News Kannada
Saturday, June 03 2023
ಹಾಸನ

ಬಿಜೆಪಿಯಿಂದ ಜನಸ್ನೇಹಿ ಚುನಾವಣಾ ಪ್ರಣಾಳಿಕೆ: ಅಭಯ್ ವರ್ಮಾ

BJP's people-friendly election manifesto: Abhay Verma
Photo Credit : News Kannada

ಹಾಸನ: ಕಳೆದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ ರಾಜ್ಯ ಬಿಜೆಪಿ ಸರ್ಕಾರ ಈ ಬಾರಿ ಜನಸ್ನೇಹಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ದೆಹಲಿ ಶಾಸಕ ಅಭಯ್ ವರ್ಮಾ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಬಲ್ ಇಂಜಿನ್ ಬಿಜೆಪಿ ಸರ್ಕಾರ ದೇಶದಲ್ಲಿ ಉತ್ತಮ ಆಡ ಳಿತ ನೀಡುತ್ತಿದ್ದು ಮುಂದೆಯೂ ಸಹ ಅಭಿವೃದ್ಧಿಯ ಪರ್ವವನ್ನು ಮುಂದುವರಿಸಲಿದೆ. ಈ ನಿಟ್ಟಿನಲ್ಲಿ ಉತ್ತಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ .

ಹಾಸನ ನಗರವು ಶಾಸಕ ಪ್ರೀತಮ್ ಗೌಡ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ ರಸ್ತೆ, ಕುಡಿಯುವ ನೀರು , ಯುಜಿಡಿ ಸೇರಿ ದಂತೆ ಪಾರ್ಕ್‌ಗಳು ಸರ್ವತೋಮು ಖವಾಗಿ ಅಭಿವೃದ್ಧಿ ಆಗಿದೆ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದ ಮೇಲೆ ಜನರು ಮುಂದಿನ ಅವಧಿ ಗೂ ಪ್ರೀತಮ್ ಗೌಡ ಅವರನ್ನು ಬೆಂಬಲಿಸುವ ನಿರೀಕ್ಷೆ ಹೆಚ್ಚಿದೆ ಎಂದರು.

ಈ ಬಾರಿ ಪ್ರಣಾಳಿಕೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಗಳಿಗೆ ವಾರ್ಷಿಕ ೩ ಗೃಹ ಬಳಕೆ ಸಿಲೆಂಡರ್ ಉಚಿತ ವಾಗಿ ನೀಡಲಾಗುವುದು , ಅಟಲ್ ಆಹಾ ರ ಕೇಂದ್ರ ಸ್ಥಾಪನೆಯೊಂದಿಗೆ ಬಿಪಿ ಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು ೫ ಕೆಜಿ ಅಕ್ಕಿ ಹಾ ಗೂ ಐದು ಕೆಜಿ ಸಿರಿ ಧಾನ್ಯವನ್ನು ನೀಡಲು ನಿರ್ಧರಿಸಲಾಗಿದೆ.

ಅಭಯ ಯೋಜನೆ ಮೂಲಕ ಉನ್ನತ ಮಟ್ಟದ ಸಮಿತಿಯ ಸಲಹೆ ಮೇರೆಗೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಾಗುವುದು. ಸರ್ವರಿಗೂ ಸೂರು ಯೋಜನೆಯಡಿ ವಸತಿರಹಿ ತರಿಗೆ ೧೦ ಲಕ್ಷ ವಸತಿ ನಿವೇಶ ನಗಳನ್ನು ಹಂಚಿಕೆ ಮಾಡಲಾಗು ವುದು ಅಕ್ಷರ ಯೋಜನೆಯಡಿ ವಿಶ್ವೇಶ್ವರ ವಿದ್ಯಾ ಯೋಜನೆ ಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು.
ಆರೋಗ್ಯ ಯೋಜನೆಯಡಿ ಮಿಷನ್ ಸ್ವಾಸ್ಥ್ಯ ಕರ್ನಾಟಕ ಮೂಲಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ.
ಕರ್ನಾಟಕ ಎಪಿಎಂಸಿಗಳ ಆಧುನಿಕರಣ ಮತ್ತು ಡಿಜಿಟಲೀ ಕರಣ, ಐದು ಹೊಸ ಕೃಷಿ ಆಧಾ ರಿತ ಕೈಗಾರಿಕಾ ಕ್ಲಸ್ಟರ್ , ಮೂರು ಹೊಸ ಆಹಾರ ಸಂಸ್ಕರಣಾ ಪಾರ್ಕ ನ್ನು ಸ್ಥಾಪನೆ ಮಾಡಲಾಗುವುದು.

ರಾಜ್ಯದಲ್ಲಿ ನಂಬರ್ .೧ ಅತ್ಯಾಧುನಿಕ ಮೂಲ ಸೌಕರ್ಯ ಉಳ್ಳ ಪ್ರವಾಸಿ ತಾಣಗಳನ್ನಾಗಿಸಲು ಕಲ್ಯಾಣ ಸರ್ಕ್ಯೂಟ್ ಸೇರಿದಂತೆ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ವಿಸ್ತರಿಸ ಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಕರ್ನಾಟಕ ರಾಜ್ಯವನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ ಅದರಂತೆ ಮುಂದಿನ ಚುನಾವಣೆ ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಕುಮಾರ್ , ಹೇಮಂತ್ ಕುಮಾರ್, ವೇದಾವತಿ, ಗಂಗಾಧರ್ ಇದ್ದರು.

See also  ಚಿಕ್ಕಮಗಳೂರು: ಪರಿಹಾರ ಧನವನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು