ಬೇಲೂರು: ವಿಶ್ವ ಪರಿಸರ ದಿನದ ಅಂಗವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಹಿಮೆಟ್ಟಿಸುವ ಘೋಷನೆಯೊಂದಿಗೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ಇಂದು ಪುರಸಭೆ ವ್ಯಾಪ್ತಿಗೆ ಬರುವ ದಿನಸಿ, ಪ್ಲಾಸ್ಟಿಕ್, ತರಕಾರಿ, ಹಣ್ಣು, ಹೂವು, ಇನ್ನು ಮುಂತಾದ ಅಂಗಡಿಗಳಲ್ಲಿ ಇನ್ನು ಪ್ಲಾಸ್ಟಿಕ್ ಬಳಕೆ ರಾಜಾರೋಷವಾಗಿ ನಡೆಯುತ್ತಿದೆ, ಅಂತಹ ಅಂಗಡಿಗಳಿಗೆ ಪುರಸಭೆ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಅಲ್ಲಿದ್ದ ಪ್ಲಾಸ್ಟಿಕ್ ಕವರ್, ಚೀಲಗಳನ್ನು ನಮ್ಮ ವಶಕ್ಕೆ ಪಡೆದುಕೊಂಡಿದ್ದೇವೆ, ಬೇಲೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕೆಂದೆ ನಮ್ಮ ಗುರಿ.
ಸರ್ಕಾರದ ಆದೇಶವು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಬೇಕೆಂದು ಹಲವಾರು ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಎಂಥಹ ಪರಿಣಾಮ ಬೀರುತ್ತದೆ ಎಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೂ ಕೆಲ ಅಂಗಡಿ ಮಾಲೀಕರು ರಾಜಾರೋಷವಾಗಿ ಬಳಕೆ ಹಾಗೂ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
ಅದನ್ನು ಮನಗಂಡು ನಮ್ಮ ಪುರಸಭೆ ಅಧಿಕಾರಿಗಳ ಜೊತೆ ಅಂಗಡಿಗಳಿಗೆ ದಾಳಿ ಮಾಡಿ ಅಲ್ಲಿದ್ದ ಪ್ಲಾಸ್ಟಿಕ್ ಬ್ಯಾಗುಗಳನ್ನು ವಶಪಡಿಸಿಕೊಂಡಿದ್ದು, ಮುಂದೆ ಮತ್ತೆ ಬಳಕೆ ಮಾಡಿದರೆ 2000 ಕ್ಕೂ ಅಧಿಕ ದಂಡ ವಿಧಿಸಲಾಗುತ್ತದೆ, ಸಾರ್ವ ಜನಿಕರು ಇದಕ್ಕೆ ಸಹಕರಿಸಬೇಕು, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಮನೆಯಿಂದ ಬಟ್ಟೆ ಬ್ಯಾಗು ಗಳನ್ನು ತಂದರೆ ಬೇಲೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬಹುದು ಎಂದು ಹೇಳಿದರು, ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಗದೀಶ್, ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯಾಧಿಕಾರಿ ಲೋಹಿತ್, ಸಂಯೋಜನಾಧಿಕಾರಿ ಮದುಸೂದನ್, ಪೌರ ಕಾರ್ಮಿಕ ಶಿವಕುಮಾರ್ ಇತರರು ಇದ್ದರು