News Karnataka Kannada
Thursday, April 25 2024
ಹಾಸನ

ಬೇಲೂರು: ಶಾಸಕ ಹೆಚ್.ಕೆ. ಸುರೇಶ್‌ಗೆ ಅರೇಹಳ್ಳಿಯಲ್ಲಿ ಅದ್ದೂರಿ ಸ್ವಾಗತ

MLA H.K. Suresh gets a grand welcome at Arehalli
Photo Credit : News Kannada

ಬೇಲೂರು: ತಾಲೂಕಿನ ಅರೇಹಳ್ಳಿ ಜಿಲ್ಲಾಪಂಚಾಯತಿ ವ್ಯಾಪ್ತಿಯ ಬಿಕ್ಕೋಡಿನಲ್ಲಿ ನೂತನ ಶಾಸಕ ಹೆಚ್ ಕೆ ಸುರೇಶ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.

ಈ ವೇಳೆ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್ ಕೆ ಸುರೇಶ್ ೫ ವರ್ಷಗಳ ಕಾಲ ಹಿಂದಿನ ಶಾಸಕರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ತಾಲೂಕಿನ ಜನತೆಗೆ ತಿಳಿದಿದೆ.ಮುಂದಿನ ೫ ವರ್ಷಗಳಲ್ಲಿ ನಿಮ್ಮ ಮನೆಯ ಮಗನ ಗುಣಮಟ್ಟದ ಕೆಲಸವನ್ನು ನೀವುಗಳು ನೋಡುತ್ತೀರಿ. ತಾಲೂಕಿನ ಕ್ಷೇತ್ರವನ್ನು ೨೨೪ ಕ್ಷೇತ್ರಗಳಿಗಿಂತ ವಿಭಿನ್ನವಾಗಿ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಗುರಿ.ತಾಲೂಕಿನಲ್ಲಿ ಜನಸಾಮಾನ್ಯರ ಮೇಲೆ ಎಲ್ಲಾ ಇಲಾಖೆಗಳಿಂದ ಅಗುತ್ತಿರುವ ದೌರ್ಜನ್ಯ ತಡೆಗಟ್ಟುವುದುರ ಜೊತೆಗೆ ಮೊದಲ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವುದು ನನ್ನ ಮೊದಲ ಆದ್ಯತೆ ಎಂದರು.

ನಿಮ್ಮ ಯಾವುದೇ ಕೆಲಸ ಕಾರ್ಯ ಇದ್ದರೂ ನೇರವಾಗಿ ನನ್ನ ಬಳಿಗೆ ಬನ್ನಿ, ೨೪ ಗಂಟೆಗಳ ಕಾಲ ನಾನು ನಿಮ್ಮ ಸೇವೆ ಮಾಡಲು ಸಿದ್ಧ.ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲಾ,ಆದರೂ ತಾಲೂಕಿನ ಅಭಿವೃದ್ಧಿ ಗೆ ಯಾವರೀತಿ ಅನುದಾನ ತರಬೇಕು ಎಂದು ನನಗೆ ತಿಳಿದಿದ್ದು ಅದನ್ನು ತಂದು ಅಭಿವೃದ್ಧಿ ಪಡಿಸಲಾಗುವುದು.ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದು ಮುಂದೆಯೂ ಸಹ ನಮ್ಮದೇ ಸರ್ಕಾರ ಬರುವುದರಿಂದ ಅಭಿವೃದ್ಧಿಯೊಂದೇ ನಮ್ಮೆಲ್ಲರ ಮೂಲ ಮಂತ್ರವಾಗಿರಬೇಕು. ಗುತ್ತಿ ಗೆದಾರರು ಸರ್ಕಾರದ ಕೆಲಸ ದೇವರ ಕೆಲಸವೆಂದು ಮಾಡಬೇಕು.ಇಲ್ಲಿ ಯಾವುದೇ ಲೋಪವೆಸಗಿದ್ದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಿಲ್ಲಾ ವಕ್ತಾರ ಅಮಿತ್ ಶೆಟ್ಟಿ,ಜಿಲ್ಲಾ ಉಪಾಧ್ಯಕ್ಷ ಚಂದ್ರಕಲಾ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು