ಹಾಸನ: ಅರಸೀಕೆರೆ ಪುರಾಣ ಪ್ರಸಿದ್ಧ ೧೨ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಹೊಯ್ಸಳರ ಶೈಲಿಯ ಚಂದ್ರಮೌಳೇಶ್ವರ ದೇವಾಲಯ ಪಟ್ಟಣದ ಈಶಾನ್ಯ ಮೂಲೆಯಲ್ಲಿ ನೆಲೆಸಿರುವ ಚಂದ್ರಮೌಳೇಶ್ವರ ದೇವಾಲಯಕ್ಕೆ ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪಟ್ಟಣದ ದೇವಾಲಯವು ಹುಳಿಯೋರ್ ಮಾರ್ಗವಾಗಿ ಪ್ರವಾಸಿಗರು ಆಗಮಿಸುತ್ತಿರುವುದು ವಿಶೇಷವಾಗಿದೆ.
ಸಂಜೆ ಆದರೆ ಪ್ರವಾಸಿಗರು ಆಗಮಿಸುತ್ತಿದ್ದು ಹೊಯ್ಸಳರ ಶೈಲಿಯ ದೇವಾಲಯ ವೀಕ್ಷಿಸಲು ವಿದ್ಯುತ್ ಐ ಮಸ್ಕ್ ವ್ಯವಸ್ಥೆ ಇಲ್ಲದಿರುವುದು ಪ್ರವಾಸಿಗರಿಗೆ ಹೊಯ್ಸಳರ ಶೈಲಿಯ ದೇವಾಲಯ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ನಗರಸಭಾ ವ್ಯಾಪ್ತಿಯಲ್ಲಿರುವ ಈ ಚಂದ್ರಮೌಳೇಶ್ವರ ದೇವಾಲಯ ಐ ಮಾಸ್ಕ ವಿದ್ಯುತ್ ಅಳವಡಿಸಿದರೆ ಪ್ರವಾಸಿಗರಿಗೆ ಹಾಗೂ ಭಕ್ತರುಗಳಿಗೆ ಅನುಕೂಲವಾಗುವುದು ನಗರ ಸಭೆ ಅಧ್ಯಕ್ಷ ಗಿರೀಶ್ ಜವಾಬ್ದಾರಿ ತೆಗೆದುಕೊಂಡು ವಿದ್ಯುತ್ ಕಂಬ ಅಳವಡಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಪ್ರವಾಸಿಗರ ಮತ್ತು ಸ್ಥಳೀಯರ ಮಾತು.