ಹಾಸನ: ಹಾಸನ ಜಿಲ್ಲೆಯ ಚೆಲುವನಹಳ್ಳಿ ಗ್ರಾಮದಲ್ಲಿ ಬುಧವಾರ ಭೂಮಾಲೀಕರೊಬ್ಬರ ಕಪಿಮುಷ್ಠಿಲ್ಲಿದ್ದ 18 ಬಂಧಿತ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಮುನೇಶ್ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ನಿರ್ಗತಿಕರನ್ನು ಉತ್ತಮ ಕೆಲಸ ಮತ್ತು ಸೌಲಭ್ಯದ ಆಮಿಷ ನೀಡಿ ಕರೆತಂದು ಜೀತದಾಳುಗಳಾಗಿ ಪರಿವರ್ತಿಸುತ್ತಿದ್ದ.
ಮುನೇಶ್ ಅವರನ್ನೆಲ್ಲ ಪ್ರತಿದಿನ ತನ್ನ ಜಮೀನಿನಲ್ಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ. ಕೆಲಸದ ಬಳಿಕ ಅವರನ್ನು ಮತ್ತೆ ತೋಟದ ಮನೆಗೆ ಕರೆದೊಯ್ದು ಬೀಗ ಹಾಕುತ್ತಿದ್ದ. ಅಲ್ಲದೆ ಸಂತ್ರಸ್ತರಿಗೆ ಸರಿಯಾದ ಆಹಾರ ನೀಡುತ್ತಿರಲಿಲ್ಲ. ಅಲ್ಲದೆ ಫಾರ್ಮ್ಹೌಸ್ನಿಂದ ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಸಂತ್ರಸ್ತರಿಗೆ ಬಟ್ಟೆ ಹಾಗೂ ಸ್ನಾನಕ್ಕೆ ನೀರು ನೀಡುತ್ತಿರಲಿಲ್ಲ.
ಈ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ತೋಟದ ಮನೆ ಮೇಲೆ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಆರೋಪಿಯನ್ನು ಈ ಹಿಂದೆಯೂ ಮೂರು ಬಾರಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈತನನ್ನು ಬಂಧಿಸಿರುವುದು ಇದು ನಾಲ್ಕನೇ ಬಾರಿ ಎಂದು ಪೊಲೀಸರು ತಿಳಿಸಿದ್ದಾರೆ.