News Karnataka Kannada
Thursday, April 25 2024
ಹಾಸನ

ಹಾಸನ: ಶಿವಲಿಂಗೇಗೌಡರ ಸಚಿವ ಸ್ಥಾನದ ಆಸೆ ಈಡೇರುವುದೇ

Will ShivalingeGowda's ministerial wish be fulfilled
Photo Credit : News Kannada

ಹಾಸನ: ಅರಸೀಕೆರೆ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಂ.ಶಿವಲಿಂ ಗೇಗೌಡರಿಗೆ ಈ ನೂತನ ಸರ್ಕಾ ರದಲ್ಲಿ ಮಂತ್ರಿ ಸ್ಥಾನ ಸಿಗಲಿದೆ ಯೇ ಎಂಬ ಮಾತುಗಳು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚೆರ್ಚೆ ನಡೆಯುತ್ತಿದೆ.

ಅರಸೀಕೆರೆ ಕ್ಷೇತ್ರ ದ ಅಭಿ ವೃದ್ದಿ ಬಗ್ಗೆ ವಿಧಾನಸಭೆ ಅಧಿವೇ ಶನದಲ್ಲಿ ಮೇಜು ತಟ್ಟಿ ಆಗ್ರಹ ಮಾಡುತ್ತ ಯಾವುದೇ ಸರ್ಕಾರ ಇದ್ದರು ಕ್ಷೇತ್ರಕ್ಕೆ ಅನುದಾನ ತರುತ್ತಿದ್ದ ಶಿವಲಿಂಗೇಗೌಡರು ನಾಲ್ಕನೆ ಬಾರಿಗೆ ಶಾಸಕರಾಗಿದ್ದರು ಒಂದು ಬಾರಿಯೂ ಸಚಿವ ಸ್ಥಾನ ದೊರೆತಿಲ್ಲ.

ಬದಲಾದ ರಾಜಕೀಯ ಸನ್ನಿ ವೇಶದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರು ಚುನಾ ವಣೆ ಪ್ರಚಾರ ಸಭೆಯಲ್ಲು ಸಹ ಕಾಂಗ್ರೆಸ್ ನಾಯಕರನ್ನು ಉದ್ದೇ ಶಿಸಿ ಮಾತನಾಡುತ್ತ ” ದಶಕಗ ಳಿಂದ ರಾಜಕೀಯ ಮಾಡುತ್ತ ೬೫ ವರ್ಷ ಕಳೆದಿದ್ದೇನೆ ಕ್ಷೇತ್ರದ ಜನರ ಆಶಯದಂತೆ ಮತ್ತು ಅಭಿವೃದ್ಧಿ ಗೆ ಈ ಬಾರಿಯ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು.

ಆರ್ಯ ಈಡಿಗ ಸಮಾಜ ಒತ್ತಾಯ: ಶಾಸಕ ಶಿವಲಿಂಗೇಗೌಡರು ಹಿಂದಿನಿಂದಲೂ ಕ್ಷೇತ್ರದ ಅಭಿವೃ ದ್ಧಿಗೆ ಆದ್ಯತೆ ನೀಡುತ್ತ ಬಂದಿ ದ್ದಾರೆ, ಸಕಲ ಜಾತಿ, ಸಮು ದಾಯಗಳನ್ನು ಸಮಾನತೆಯಿಂದ ನಡೆಸಿಕೊಳ್ಳುತ್ತಿದ್ದಾರೆ, ೧೫ ವರ್ಷಗಳಿಂದ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ, ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಿಲ್ಲೆಯಲ್ಲಿ ಕಾಂಗ್ರೆ ಸ್ ಅಭ್ಯರ್ಥಿ ಗೆಲುವಿಗೆ ಅನು ಕೂಲವಾಗಲು ಅವರಿಗೆ ಸಚಿವ ಸ್ಥಾನ ನೀಡಬೇಕು? ಎಂದು ಅರಸೀಕೆರೆ ತಾಲ್ಲೂಕು ಘಟಕದ ಆರ್ಯ ಈಡಿಗ ಸಮುದಾಯ ಮನವಿ ಮಾಡಿದೆ.

ಮೆಲೆನಾಡಿಗರಿಂದಲೂ ಬೇಡಿಕೆ: ಅತಿ ಹೆಚ್ಚು ಅರಣ್ಯ ಹಾಗೂ ಕಾಡುಪ್ರಾಣಿ ಮಾನವ ಸಂಘ ರ್ಷದ ಸಮಸ್ಯೆ ಇರುವ ಜಿಲ್ಲೆಯವರಾದ, ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರನ್ನು ಅರಣ್ಯ ಮಂತ್ರಿಗಳನ್ನಾಗಿ ಮಾಡಿ, ಹಾಸನ ಜಿಲ್ಲೆಗೆ ಪ್ರಾತಿನಿಧ್ಯ ನೀಡಿದ ಹಾಗೆ ಆಗುತ್ತದೆ.ತಮ್ಮ ಕ್ಷೇತ್ರದ ಬಹು ದೊಡ್ಡ ಸಮಸ್ಯೆಯಾಗಿರುವ ಕಾಡಾನೆ ಮಾನವ ಸಂಘರ್ಷ ನಾವು ಪರಿಹರಿಸಿಕೊಳ್ಳದೆ ಬಿಡುವುದಿಲ್ಲ.
ಅರಣ್ಯ ಪರಿಸರ ಕಾಡು ಪ್ರಾ ಣಿಗಳ ಬಗ್ಗೆ ಕಾಳಜಿ ಇಲ್ಲದವರು, ಸಂಬಂಧವಿಲ್ಲದವರು, ವರ್ಷಕ್ಕೆ ನಾಲ್ಕು ಜನ ಅರಣ್ಯ ಸಚಿವ ರಾದರು ಕಳೆದ ಸರ್ಕಾರದಲ್ಲಿ, ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಕರ್ತವ್ಯ ನಿರ್ವಹಿಸಿ, ಉತ್ತರ ಕರ್ನಾಟಕದ ಗಣಿಯ ಮೇಲೆ ಕಣ್ಣಿಟ್ಟು ಹಣ ಮಾಡಿ ಕೊಂಡು ಹೋಗುತ್ತಿದ್ದಾರೆ. ಆದ್ದ ರಿಂದ ಸ್ಥಳಿಯರಾದ ಶಿವಲಿಂಗೇ ಗೌಡರಿಗೆ ಸಚಿವ ಸ್ಥಾನ ನೀಡು ವಂತೆ ಕೆಪಿಸಿಸಿ ಸದಸ್ಯರಾದ ಸಕ ಲೇಶಪುರದ ಯಡೇಹಳ್ಳಿ ಆರ್ ಮಂಜುನಾಥ್ ಮನವಿ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ: ಶಿವಲಿಂಗೇಗೌಡರು ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತ ಅರಸೀಕೆರೆ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದೇನೆ ನಂತರದ ಬೆಳವಣಿಗೆಯಾಗಿ ಎಲ್ಲಾ ಸರ್ಕಾರ ರಚನೆ ವೇಳೆ ನಡೆಯುವ ಸಚಿವ ಸಂಪುಟ ರಚನೆ ಪ್ರಕ್ರಿಯೆ ಇಲ್ಲಿಯೂ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ನಂತರವಷ್ಟೆ ಖಾತೆಯ ಬಗ್ಗೆ ಮಾತಾಡುತ್ತೇನೆ ಎಂದರು. ಹಾಸನ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆಯೂ ಮನವಿ ಮಾಡಿದ್ದು ಸಾಂಧರ್ಭಿಕವಾಗಿ ಯಾವ ಸ್ಥಾನ ನೀಡುವರು ಕಾದು ನೋಡಬೇಕಿದೆ. ಎಲ್ಲವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದ್ದಾರೆ.

ರೇವಣ್ಣರಿಂದ ತಡೆ ಸಾಧ್ಯತೆ ಜೆಡಿಎಸ್ ನಾಯಕರಿಗೆ ಸೆಡ್ಡುಹೊಡೆದು ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡರು ಅರಸೀಕೆರೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ..ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಅವರಿಗೆ ಮುಂದೆ ಸಚಿವ ಸ್ಥಾನ ದೊರೆಯುವ ಎಲ್ಲಾ ಬೆಳವಣಿಗೆಯ ನಡುವೆ ಜೆಡಿಎಸ್ ಪಕ್ಷದ ನಾಯಕರಾದ ಮಾಜಿ ಸಚಿವರಾದ ಎಚ್.ಡಿ ರೇವಣ್ಣ ಸಿದ್ದರಾಮಯ್ಯ ಅವರ ಪರಮಾಪ್ತರು ಆಗಿದ್ದು ರಾಜಕೀಯ ದ್ವೇಷದ ಕಾರಣ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡದಂತೆ ಒತ್ತಡ ಹಾಕುವರೆ ಎಂಬ ವಾದವು ಜಿಲ್ಲಾ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಸಿದ್ದರಾಮಯ್ಯ ಅವರ ಆಹ್ವಾನದ ಮೇಲೆಯೇ ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡರು ಇದೀಗ ಇದೇ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿಗೆ ತೆರಳಿ ತಮ್ಮ ಮನದಾಳದ ಮಾತನ್ನು ಹೇಳಿದ್ದು ಸಚಿವ ಸ್ಥಾನ ಕೊಡಲು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೂ ಕೂಡ ಅರಸೀಕೆರೆ ಚುನಾವಣೆ ಪ್ರಚಾರದ ಮೇಳೆ ಮೂರು ಬಾರಿ ಶಿವಲಿಂಗೇಗೌಡರನ್ನು ಶಾಸಕರಾಗಿ ಮಾಡಿದ್ದೀರಿ ಸಚಿವರಾಗಿ ಅಧಿಕಾರ ನಡೆಸಲು ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಆದರೆ ಜಿಲ್ಲೆಯಲ್ಲಿ ತಮ್ಮದೇಯಾದ ಹಿಡಿತವನ್ನು ಹೊಂದಿರುವ ರೇವಣ್ಣ ಅವರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ದೊರೆಯುವುದನ್ನು ತಡೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಒತ್ತಡ ಹಾಕುವ ಎಲ್ಲಾ ಸಾದ್ಯತೆಯೂ ಇದೆ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು