News Karnataka Kannada
Tuesday, April 23 2024
Cricket
ಹಾಸನ

ಸಿಬ್ಬಂದಿ ಹಣದ ಬೇಡಿಕೆ ಇಟ್ಟರೆ ದೂರು ನೀಡಿ: ದಂಡಾಧಿಕಾರಿ ಮಮತಾ

If staff demands money, lodge a complaint: Magistrate Mamatha
Photo Credit : News Kannada

ಬೇಲೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಹಣದ ಬೇಡಿಕೆ ಇಟ್ಟರೆ ನನ್ನನು ನೇರವಾಗಿ ಸಂಪರ್ಕಿಸಿ ದೂರು ನೀಡಬಹುದು ಎಂದು ತಾಲ್ಲೂಕು ದಂಡಾಧಿಕಾರಿ ಮಮತ ಎಂ ಹೇಳಿದರು.

ಬಸವೇಶ್ವರ್ ವೃತ್ತದ ಬಳಿ ಇರುವ ಹಳೆ ತಾಲ್ಲೂಕು ಕಚೇರಿ ಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಪಿಂಚಣಿ ಅದಾಲಾತ್ ಕಾರ್ಯಕ್ರಮದಲ್ಲಿ ಸಸಿಗೆ ನೀರನ್ನು ಹಾಕುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಪಿಂಚಣಿ ಯೋಜನೆ ಕಾರ್ಯಕ್ರಮವನ್ನು ತಾಲ್ಲೂಕ್ಕಿನ ಆಯಾ ರಾಜಸ್ವ ಕಚೇರಿಯ ವೃತ್ತಗಳಲ್ಲಿ ಆಯೋಜನೆ ಮಾಡಿಕೊಳ್ಳಲಾಗಿದ್ದು ಪಿಂಚಣಿ ಯಿಂದ ಸಣ್ಣ ಪುಟ್ಟ ಬಡ ರೈತರು ತಮ್ಮ ಭೂಮಿ, ಊರಿನ ಸ್ಮಶಾನ, ಇನ್ನಿತರ ಸಮಸ್ಯೆಗಳನ್ನು ಬೇಗ ತಿಳಿದುಕೊಳ್ಳಲು ಅನುಕೂಲವಾಗುತ್ತದೆ, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ದಲ್ಲಾಳಿಗಳ ಹಾವಳಿಗೆ ಸಿಲುಕಿ ಅನುಭವವಿಲ್ಲದೆ ತಮ್ಮ ಸುಲಭದ ಕೆಲಸಕ್ಕೆ ಸಾಕಷ್ಟು ಹಣವನ್ನು ನೀಡಿ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ.

ಕೆಲವರು ದಾಖಲೆಗಳು ಸರಿ ಇದ್ದರೂ ಸರಿ ಇಲ್ಲವೆಂದು ಸುಳ್ಳು ಹಣವನ್ನು ಪಡೆದು ಕೆಲಸವನು ಮಾಡಿಕೊಡದೆ ದಿನಗಳನ್ನು ಕಳೆಯುತ್ತಾರೆ. ಇದರಿಂದ ಸಂಬಂಧ ಪಟ್ಟ ವ್ಯಕ್ತಿಗಳ ಕೆಲಸ ವಿಳಂಬವಾಗಿ ಮನೆಯಲ್ಲಿ ಸಮಸ್ಯೆ ಸುಳಿಗೆ ಸಿಲುಕುತ್ತಾರೆ, ಆದ್ದರಿಂದ ಯಾರು ದಲ್ಲಾಳಿಗಳ ಮಾತಿಗೆ ಮರುಳಾಗದೆ ನೇರವಾಗಿ ಕಚೇರಿಗೆ ಬಂದು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಒಳ್ಳೆಯದು, ಕೆಲ ಸಮಯದಲ್ಲಿ ಸಿಬ್ಬಂದಿಗಳು ಹಣದ ಬೇಡಿಕೆ ಇಟ್ಟರೆ ನೇರವಾಗಿ ನನ್ನ ಬಳಿಯೇ ಬಂದು ದೂರನ್ನು ನೀಡಬಹುದು, ಯಾರು ಅಂಜಿಕೆ ಮಾಡಿಕೊಳ್ಳಬಾರದು, ಅಧಿಕಾರಿ ಗಳು ಇರುವುದು ಸಾರ್ವಜನಿಕರ ಕೆಲಸ ಮಾಡಿಕೊಡಲು ಅದಕ್ಕೆ ಸರ್ಕಾರ ತಮ್ಮ ಕೆಲಸಕ್ಕೆ ಸಮನಾಗಿ ಸಂಬಳವನ್ನು ನೀಡುತ್ತಿದೆ.

ಈ ಮೊದಲು ಬಿಕ್ಕೊಡು ಭಾಗಗಳಲ್ಲಿ ಪಿಂಚಣಿ ಅದಾಲಾತ್ ನಡೆಸಿದ್ದು ಈಗ ಎಲ್ಲಾ ಕೇಂದ್ರಗಳಲ್ಲೂ ನಡೆಸಲಾಗುತ್ತಿದೆ ಕಾರಣ ಸಾರ್ವಜನಿಕರ ಕೆಲಸ ವಿಳಂಬವಾಗಬಾರದು ಎಂಬು ದೇ ಕಾರ್ಯಕ್ರಮದ ಗುರಿ ಎಂದರು.

ಉಪ ತಹ ಸೀಲ್ದಾರ್ ಅಶೋ ಕ್, ಶಿರಸ್ತೇದಾರ್ ಮಂಜುನಾಥ್, ರಾಜಸ್ವ ನೀರಿಕ್ಷಕ ಪ್ರಕಾಶ್, ಪುರಸಭೆ ಕಂದಾಯ ಅಧಿಕಾರಿ ಪ್ರಶಾಂತ್, ತಾಲ್ಲೂಕು ಕಛೇರಿ ಕಂದಾಯ ಅಧಿಕಾರಿ ಹನುಮಂತ್, ತಾಲ್ಲೂಕು ಕಛೇರಿ ಸಿಬ್ಬಂದಿಗಳಾದ ದೇವರಾಜ್, ಹಾಗೂ ಪಿಂಚಣಿ ಸೌಲಭ್ಯ ಪಡೆಯಲು ಬಂದಿದ್ದ ಪನಾನುಭವಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು