ಬೇಲೂರು: ಬೇಲೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹಗರೆ ಕಾಂತರಾಜು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ತಾಲೂಕು ವ್ಯವಸಾಯೋ ತ್ಪನ್ನ ಮಾರಾಟ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಮಲ್ಲೇಗೌಡರರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು.ಅಧ್ಯಕ್ಷ ಸ್ಥಾನ ಕ್ಕಾಗಿ ಜೆಡಿಎಸ್ನ ಎಂ.ಕೆ.ಆರ್. ಸೋಮೇಶ್ ಹಾಗೂ ಹಗರೆ ಕಾಂತರಾಜು ನಾಮಪತ್ರ ಸಲ್ಲಿಸಿ ದ್ದರು. ನಂತರ ಇಬ್ಬರಲ್ಲಿ ಯಾರು ಅಧ್ಯಕ್ಷರಾಗಬೇಕೆಂದು ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿದ ಬಳಿಕ ಎಂ.ಕೆ.ಆರ್.ಸೋಮೇಶ್ ತಮ್ಮ ನಾಮಪತ್ರ ವಾಪಸ್ ಪಡೆ ದಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕಿ ಶಕ್ಕು, ಸಭೆಯ ನಂತರದಲ್ಲಿ ಕಾಂತರಾಜು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆಂದು ಘೋಷಿಸಿದರು.
ನೂತನಅಧ್ಯಕ್ಷ ಕಾಂತ ರಾಜುರನ್ನು ಅಭಿನಂದಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ, ಬೇಲೂರು ಪಟ್ಟಣದಲ್ಲಿರುವತಾಲೂಕು ವ್ಯವಸಾಯೋತ್ಪನ್ನ ಮಾರಾಟಸಹಕಾರ ಸಂಘವು ಉತ್ತಮವಾಗಿ ನಡೆಯುತ್ತಿದೆ. ಅತ್ಯುತ್ತಮ ಕಟ್ಟಡ ಹೊಂದಿದೆ. ರೈತರಿಗೆ ಸಕಾಲಕ್ಕೆ ಅಗತ್ಯ ರಸಗೊಬ್ಬರ ಒದಗಿಸಲಾಗುತ್ತಿದೆ. ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದರು. ಅದರಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ನಂತರ ಒಡಂಬಡಿಕೆಯಂತೆ ಸೋಮೇಶ್ ನಾಮಪತ್ರ ವಾಪ ಸ್ ಪಡೆದಿದ್ದರಿಂದ ಕಾಂತರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ರಸಹಕಾರದೊಂದಿಗೆ ಸಂಘದ ಬೆಳವಣಿಗೆಗೆ ಮುಂದಾಗಲಿ ಎಂದರು.
ನೂತನ ಅಧ್ಯಕ್ಷಕಾಂತರಾಜು ಮಾತನಾಡಿ, ನಮ್ಮ ಸಂಘದ ನಿರ್ದೇಶಕರು, ಷೇರುದಾರರ ಸಹಕಾರದಿಂದ ಸಂಘದ ಬೆಳವ ಣಿಗೆಗೆ ಕೆಲಸ ಮಾಡಲಾಗುವುದು. ರೈತರ ಅನುಕೂಲಕ್ಕಾಗಿ ಅಗತ್ಯವಿ ರುವ ಸೌಲಭ್ಯ ಒದಗಿಸಲು ಮುಂ ದಾಗಲಿದ್ದೇವೆ. ಜತೆಗೆ ಅಧ್ಯಕ್ಷ ನಾಗಲು ಸಹಕರಿಸಿದ ನಿರ್ದೇ ಶಕರು ಮತ್ತುಜೆಡಿಎಸ್ ಪಕ್ಷದ ಎಲ್ಲ ಮುಖಂಡರುಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ತಾಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ರಾಜ ಶೇಖರಯ್ಯ, ನಿರ್ದೇಶಕರಾದ ಮಲ್ಲೇಗೌಡ, ಎಂ.ಕೆ.ಆರ್. ಸೋಮೇಶ್, ರವಿಕುಮಾರ್, ಎಸ್.ನಾಗೇಶ್,ಬಿ.ಎಲ್.ಲಕ್ಷ್ಮಣ್, ಕುಮಾರ್ ಕಣಗುಪ್ಪೆ,ವಿಜಯ್ ಕುಮಾರ್ ಸೇರಿದಂತೆ ಜೆಡಿಎಸ್ ಮುಖಂಡರಾದ ಎಂ.ಕೆ. ಆರ್.ನಾಗೇಶ್, ದಿಲೀಪ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಹೆಚ್.ಮಹೇಶ್,ತಾಪಂ ಮಾಜಿ ಅಧ್ಯಕ್ಷ ರಂಗೇಗೌಡ ಸೇರಿದಂತೆ ಇತರರಿದ್ದರು.