News Karnataka Kannada
Wednesday, April 24 2024
Cricket
ಹಾಸನ

ಬಿಜೆಪಿ ಗೆದ್ದರೆ ಬೇಲೂರು ಅಭಿವೃದ್ಧಿ: ಹುಲ್ಲಳ್ಳಿ ಸುರೇಶ್

Belur will be developed if BJP wins: Hullalli Suresh
Photo Credit : News Kannada

ಬೇಲೂರು: ನಾಯಕ ಸರಿಯಾಗಿ ಆಡಳಿತ ಮಾಡಿದರೆ ಮಾತ್ರವೇ ಆ ಭಾಗದ ಜನತೆ ಸುಖ ಸಮೃದ್ಧತೆಯಿಂದ ಇರುವುದಕ್ಕೆ ಸಾಧ್ಯ. ನಾಯಕನ ಆಡಳಿತವೇ ಸರಿಯಾಗಿಲ್ಲದಿದ್ದರೆ ಆ ಪ್ರದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಖಂಡಿತವಾಗಿಯೂ ಬೇಲೂರು ವಿಧಾನ ಸಭಾ ಕ್ಷೇತ್ರ ಅಭಿವೃದ್ಧಿಆಗಲಿದೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.

ತಾಲೂಕಿನ ಮೊಸಗಸಾವರದಲ್ಲಿ ಮತಯಾಚಿಸಿ ಮಾತನಾಡಿದ ಅವರು, ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೇಲೂರು ವಿಧಾನ ಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಒಂದು ಕಾಲದಲ್ಲಿ ಮೆರೆದ ಪ್ರದೇಶ ಈಗ ಈ ಸ್ಥಿತಿಯಲ್ಲಿರುವುದು ಶೋಚನೀಯ. ಈ ಭಾಗ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುವ ಕಾಲ ಸನಿಹದಲ್ಲಿದೆ. ನೀವೆಲ್ಲ ಈ ಬಾರಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲವನ್ನು ಸೂಚಿಸಿ ನನ್ನನ್ನು ಗೆಲ್ಲಿಸಿದರೆ ನೀವು ಗೆದ್ದಂತೆ ಎಂದರು.

ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿ ವೈ ವಿಜಯೇಂದ್ರ ಅವರು ಈ ಕ್ಷೇತ್ರಕ್ಕೆ ಬಂದಾಗ ಹೆಚ್.ಕೆ ಸುರೇಶ್ ಗೆದ್ದರೆ ನಾವು ಗೆದ್ದಂತೆ ಮತ್ತು ನೀವೆಲ್ಲರೂ ಗೆದ್ದಂತೆ ಎಂದು ಹೇಳಿದ್ದರು. ಕಾಲ ಇನ್ನೂ ಮಿಂಚಿಲ್ಲ, ಭಾರತೀಯ ಜನತಾ ಪಾರ್ಟಿಗೆ ಮತ ಹಾಕುವುದರ ಮೂಲಕ ಬೇಲೂರಿನ ಹಾಗೂ ದೇಶದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸೋಣ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು