News Kannada
Sunday, June 04 2023
ಹಾಸನ

ಹಾಸನ: ಸಿಇಐಆರ್ ಪೋರ್ಟಲ್‌ನಿಂದ 148 ಮೊಬೈಲ್ ಪತ್ತೆ, ವಾರಸುದಾರರಿಗೆ ಹಸ್ತಾಂತರ

148 mobile phones found from CEIR portal, handed over to heirs
Photo Credit : News Kannada

ಹಾಸನ: ಸಿಇಐಆರ್ ಪೋರ್ಟಲ್ ಮೂಲಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸುಮಾರು 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.

ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಪೋರ್ಟಲ್ ಉದ್ಘಾಟ ನೆಯಾದ ದಿನಾಂಕದಿಂದ ಇಲ್ಲಿಯ ವರೆಗೆ ವಿವಿಧ ಠಾಣೆಯಲ್ಲಿ ಸಾರ್ವ ಜನಿಕರಿಂದ 1418 ಮೊಬೈಲ್‌ಗಳ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿದೆ.ಇವುಗಳಲ್ಲಿ ಇಲ್ಲಿಯವರೆಗೆ ಒಟ್ಟು ೧೪೮ ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.

ಕಳೆದ ಏಪ್ರಿಲ್ ನಲ್ಲಿ 25 ಮೊಬೈಲ್‌ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಗಿದ್ದು ಇದೀಗ ನೂರಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪೋರ್ಟಲ್ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ಗಳನ್ನು ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ನೆರೆ ಜಿಲ್ಲೆಗಳಿಂದ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದರು. ವಶಪಡಿಸಿಕೊಂಡ ಮೊಬೈಲ್‌ಗಳ ಪೈಕಿ ವಿವೋ ಕಂಪನಿಯ 74, ಸ್ಯಾಮ್ಸಂಗ್ 25 , ರೆಡ್ಮಿ33, ಒನ್ ಪ್ಲಸ್ 11, ಹಾನರ್ ಎರಡು , ನೋಕಿಯಾ 3 ಮೊಬೈಲ್ ಗಳಾಗಿವೆ.

ಪೋರ್ಟಲ್ ಮೂಲಕ ದಾಖಲಾದ ದೂರುಗಾಳ ಪೈಕಿ 123 ಮೊಬೈಲ್ ಗಳ ಮಾಹಿತಿ ಇದ್ದು ಇವುಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚುವ ಕಾರ್ಯವನ್ನು ಮಾಡಿದ್ದೇವೆ ಎಂದು ಹೇಳಿದರು.

ಪೋರ್ಟಲ್ ನಲ್ಲಿ ದಾಖ ಲಾದ ಬಹುತೇಕ ಪ್ರಕರಣಗಳು ಕಳವಾಗಿರುವುದು ಹಾಗೂ ಸಾರ್ವ ಜನಿಕರೇ ಕಳೆದುಕೊಂಡಿರುವು ದಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಅಂದರೆ, ಕಳ್ಳತನ ಮಾಡುವ ಗುಂಪು ( ನೆಟ್ವರ್ಕ್) ಮೂಲಕ ಕಾರ್ಯನಿರ್ವಹಿಸುತ್ತಿದ್ದರೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಹಚ್ಚಲಾಗುವುದು ಆದರೆ ಇದುವರೆಗೂ ದಾಖಲಾಗಿರುವ ದೂರುಗಳಲ್ಲಿ ಅಂತಹ ಯಾವುದೇ ಅಂಶಗಳು ಇಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈ ಪೋರ್ಟಲ್ ಮೂಲಕ ಮೊಬೈಲ್ ಗಳನ್ನು ಪತ್ತೆ ಹಚ್ಚುವ ಕಾರ್ಯ ತ್ವರಿತಗತಿಯಲ್ಲಿ ಆಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಎಸ್ಪಿ ಮನವಿ ಮಾಡಿದರು. ನೆರೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ಪತ್ತೆಯಾದಾಗ ನಿರ್ದಿಷ್ಟ ಠಾಣೆ ಯಿಂದ ಸಿಬ್ಬಂದಿಗಳನ್ನು ಕಳುಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿ ಸಲಾಗುತ್ತಿದೆ ಎಂದು ತಿಳಿಸಿದರು.

ಇತ್ತೀಚಿಗೆ ನಗರದ ಮಸೀ ದಿಯಲ್ಲಿ ಕಂಪ್ಯೂಟರ್ ಹಾಗೂ ಕ್ಯಾಮೆರಾ ಕಳ್ಳತನ ಪ್ರಕರಣ ಸಂಬಂಧ ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗಿದ್ದು ಆದಷ್ಟು ಶೀಘ್ರ ವಾಗಿ ಪ್ರಕರಣ ಪತ್ತೆಹಚ್ಚಲಾಗು ವುದು ಎಂದು ಹೇಳಿದರು.

ಮೊಬೈಲ್ ಕಳೆದರೆ ಇಷ್ಟು ಮಾಡಿ: ಗೂಗಲ್ ಪ್ಲೇ ಸ್ಟೋರ್ ಮೂಲಕ ಕೆಎಸ್ ಪಿ ಆಪ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿ ದೂರನ್ನು ವರದಿ ಮಾಡಿ ರಶೀದಿ ಪಡೆಯಬೇಕು , ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ ಪ್ರಸ್ತುತ ಕಳೆದು ಹೋದ ಮೊಬೈಲ್ ನಲ್ಲಿದ್ದ ಮೊಬೈಲ್ ನಂಬರ್ ನ ಡುಪ್ಲಿಕೇಟ್ ಸಿಮ್ ನಂಬರನ್ನು ಪಡೆದುಕೊಳ್ಳಬೇಕು ವಾಟ್ಸಪ್ ಮೂಲಕ 8277959500 ನಂಬರ್ಗೆ HI ಎಂದು ಮೆಸೇಜ್ ಕಳಿಸಿದರೆ ಒಂದು ಲಿಂಕ್ ಬರುತ್ತದೆ ನಂತರ ಈ ಲಿಂಕ ಅನ್ನು ತೆರೆದು ಅದರಲ್ಲಿನ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕು ಅಥವಾ ಸಾರ್ವಜನಿಕರು www.ceir.gov.in ಲಿಂಕ್ ನ ಸಹಾಯದಿಂದ ಸಿಇಐಆರ್ ಪೋರ್ಟಲ್ ಅನ್ನು ಓಪನ್ ಮಾಡಿ ಅದರಲ್ಲಿರುವ ಅವಶ್ಯಕ ಮಾಹಿತಿ ಯನ್ನು ಭರ್ತಿ ಮಾಡಿ ದೂರು ದಾಖಲಿಸಬಹುದು ಎಂದರು.

See also  ಬೇಲೂರು: ಚನ್ನಕೇಶವ ದೇವಾಲಯದಲ್ಲಿ ಹೇಳೋರಿಲ್ಲ... ಕೇಳೋರಿಲ್ಲ..!

ದೂರು ನೀಡುವ ಸಂದರ್ಭದಲ್ಲಿ ಮೊಬೈಲ್ ನ ಐಎಂಇಐ ನಂಬರ್ ಕಡ್ಡಾಯವಾಗಿದ್ದು ಒಂದು ವರ್ಷದ ಮೊಬೈಲ್ ಕಳವು ಅಥವಾ ಕಳೆದು ಹೋದ ಹಳೆಯ ಮೊಬೈಲ್‌ಗಳ ದೂರು ದಾಖಲಿಸಬ ಹುದಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು