News Karnataka Kannada
Saturday, April 20 2024
Cricket
ಹಾಸನ

ಶಿರಾದಲ್ಲಿ ಕಾಣೆಯಾದ ಅಪ್ರಾಪ್ತ ಬಾಲಕ-ಬಾಲಕಿಯರು ಹಾಸನದಲ್ಲಿ ಪತ್ತೆ

Minor boys and girls missing in Sira found in Hassan
Photo Credit : News Kannada

ಹಾಸನ: ಇತರೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ಕಾಣೆಯಾಗಿದ್ದ ನಾಲ್ಕು ಜನ ಅಪ್ರಾಪ್ತ ಬಾಲಕ – ಬಾಲಕಿಯರನ್ನು ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ.

ಮೇ. ೨೦ ರಂದು ತುಮಕೂರು ಜಿಲ್ಲೆಯ ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಪಟ್ಟನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಬಾರಿಗೆ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದರು. ಮಂಜೂಳಾ (೧೩) ವರ್ಷ, ಭಾನು(೧೩), ಚಿಕ್ಕಬಾಣಗೆರೆ ಗ್ರಾಮದಿಂದ ಮಧುಕುಮಾರ(೧೩), ಮಹಾಲಕ್ಷ್ಮಿ (೧೫) ವರ್ಷ ಈ ನಾಲ್ಕು ಜನ ಮಕ್ಕಳು ಒಂದೆ ಬಾರಿಗೆ  ಕಾಣೆಯಾಗಿದ್ದು, ಈ ಬಗ್ಗೆ ಪಟ್ಟನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಒಂದೇ ಗ್ರಾಮದಿಂದ ನಾಲ್ವರು ಮಕ್ಕಳು ಕಾಣೆಯಾದ ಬಗ್ಗೆ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ ದ್ದರು. ಮಕ್ಕಳನ್ನು ಪತ್ತೆ ಮಾಡಿಕೊಂಡು ಬರುವಂತೆ ಠಾಣಾ ಪಿಎಸ್‌ಐ ಪ್ರವೀಣಕುಮಾರ್ ಹಾಗೂ ಸಿಬ್ಬಂದಿಗಳು ಹುಡುಕಾಟದಲ್ಲಿದ್ದರು. ಬಡಾವಣಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಜನಸಂದಣಿ ಪ್ರದೇಶ, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳ ಕಡೆ ಗಸ್ತು ಮಾಡಿ ಈ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಿ ತಪಾಸಣೆ ಮಾಡುತ್ತಿರುವಾಗ ಮಧ್ಯಾಹ್ನ ಸುಮಾರು ೩ ಗಂಟೆ ಸಮಯದಲ್ಲಿ. ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್ ಪ್ಲಾಟ್ ಫಾರಂನಲ್ಲಿ ಅನುಮಾನಾಸ್ಪದ ಹಾಗೂ ಪೋಟೊದ ಚಹರೆ ಹೋಲುವ ಮಕ್ಕಳು ಇರುವುದು ಕಂಡು ಬಂದಿತು. ಮಕ್ಕಳನ್ನು ವಿಚಾರಿಸಿದಾಗ ಕಾಣೆಯಾಗಿರುವ ಸತ್ಯಾಂಶಗಳು ಹೊರ ಬಂದಿತು. ಒಂದೆ ಬಾರಿಗೆ ನಾಲ್ಕು ಮಕ್ಕಳು ಏತಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎನ್ನುವ ಬಗ್ಗೆ ಕಾರಣಗಳು ಹೊರ ಬಂದಿರುವುದಿಲ್ಲ. ಒಟ್ಟಾರೆ ಆತಂಕ ಗೊಂಡಿದ್ದ ಈ ಮಕ್ಕಳ ಪೋಷಕರು ಪತ್ತೆಯಾಗಿರುವ ಬಗ್ಗೆ ವಿಚಾರ ತಿಳಿದು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು