ಹಾಸನ : ಕ್ಷುಲ್ಲಕ ಕಾರಣಕ್ಕೆ ತಮ್ಮನ ಮಗನನ್ನು ದೊಡ್ಡಪ್ಪ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಅರಸೀಕೆರೆ ತಾಲ್ಲೂಕಿನ ದುಮ್ಮೇನಹಳ್ಳಿ ಕಾಲೋನಿಯಲ್ಲಿ ನಡೆದಿದೆ.
ಯತೀಶ್ (೩೭) ಕೊಲೆ ಯಾದ ವ್ಯಕ್ತಿ. ಹನುಮಂತಯ್ಯ ತಮ್ಮನ ಮಗನನ್ನು ಕೊಲೆ ಮಾಡಿದ ದೊಡ್ಡಪ್ಪ. ಹನುಮಂತಯ್ಯ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಭಾನುವಾರ ರಾತ್ರಿ ಯತೀಶ ಮನೆಯ ಹೊರಗೆ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ ಚಾಕು ಹಿಡಿದು ಬಂದ ಹನುಮಂತಯ್ಯ, ನನಗೆ ಬೈಯುತ್ತಿದ್ದೀಯಾ ಎಂದು ಜಗಳ ತೆಗೆದು ಯತೀಶನಿಗೆ ಚಾಕುವಿನಿಂದ ಇರಿದಿದ್ದಾನೆ, ಇದರಿಂದ ತೀವ್ರ ವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಆರೋಪಿ ಹನು ಮಂತಯ್ಯನನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.