದು ಬಸವರಾಜ್ ಅವರ ಗೆಲುವಿನ ಮುನ್ಸೂಚನೆಯ ವಿಜಯ ಯಾತ್ರೆ ತರ ಕಾಣುತ್ತಿದೆ ಎಂದು ನೆರೆದಿದ್ದ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರನ್ನ ಹುರಿದುಂಬಿಸಿದರು.

ಬಿಜೆಪಿ ಅಭ್ಯರ್ಥಿ ಜಿ ವಿ ಟಿ ಬಸವರಾಜ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಆಡಳಿತ ನನ್ನ ಗೆಲುವಿಗೆ ಸಹಕಾರಿಯಾಗಲಿದ್ದು ರಾಜ್ಯ ಹಾಗೂ ಜಿಲ್ಲೆ ಮತ್ತು ತಾಲೂಕಿನ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತ ಬಂಧುಗಳು ನನ್ನ ಬೆಂಬಲಕ್ಕೆ ನಿಂತಿರುವುದರಿಂದ ನಾನು ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದರು.

See also  ಹಾಸನ:  ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ!

ರೋಡ್ ಶೋನಲ್ಲಿ ಬಿಜೆಪಿ ಮುಖಂಡರಾದ ವಿಜಯ್ ವಿಕ್ರಂ ಮಾಡಾಳು ಕೊಟ್ರೇಶ್.ತಾಲೂಕು ಯುವ ಮೋರ್ಚಾ ಅಧ್ಯಕ್ಷ ಯಾದಾಪುರ ತೇಜಸ್. ಎಸ್ ಎಲ್ ಎನ್ ವಿಜಯಕುಮಾರ್.ಶಿಲ್ಪಾ ಸತೀಶ್.ಮತ್ತಿತರರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು